ನವದೆಹಲಿ: ಕ್ರಿಕೆಟ್ ಲೋಕದ ಅದ್ಭುತ ಪ್ರತಿಭೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸಿ ಸಿಡಿಲ ಮರಿ ಎಂದೇ ಖ್ಯಾತರಾದವರು. ಕ್ರಿಕೆಟ್ ಲೋಕದಿಂದ ನಿವೃತ್ತರಾಗಿರುವ ಇವರು ರಾಜ್ಯಸಭಾ ಸದಸ್ಯನಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. 2015, ಸೆ.1ರಂದು ಇವರನ್ನು ಮಾಹಿತಿ ತಂತ್ರಜ್ಞಾನದ ಸಂಸತ್ತು ಸಮಿತಿಯ ಸದಸ್ಯರನ್ನಾಗಿಯೂ ಮಾಡಲಾಗಿದೆ.
ರಾಜ್ಯಸಭೆಯಲ್ಲಿ ನಡೆಯುವ ಅಧಿವೇಶನದಲ್ಲಿ ಇವರು ಭಾಗವಹಿಸುವುದು ತುಸು ಕಡಿಮೆಯೇ, ಭಾಗವಹಿಸಿದರು ತುಟಿ ಬಿಚ್ಚಿ ಮಾತನಾಡುವುದು ಅಪರೂಪ. ಆದರೆ ಈ ಬಾರಿಯ ಅಧಿವೇಶನದಲ್ಲಿ ಅವರು ಪ್ರಶ್ನೆಯನ್ನು ಕೇಳಿ ತನಗೂ ರಾಜಕಾರಣ ತಕ್ಕ ಮಟ್ಟಿಗೆ ಬರುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಇದೇ ಮೊದಲ ಬಾರಿಗೆ ಸಚಿನ್ ರಾಜ್ಯಸಭೆಯಲ್ಲಿ ಎದ್ದುನಿಂತು ಪ್ರಶ್ನೆಯನ್ನು ಕೇಳಿದ್ದಾರೆ. ಅದೂ ರೈಲ್ವೇಯ ಬಗೆಗೆ. ಮುಂಬಯಿ, ಚೆನ್ನೈ ಮತ್ತು ದೆಹಲಿ ಮಹಾನಗರಗಳು ಮೆಟ್ರೋ ರೈಲ್ವೇಗೆ ಕೋಲ್ಕತ್ತಾದಂತೆ ಪ್ರತ್ಯೇಕ ವಲಯಗಳನ್ನು ಪಡೆದುಕೊಳ್ಳಲಿದೆಯೇ ಎಂಬುದಾಗಿ ಪ್ರಶ್ನಿಸಿದ್ದಾರೆ. ಅವರ ಈ ಪ್ರಶ್ನೆಗೆ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಲಿಖಿತ ಉತ್ತರವನ್ನು ನೀಡಿದ್ದಾರೆ.
ಸಾರಿಗೆ ಸಚಿವಾಲಯಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡುವ ಬಗೆಗೂ ಅವರು ಪ್ರಶ್ನೆ ಕೇಳಿದ್ದಾರೆ. ಮೂರು ವರ್ಷದ ಬಳಿಕ ಅವರು ಇದುವೇ ಮೊದಲ ಬಾರಿಗೆ ಸಕ್ರಿಯವಾಗಿ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.