ಮಂಗಳೂರು : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಹಿಂದೆ ವಿವಾಹ ನಿರ್ಬಂಧಿಸಿರುವುದನ್ನು ಹೈಕೋರ್ಟ್ ರದ್ದುಗೊಳಿಸಿದೆ.
ದೇವಾಲಯಗಳಲ್ಲಿ ಮದುವೆಗೆ ಅವಕಾಶ ನೀಡುವುದರಿಂದ ಅಲ್ಲಿ ನಡೆಯುವ ಮದುವೆಯ ಕೈಂಕರ್ಯಕ್ಕೆ ಸಾಕಷ್ಟು ಸಮಯ ತಗಲುವುದರಿಂದ ಹೊರಗಿನಿಂದ ಆಗಮಿಸುವ ಭಕ್ತಾಧಿಗಳಿಗೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಗೆ 2010 ರಲ್ಲಿ ದೇವಾಲಯದ ಅಭಿವೃದ್ಧಿ ನಿರ್ಬಂಧ ಹೇರಿತ್ತು. ಆದರೆ ಬಳಿಕ ಹಾರ ಬದಲಾಯಿಸುವಲ್ಲಿ ಅವಕಾಶ ಕಲ್ಪಿಸಿತ್ತು.
ಈ ನಿರ್ಬಂಧ ವನ್ನು ಪ್ರಶ್ನಿಸಿ ದೇವಳದ ಅರ್ಚಕರಾದ ವಾಸುದೇವ ಅಸ್ರಣ್ಣ ಮತ್ತು ಇತರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಆದೇಶ ಹೊರಡಿಸಿದ ಕೋರ್ಟ್ ದೇವಾಲಯದ ಅಭಿವೃದ್ಧಿ ಸಮಿತಿ ರಚಿಸಲು ಕಾನೂನಾತ್ಮಕ ಅವಕಾಶವಿಲ್ಲ ಮತ್ತು ಅದರ ನಿರ್ಣಯವು ಉರ್ಜಿತವಲ್ಲ ಎಂದಿದೆ. ಅಲ್ಲದೇ ದೇವಾಲಯದಲ್ಲಿ ಸಾಂಪ್ರದಾಯಿಕ ಮದುವೆಗೆ ಅವಕಾಶ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.