News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೋ ದೌರ್ಜನ್ಯ ತಡೆಗೆ ವಿನೂತನ ಅಭಿಯಾನ ಆರಂಭಿಸಿದ ತಂಡ

cowಧರ್ಮಶಾಲಾದಲ್ಲಿ Badmash Peepal ಎಂಬ ದೇಶಿ-ವಿದೇಶಿಯರನ್ನೊಳಗೊಂಡ ತಂಡವೊಂದು ಬೀದಿ ಬದಿಯ ಪ್ರಾಣಿಗಳಿಗೋಸ್ಕರವೇ ಕೇಂದ್ರವೊಂದನ್ನು ನಡೆಸುತ್ತಿದೆ. ಬೀದಿಯ ಪ್ರಾಣಿಗಳ ಬಗೆಗೆ ಜನರಿಗಿರುವ ಅಸಹ್ಯ ಮತ್ತು ಅಸಹನೀಯ ಭಾವವನ್ನು ತೊಡೆದು ಹಾಕಲೂ ಈ ತಂಡ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.

ಇದೀಗ ಇವರು ಅನಾಥ ಗೋವುಗಳ ಸಹಾಯಕ್ಕಾಗಿಯೇ ಒಂದು ವಿನೂತನ ಅಭಿಯಾನವನ್ನು ಆರಂಭಿಸಿದ್ದಾರೆ.

ಅನಾಥ ಗೋವುಗಳು ರೈತರ ಹೊಲ ಗದ್ದೆಗಳಿಗೆ ಹೊಟ್ಟೆ ಪಾಡಿಗೋಸ್ಕರ ನುಗ್ಗುತ್ತವೆ, ಆದರೆ ರೈತರು ಇವುಗಳನ್ನು ಕಲ್ಲು ಹೊಡೆದು, ಕೋಲಿನಿಂದ ಬಡಿದು ಓಡಿಸುತ್ತಾರೆ. ಹೀಗೆ ಕೈಕಾಲು ಮುರಿದುಕೊಂಡ ಎಷ್ಟೋ ದನಗಳು ಬೀದಿಯಲ್ಲಿ ಮೂಕವಾಗಿ ರೋಧಿಸುತ್ತಿರುತ್ತವೆ. ಆದರೆ ಇವುಗಳತ್ತ ಗಮನ ಕೊಡುವವರು ಯಾರೂ ಇರುವುದಿಲ್ಲ.

ಈ Badmash Peepal ತಂಡ ಇಂತಹ ಗೋವುಗಳಿಗೆ ಚಿಕಿತ್ಸೆಯನ್ನು ನೀಡುತ್ತದೆ, ಅವುಗಳ ಆರೈಕೆ ಮಾಡುತ್ತದೆ. ಇದೀಗ ಈ ತಂಡ ರೈತರ ಮನಸ್ಥಿಯನ್ನೇ ಬದಲಿಸುವ ವಿಭಿನ್ನವಾದ ಐಡಿಯಾವೊಂದನ್ನು ರೂಪಿಸಿದೆ.

ಅದೇನೆಂದರೆ ಗೋವುಗಳಿಗೆ ಸ್ವೆಟರ್ ತೊಡಿಸುವುದು! ಹೌದು ಗೋಣಿ ಚೀಲದಿಂದ ಗೋವಿಗೊಪ್ಪುವ ಸ್ವೆಟರ್‌ನ್ನು ತಯಾರಿಸಿ ಅದರಲ್ಲಿ ಗೋವುಗಳ ರಕ್ಷಕನೆಂದೇ ಹೆಸರು ಪಡೆದಿರುವ ಶ್ರೀಕೃಷ್ಣನ ಚಿತ್ರವನ್ನು ಬಿಡಿಸುವುದು. ಅಲ್ಲದೇ ‘ಈ ಗೋವು ನನ್ನದು’ ಎಂಬ ಘೋಷಣೆಯನ್ನು ಬರೆಯುವುದು.

ಗೋವಿನ ಮೇಲೆ ಕೃಷ್ಣನ ಚಿತ್ರವಿದೆ ಎಂದ ಮೇಲೆ ಅದಕ್ಕೆ ಯಾರಾದರು ಕಲ್ಲು ಹೊಡೆಯಲು, ದೊಣ್ಣೆಯಿಂದ ಬಡಿಯಲು ಸಾಧ್ಯವೇ? ಖಂಡಿತಾ ಇಲ್ಲ. ಸ್ವೆಟರ್‌ನಿಂದ ದೌರ್ಜನ್ಯವನ್ನೂ ತಡೆಯಬಹುದು, ಮಾತ್ರವಲ್ಲ ಈಶಾನ್ಯ ಭಾಗದ ಚಳಿಯಿಂದ ಗೋವುಗಳಿಗೆ ತುಸು ರಿಲ್ಯಾಕ್ಸ್ ಕೂಡ ದೊರೆಯುತ್ತದೆ.

ಪ್ರಾಣಿಗಳನ್ನು ಹೊಡೆಯುವುದು ಕಾನೂನಿನ ಪ್ರಕಾರ ಅನ್ಯಾಯ ಆದರೆ ಕಾನೂನನ್ನು ಗೌರವಿಸುವ ಜನರಿರುವುದು ಅಷ್ಟಕ್ಕಷ್ಟೇ. ಆದರೆ ಧರ್ಮ ಎಂಬುದು ಎಲ್ಲರನ್ನೂ ಕಟ್ಟಿ ಹಾಕುತ್ತದೆ, ತಪ್ಪು ಮಾಡುವುದರಿಂದ ತಡೆಯುತ್ತದೆ. ಇದನ್ನು Badmash Peepal ತಂಡ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top