ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಜನ್ಮ ತಾಳಿದ ಆರಂಭದಿಂದಲೂ ಹಿಂದೂರಾಷ್ಟ್ರದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಲೇ ಬಂದಿದೆ. ಈ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಲೇ ಇದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲಂತೂ ಆರ್ಎಸ್ಎಸ್ನ್ನು ಧಾರ್ಮಿಕತೆಯ ಮೇಲೆ ದೇಶವನ್ನು ವಿಭಜಿಸುವ ಸಂಸ್ಥೆ ಎಂದು ಬಿಂಬಿಸುವ ಹಲವಾರು ಪ್ರಯತ್ನಗಳು ನಡೆಯುತ್ತಲೇ ಇದೆ.
ಹಾಗಾದರೆ ಆರ್ಎಸ್ಎಸ್ ಪ್ರತಿಪಾದಿಸುತ್ತಿರುವ ಹಿಂದೂ ಮತ್ತು ಹಿಂದೂರಾಷ್ಟ್ರದ ವ್ಯಾಖ್ಯಾನ ಏನು? ಎಂಬುದಕ್ಕೆ ಆರ್ಎಸ್ಎಸ್ನ ಮುಸ್ಲಿಂ ಸದಸ್ಯರೊಬ್ಬರು ಅದ್ಭುತವಾಗಿ ಉತ್ತರಿಸಿದ್ದಾರೆ.
‘ಹಿಂದೂ ಎನ್ನುವುದು ಹಿಂದೂಸ್ಥಾನದಲ್ಲಿ ಹುಟ್ಟಿ, ಬೆಳೆದ ವ್ಯಕ್ತಿ. ಹಿಂದೂ ಎಂಬುದು ಧರ್ಮವಲ್ಲ, ಅದೊಂದು ಜೀವನ ಪದ್ಧತಿ. ನಾನು ಮುಸ್ಲಿಂ, ಇಸ್ಲಾಂನ್ನು ಪಾಲಿಸುತ್ತೇನೆ ಆದರೆ ನಾನು ಶ್ರೇಷ್ಠ ಪರಂಪರೆ, ಸಂಸ್ಕೃತಿ ಹೊಂದಿರುವ ಶ್ರೇಷ್ಠ ರಾಷ್ಟ್ರಕ್ಕೆ ಸೇರಿದವನು’ ಎಂದಿದ್ದಾರೆ.
ಒಂದು ಸಲ ದೆಹಲಿಯ ಶಾಹಿ ಇಮಾಮ್ ಬುಖಾರಿ ಮುಸ್ಲಿಂ ಸಮಾರಂಭದಲ್ಲಿ ಭಾಗವಹಿಸಲು ಇಂಡೋನೇಷ್ಯಾಗೆ ತೆರಳಿದರು, ಅಲ್ಲಿ ಅವರನ್ನು ಹಿಂದೂ ಎಂದು ಪರಿಚಯಿಸಲಾಯಿತು, ಇದಕ್ಕವರು ವಿರೋಧ ವ್ಯಕ್ತಪಡಿಸಿದರು. ಆದರೆ ಅಲ್ಲಿನ ವ್ಯಕ್ತಿ, ನಿಮ್ಮನ್ನು ಹಿಂದೂ ಎಂದು ಕರೆದರೆ ನೀವು ಮುಸ್ಲಿಂ ಅಲ್ಲ ಎಂದರ್ಥವಲ್ಲ, ನೀವು ಶ್ರೇಷ್ಠ ಹಿಂದೂಸ್ಥಾನದ ಭಾಗವಾದ್ದರಿಂದ ನಿಮ್ಮನ್ನು ಹಿಂದೂ ಎಂದು ಕರೆಯಲಾಗಿದೆ ಎಂದರು. ಇಮಾಮ್ ಅವರೂ ಅದನ್ನು ಕೊನೆಗೆ ಒಪ್ಪಿಕೊಂಡರು ಎಂದು ಅವರು ಹೇಳಿದ್ದಾರೆ.
ಶಾಹಿ ಇಮಾಮ್ ಬುಖಾರಿಗೆ ಏನೂ ಹೇಳಲಾಯಿತೋ ಅದನ್ನೇ ನಾವು ಪ್ರತಿಪಾದಿಸುತ್ತಿದ್ದೇವೆ, ಆರ್ಎಸ್ಎಸ್ ಒಂದು ಪಂಗಡಕ್ಕೆ ಸೇರಿದ್ದು, ಅಲ್ಪಸಂಖ್ಯಾತರ ವಿರೋಧಿ, ಹಿಂದೂಗಳಿಗೆ ಮಾತ್ರ ಸೀಮಿತ ಎಂಬುದನ್ನು ತೋರಿಸುವ ಹಲವಾರು ಪ್ರಯತ್ನಗಳು ನಡೆಯುತ್ತಿದೆ. ಆದರೆ ಇದು ನಿಜವಲ್ಲ ಎಂದು ಅವರು ಹೇಳಿದ್ದಾರೆ.
ವೀಡಿಯೋ ವೀಕ್ಷಿಸಿ :
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.