ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನಮೂನೆ 9 ಮತ್ತು 11 ವಿರಹಿತ ಪಡಿಸುವ ಬಗ್ಗೆ ಪರಿಶೀಲನೆ ಸರಕಾರ ಭರವಸೆ. ಅವಿಭಜಿತ ಕರಾವಳಿ ಜಿಲ್ಲೆಗಳಾದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮೂನೆ 9 ಮತ್ತು 11 ನೀಡಿಕೆಯಲ್ಲಿ ಸಮಸ್ಯೆಗಳಿದ್ದು ಈ ನಿಯಮಗಳನ್ನು ವಿರಹಿತ ಪಡಿಸುವ ಬಗ್ಗೆ ಸರಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಶ್ನೆಗೆ ಸರಕಾರ ಭರವಸೆ ನೀಡಿದೆ.
ಶೂನ್ಯ ವೇಳೆಯಲ್ಲಿ 94 ಸಿ ಯೋಜನೆಯಡಿ ನೋಂದಾವಣಿ ಶುಲ್ಕವನ್ನು ರಿಯಾಯಿತಿ ಮಾಡುವ ಬಗ್ಗೆ ಕಂದಾಯ ಸಚಿವರ ಗಮನ ಸೆಳೆದ ಕೋಟ ಶ್ರೀನಿವಾಸ ಪೂಜಾರಿ.ರಾಜ್ಯದಲ್ಲಿ 94 ಸಿ ಯೋಜನೆಯನ್ವಯ 2012ನೇ ಡಿಸೆಂಬರ್ 31ನೇ ತಾರೀಕಿನ ಮೊದಲು ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ್ತವ್ಯವಿರುವವರು ನಿವೇಶನ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರು ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಮಿಕ್ಕಿ ಇದ್ದು ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದಾರೆ ಮತ್ತು ಅದಕ್ಕಿಂತಲೂ ಆತಂಕವೆಂದರ ಒಬ್ಬ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಸರಕಾರದ ಆದೇಶದಂತೆ ಸಬ್ ರಿಜಿಸ್ಟ್ರಾರ್ ಆಫೀಸಿನ ಭೂಮಿಯ ನೋಂದಣಿ ಶುಲ್ಕದ ಶೇ. 10 ರಷ್ಟು ಮೊತ್ತವನ್ನು ಶುಲ್ಕವಾಗಿ ಸರಕಾರಕ್ಕೆ ಪಾವತಿಸಬೇಕೆಂದಿದೆ.
ಇದರಿಂದ ಒಬ್ಬ ಫಲಾನುಭವಿಯು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕಡೆಯಲ್ಲಿ ಭೂಮಿಯ ಮಾರುಕಟ್ಟೆ ಬೆಲೆ ಅಧಿಕವಾಗಿದ್ದು ಇದರಂತೆ ಸುಮಾರು ರೂ. 50,000/= ದವರೆಗೂ ಕಟ್ಟಲು ಬರುತ್ತದೆ. ಆದುದರಿಂದ ಹಕ್ಕು ಪತ್ರವನ್ನು ಉಚಿತವಾಗಿ ನೀಡಬೇಕೆಂದು ಶುಲ್ಕ ರೂಪವಾಗಿ ರೂ. 1,000/= ನಿಗಧಿಪಡಿಸಿ ಹಕ್ಕು ಪತ್ರವನ್ನು ವಿತರಿಸಬೇಕೆಂದು ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನ ಪರಿಷತ್ನಲ್ಲಿ ಶೂನ್ಯ ವೇಳೆಯಲ್ಲಿ ಸಭಾಪತಿಗಳ ಮೂಲಕ ಸರಕಾರದ ಗಮನ ಸೆಳೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.