ಮಂಗಳೂರು : ಬಿಜೈ ಕಾಪಿಕಾಡ್ 8ನೇ ಆಡ ರಸ್ತೆಯಲ್ಲಿರುವ ರಾಜು ಎಂಬವರ ಮನೆಗೆ ಸಂಪರ್ಕ ನೀಡಿದ ಪೈಪ್ ಹೊಡೆದು ಸುಮಾರು ಎರಡೂ ತಿಂಗಳಿನಿಂದ ನೀರು ಪೋಲಾಗುತ್ತಿದೆ.
ಈ ಮನೆಯವರು ಈ ರೀತಿ ನೀರು ಪೋಲಾಗುತ್ತಿರುವುದರಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ಸ್ಥಳೀಯ ಮನಪಾ ಸದಸ್ಯ ರಜನೀಶ್ ಅವರ ಗಮನಕ್ಕೆ ತಂದಿದ್ದು, ಅವರು ತಕ್ಷಣ ಈ ಮನೆಗೆ ೭ನೇ ಆಡ್ಡರಸ್ತೆ ಕಡೆಯಿಂದ ಹೊಸ ನಳ್ಳಿ ಜೋಡಣೆ ಮಾಡಿಕೊಟ್ಟಿದ್ದಾರೆ.
ಈ ನಳ್ಳಿ ಜೋಡಣೆ ಕೆಲಸವನ್ನು ಪಾಲಿಕೆ ಪೈಪ್ ಲೈನ್ ಕಾರ್ಯನಿರ್ವಾಹಿಸುತ್ತಿರುವ ಜಗದೀಶ್ ಅವರು ಮಾಡಿಕೊಟ್ಟಿದ್ದಾರೆ. ಆದರೆ ಜಗದೀಶ್ ಅವರು ೮ನೇ ಕ್ರಾಸ್ ರಸ್ತೆಯಲ್ಲಿರುವ ಪೈಪ್ ಲೈನ್ ಅನ್ನು ಬಂದ್ ಮಾಡದೇ ನಿರ್ಲಕ್ಷ್ಯ ವಹಿಸಿರುವುದರಿಂದ ಈಗ ಈ ಮನೆಗೆ ಎರಡೂ ಕಡೆಗಳಿಂದ ನೀರು ಸರಬರಾಜು ಆಗುತ್ತಿದೆ.
ಜೊತೆಗೆ ಒಡೆದು ಹೋದ ಪೈಪ್ನಿಂದ ನೀರು ಪೋಲಾಗುತ್ತಿದೆ. ಈ ಬಗ್ಗೆ ನಾನು ಈಗಾಗಲೇ ಇವರಿಬ್ಬರ ಗಮನಕ್ಕೆ ತಂದು ತಿಂಗಳಾಗುತ್ತಾ ಬಂತ್ತು. ಆದರೆ ಫಲಿತಾಂಶ ಮಾತ್ರ ಶೂನ್ಯ. ನಾಗರೀಕರಿಗೆ ಸರಿಯಾಗಿ ನೀರಿಲ್ಲ.. ಆದರೆ ಇಲ್ಲಿ ನೀರು ಪೋಲಾದರೂ ಕೇಳುವವರಿಲ್ಲ… ಇದು ಯಾರ ಜವಾಬ್ದಾರಿ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.