ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಹಾಗೂ ಸಾಧನಾ ಬಳಗ (ರಿ.) ಇವರ ಸಹಯೋಗದಲ್ಲಿ ದಿನಾಂಕ 10-1-2016 ಭಾನುವಾರದಂದು ಮಂಗಳೂರಿನ ಸಿ.ವಿ. ನಾಯಕ್ ಹಾಲ್ನಲ್ಲಿ ಮಧುರ ಕೊಂಕ್ಣಿ – 2016 ಎಂಬ ಕೊಂಕಣಿ ಭಾವ ಗೀತೆ, ಸಮೂಹ ನೃತ್ಯ ಹಾಗೂ ಕೊಂಕಣಿ ಬಾಲ ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೆ 4 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಹಾಂಗ್ಯೋ ಐಸ್ ಕ್ರೀಮ್ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್ ಜಿ.ಪೈ. ಉದ್ಘಾಟಿಸುತ್ತಾರೆ. ಪ್ರೇಮ್ನಾಥ್ ಎಸ್.ಕುಡ್ವ ಎಕ್ಸಿಕ್ಯೂಟಿವ್ ಡೈರೆಕ್ವರ್ ಮತ್ತು ಕೆನರಾ ಸ್ಪ್ರಿಂಗ್ಸ್ ಹಾಗೂ ಡಾ|| ಮೋಹನ್ ಪೈ ಕಸ್ತೂರಿ ಮುಖ್ಯ ಅತಿಥಿಗಳಾಗಿರುತ್ತಾರೆ. ಜಿ.ಎಸ್.ಬಿ. ಸೇವಾ ಸಂಘದ ಕಾರ್ಯದರ್ಶಿ ಎಂ.ನಾಗೇಶ್ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭದಲ್ಲಿ ಕೊಂಕಣಿ ಸಾಧಕರಾದ ಎಂ.ದಿನೇಶ್ ಪ್ರಭು, ರಂಗ ಭೂಮಿ ನಟ ಹಾಗೂ ಮರೋಳಿ ಸಬೀತಾ ಕಾಮತ್, ಸಾಮಾಜಿಕ ಕಾರ್ಯಕರ್ತೆ ಇವರನ್ನು ಸನ್ಮಾನಿಸಲಾಗುವುದು. ಹೊಸದಾಗಿ ರಚಿಸಿ ರಾಗ ಸಂಯೋಜಿಸಿದ ಕೊಂಕಣಿ ಭಾವಗೀತೆಗಳನ್ನು ಹಾಗೂ ಕೊಂಕಣಿ ಹಾಡಿಗೆ ಸಮೂಹ ನೃತ್ಯವನ್ನು ಬಳಗದ ಸದಸ್ಯರು ಪ್ರಸ್ತುತಪಡಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕದಾಂದ್ಯತ 25 ಪ್ರದರ್ಶನ ಪೂರೈಸಿದ, ಸಂಗೀತ, ಹಾಸ್ಯ ಹಾಗೂ ಸಾಮಾಜಿಕ ಸಂದೇಶ ಉಳ್ಳ ಸಾಧನಾ ಬಳಗದ ಹೆಮ್ಮೆಯ ಬಾಲ ನಾಟಕ ವಿಂದ್ರಾ ಪೀಲ್ ಪ್ರದರ್ಶನಗೊಳ್ಳುವುದು. ಹಾಗೂ ಮಧುರ ಕೊಂಕ್ಣಿ – 2016 ಈ ಕಾರ್ಯಕ್ರಮದಲ್ಲಿ ವಿಂದ್ರಾ ಪೀಲ್ ನಾಟಕದ ಸರ್ವ ಕಲಾವಿದರನ್ನು ಸನ್ಮಾನಿಸಲಾಗುವುದು. ಎಂದು ಸಾಧನ ಬಳಗದ ಕಾರ್ಯದರ್ಶಿ ಯು. ಪ್ರಕಾಶ್ ಶೆಣೈ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.