ಚೆನ್ನೈ: ಶತಮಾನದ ಮಹಾಮಳೆಗೆ ಜರ್ಜರಿತಗೊಂಡಿರುವ ಚೆನ್ನೈನಲ್ಲಿ ಮಳೆ ನಿಂತು ಪ್ರವಾಹವೇನೋ ತಗ್ಗಿದೆ. ರಕ್ಷಣಾ ಕಾರ್ಯಗಳೂ ಭರದಿಂದ ಸಾಗಿವೆ. ಜನರ ಜೀವನ ಹಳಿಗೆ ಮರಳುತ್ತಿದೆ. ಆದರೆ ಮಳೆ ನೀರಿನಿಂದ ಸೃಷ್ಟಿಯಾದ ಕೊಳಚೆ, ಕಸ ಕಡ್ಡಿಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲು ತಿಂಗಳುಗಳೇ ತಗಲುವ ಸಾಧ್ಯತೆ ಇದೆ.
ಚರಂಡಿಗಳಲ್ಲಿ ಪ್ಲಾಸ್ಟಿಕ್, ಚಾಪೆ, ಹಾಸಿಗೆ ಮುಂತಾದ ವಸ್ತುಗಳು ಪ್ರವಾಹದೊಂದಿಗೆ ತೇಲಿ ಬಂದು ನಿಂತ ಕಾರಣ ಸಂಪೂರ್ಣ ಬ್ಲಾಕ್ ಆಗಿದೆ. ಕೊಳಚೆ ನೀರು ಹರಿಯದೆ ಶೇಖರಣೆಯಾಗಿದೆ. ಇದರಿಂದಾಗಿ ರೋಗ ಗುಜಿನಗಳು ಹರಡುವ ಭೀತಿ ಉದ್ಭವವಾಗಿದೆ.
ಕಸದ ರಾಶಿಗಳನ್ನು ಸ್ವಚ್ಛಗೊಳಿಸಲು ಆಡಳಿತ 25 ಸಾವಿರ ನೌಕರರನ್ನು ನಿಯೋಜಿಸಿದೆ, ಕಳೆದ ಕೆಲವು ದಿನಗಳಿಂದ ಇವರು ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ಇಡೀ ಚೆನ್ನೈ ನಗರ ಶುಚಿಯಾಗಲು ಹಲವಾರು ದಿನಗಳೇ ಬೇಕಾಗಿವೆ.
ಇದುವರೆಗೆ ಯಾವುದೇ ನೀರಿನಿಂದ ಉದ್ಭವವಾಗುವ ರೋಗ ಲಕ್ಷಣಗಳು ಕಾಣಿಸಿಕೊಂಡ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಎರಡು ಮೂರು ದಿನಗಳ ಕಾಲ ಶಾಲಾ ಕಾಲೇಜುಗಳು ಬಂದ್ ಇರಲಿವೆ. ಶೇ.95ರಷ್ಟು ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಪುನರಾರಂಭಗೊಂಡಿವೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಹಾಮಳೆಗೆ ತತ್ತರಿಸಿರುವ ಚೆನ್ನೈ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಆಗಿರುವ ನಷ್ಟವನ್ನು ತುಂಬುವುದಕ್ಕೆ ಇನ್ನು ಹಲವಾರು ವರ್ಷಗಳೇ ಬೇಕಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.