ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ನಿಗ್ರಹಿಸುವ ಉದ್ದೇಶದಿಂದ ಜ.1ರಿಂದ 15 ದಿನಗಳ ಕಾಲ ಪರೀಕ್ಷಾರ್ಥವಾಗಿ ಸಮ-ಬೆಸ ನಿಯಮ ಜಾರಿಯಾಗಲಿದೆ. ಈ ನಿಯಮ ಭಾನುವಾರಗಳಂದು ಅನ್ವಸುವುದಿಲ್ಲ. ಇತರ ದಿನಗಳಂದು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಈ ನಿಯಮ ಅನ್ವಯವಾಗಲಿದ್ದು, ನಿಯಮ ಉಲ್ಲಂಘಿಸಿದಲ್ಲಿ 2000 ರೂ. ದಂಡ ವಿಧಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ತನ್ನ ಸಚಿವಾಲಯವೂ ಈ ನಿಯಮಕ್ಕೆ ಒಳಪಡಲಿದ್ದು, ತುರ್ತು ವೈದ್ಯಕೀಯ ಇಲಾಖೆಯು ಈ ನಿಯಕ್ಕೆ ಒಳಪಡುವುದಿಲ್ಲ. ಒಂಟಿ ಮಹಿಳಾ ಚಾಲಕಿಯರಿಗೆ ವಿನಾಯಿತಿ ನೀಡಲಾಗಿದ್ದು, 12 ವರ್ಷದೊಳಗಿನ ಮಕ್ಕಳು ಮಹಿಳಾ ಚಾಲಕರೊಂದಿಗೆ ಪ್ರಯಾಣಿಸಬಹುದು ಎಂದು ಈ ಸಂದರ್ಭ ಅವರು ಹೇಳಿದ್ದಾರೆ.
ಈ ಯೋಜನೆ ಜಾರಿಗೆ ಬಂದ ಬಳಿಕ ನಾಗರಿಕರ ಅನಾನುಕೂಲ ತಪ್ಪಿಸಲು ಸರ್ಕಾರ 4000-5000 ಹೆಚ್ಚುವರಿ ಬಸ್ಗಳನ್ನು ಆರಂಭಿಸಲಿದೆ. ಜೊತೆಗೆ ದೆಹಲಿ ನಿವಾಸಿಗಳಿಗೆ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾಗಳನ್ನು ಕಾಯ್ದಿರಿಸಲು ’Poocho’ ಎಂಬ ಕಾರ್ಪೂಲ್ ಆಪ್ ಬಿಡುಗಡೆ ಮಾಡಲಿದೆ.
ಧನಾತ್ಮಕ ಸಂದೇಶ ನೀಡುವ ಉದ್ದೇಶದಿಂದ ಜನರು ಸಹಕರಿಸುವಂತೆ ಕೋರಲಾಗಿದ್ದು, ಈ ನಿಯಮದಿಂದ ವಿನಾಯಿತಿ ಪಡೆದವರು ಆದಷ್ಟು ಮಟ್ಟಿಗೆ ನಿಯಮ ಪಾಲನೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಸಮ ಮತ್ತು ಬೆಸ ಸಂಖ್ಯೆಯ ಕಾರುಗಳಿಗೆ ಆಯಾ ದಿನಗಳಂದು ಮಾತ್ರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಪಾರ್ಕಿಂಗ್ ಅಟೆಂಡೆಂಟ್ಗಳಿಗೆ ಸೂಚಿಸಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.