ನವದೆಹಲಿ: ಅಸಹಿಷ್ಣುತೆಯ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಪ್ರಧಾನಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಸಹಿಷ್ಣುತೆಯ ವಿಷಯವನ್ನು ತಪ್ಪಾದ ರೀತಿಯಲ್ಲಿ ಮಂಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ‘ಅಸಹಿಷ್ಣುತೆ ಬಗ್ಗೆ ನನಗೇನು ಗೊತ್ತಿಲ್ಲ. ಎಲ್ಲವನ್ನು ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ಹೇಳುವುದರಲ್ಲಿ ನನಗೆ ನಂಬಿಕೆ ಇದೆ, ನನ್ನ ಜಾತ್ಯಾತೀತತೆಯನ್ನು ದೃಢಪಡಿಸುವ ಅವಶ್ಯಕತೆ ನನಗಿಲ್ಲ. ನನ್ನ ನೇರ ನಡೆಯೇ ತಪ್ಪು ಎಂದು ಕೆಲವರು ಭಾವಿಸಿದ್ದಾರೆ, ನನಗಿಂತಲೂ ದೇಶಭಕ್ತರು ಇದ್ದಾರೆ ಎಂದು ಯಾರದರು ಹೇಳಿದರೆ ಅವರು ಮೂರ್ಖರು ಎಂದೇ ನಾನು ಕರೆಯುತ್ತೇನೆ. ಯಾರು ಹೆಚ್ಚು ದೇಶಭಕ್ತರು, ಯಾರು ಕಡಿಮೆ ದೇಶಭಕ್ತರು ಎಂಬುದನ್ನು ಯಾರದರು ಹೇಗೆ ನಿರ್ಧರಿಸಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.
ಜಾರಿ ನಿರ್ದೇಶನಾಲಯ ನನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂಬುದು ತಪ್ಪು. 2010ರಲ್ಲೂ ನನಗೆ ನೋಟಿಸ್ ನೀಡಲಾಗಿತ್ತು, 2015ರಲ್ಲೂ ನೀಡಲಾಗಿದೆ, ಎರಡು ಅವಧಿಯಲ್ಲೂ ಇದ್ದ ಸರ್ಕಾರಗಳು ಬೇರೆ ಬೇರೆ. ಹೀಗಾಗಿ ನಾನು ಟಾರ್ಗೆಟ್ ಆಗುತ್ತಿದ್ದೇನೆ ಎಂದು ಯೋಚಿಸುವುದು ತಪ್ಪು. ಎಲ್ಲವೂ ಕಾನೂನು ರೀತಿಯಲ್ಲಿ ನಡೆಯುತ್ತಿದೆ, ಜಾರಿ ನಿರ್ದೇಶನಾಲಯದಿಂದ ನೋಟಿಸ್ ಸಿಕ್ಕಿದೆ, ಅದಕ್ಕೆ ನಾನು ಉತ್ತರಿಸಿದ್ದೇನೆ ಎಂದಿದ್ದಾರೆ.
ನರೇಂದ್ರ ಮೋದಿಯವರು ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾರೆ. ಅಭಿವೃದ್ಧಿಯ ಬಗ್ಗೆ ಮಾತನಾಡಿದಾಗ ಗುಜರಾತ್ ಬಗ್ಗೆ ಯೋಚಿಸುತ್ತೇವೆ. ನನಗೆ ಗುಜರಾತ್ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಆದರೆ ಅಲ್ಲಿ ಮೋದಿ ಮಾಡಿದ ಕೆಲಸ ಶ್ಲಾಘನಾರ್ಹ. ಕೇಂದ್ರ ಒಳ್ಳೆಯ ಕೆಲಸ ಮಾಡುತ್ತಿದೆ, ಆದರೆ ಪ್ರಭಾವ ಸದ್ಯದಲ್ಲೇ ದೇಶದಾದ್ಯಂತ ಗೋಚರಿಸಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.