ಹೈದರಾಬಾದ್; ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಪ್ರಕರಣ ಹಲವಾರು ಗೊಂಡಲಗಳಿಗೆ ಕಾರಣವಾಗಿದೆ. ಇದೀಗ ಅವರ ಡೆತ್ ನೋಟ್ ಕೂಡ ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ.
ರೋಹಿತ್ ನೇಣು ಬಿಗಿದ ಸ್ಥಳದಲ್ಲೇ ಆತನ ಡೆತ್ನೋಟ್ ಸಿಕ್ಕಿದೆ. ಇದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆಯಲಾಗಿದ್ದರೂ, ಬರೆದು ಗೀಚಲಾದ ಅಕ್ಷರಗಳು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ರೋಹಿತ್ ತಾನು ಬರೆದ ಅಕ್ಷರಗಳಿಗೆ ಕಟ್ ಮಾರ್ಕ್ ಹಾಕಿ ಅದರ ಮುಂದೆ ನಾನೇ ಇದನ್ನು ಅಳಿಸಿ ಹಾಕಿದೆ ಎಂದು ಬರೆದುಕೊಂಡಿದ್ದೇನೆ. ಈ ಪತ್ರವನ್ನು ಫೋರೆನ್ಸಿಕ್ ಲ್ಯಾಬ್ಗೆ ಪರೀಕ್ಷೆಗೆಂದು ಕಳುಹಿಸಿಕೊಡಲಾಗಿದೆ.
ರೋಹಿತ್ ತನ್ನ ಸಂಘಟನೆಯಾದ ಅಂಬೇಡ್ಕರ್ ಸ್ಟುಡೆಂಟ್ಸ್ ಅಸೋಸಿಯೇಶನ್ ಮೇಲೆಯೇ ಬೇಸರಗೊಂಡಿದ್ದ, ಅದನ್ನೇ ಕಟ್ಮಾರ್ಕ್ನಲ್ಲಿ ಅಕ್ಷರಗಳಲ್ಲಿ ಬರೆದಿದ್ದ ಎಂದು ಹೇಳಲಾಗಿದೆ. ಅಲ್ಲದೇ ಆತ ಸಂಘಟನೆಯ ಬ್ಯಾನರ್ನ್ನೇ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿದ್ದಾನೆ.
ಸತ್ತು ಆರು ಗಂಟೆಗಳ ಬಳಿಕ ಆತನ ಮೃತದೇಹ ಪತ್ತೆಯಾಗಿದೆ. ಇಷ್ಟು ಗಂಟೆಯ ಅಂತರದ ಬಗ್ಗೆ ಇನ್ನೂ ಗುಮಾನಿಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.