ಮಂಗಳೂರು : ಕರ್ನಾಟಕ ಪತ್ರಕರ್ತರ ಸಂಘ(ರಿ) (ಕರ್ನಾಟಕ ಜರ್ನಲಿಸ್ಟ್ ಯೂನಿಯನ್) ಇದರ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದೆ. ಇದರ ಜಿಲ್ಲಾದ್ಯಕ್ಷರನ್ನಾಗಿ ಶ್ರೀ ಸುದೇಶ್ ಕುಮಾರ್ರವರನ್ನು ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮುರುಗೇಶ್ ಬಿ ಶಿವಪೂಜಿಯವರು ಇನ್ನೊಂದು ಅವಧಿಗೆ ಮರುನೇಮಕ ಮಾಡಿರುತ್ತಾರೆ.
ಜಿಲ್ಲಾಧ್ಯಕ್ಷರಾಗಿ ಪುನರಾಯ್ಕೆಯಾದ ಸುದೇಶ್ ಕುಮಾರ್ರವರು ಜಿಲ್ಲಾ ಕಾರ್ಯಕಾರಿ ಸಮೀತಿಯನ್ನು ಪುನರ್ ರಚಿಸಿದ್ದು, ಅದರ ಉಪಾಧ್ಯಕ್ಷರನ್ನಾಗಿ ಡಾ ಶಿವಶರಣ್ರವರನ್ನು, ಕಾರ್ಯದರ್ಶಿಯಾಗಿ ಶ್ರೀ ಸತೀಶ್ ಕಾಪಿಕಾಡ್ರವರನ್ನು, ಶ್ರೀ ಐಸಕ್ ರಿಚರ್ಡ್ರವರನ್ನು ಜೊತೆ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಶ್ರೀ ಹಕೀಮ್ರವರನ್ನು ನಿಯುಕ್ತಗೊಳಿಸಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮೀತಿಯ ಪದಾದಿಕಾರಿಗಳಾಗಿ ಬಾವಾ ಪದರಂಗಿ, ವೈಲೆಟ್ ಪಿರೇರಾ, ಸದಾಶಿವದಾಸ್, ಅಶ್ವಿತ ಹಾಗೂ ಮೊಹಮ್ಮದ್ ನಿಸಾರ್, ವೆಂಕಟೇಶ್ ಬೆಂಡೆ ಹಾಗೂ ವಿಶ್ವನಾಥ್ ಬಂಟ್ವಾಳ್ರವರು ಆಯ್ಕೆಯಾಗಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.