
ಅಹ್ಮದ್ ಶಾ ಅಬ್ದಾಲಿ, ಮಹ್ಮೂದ್ ಘಜ್ನವಿ ಮುಂತಾದ ಕ್ರೂರ ಇಸ್ಲಾಮಿಕ್ ಆಕ್ರಮಣಕಾರರು ಭಾರತದಲ್ಲಿ ಲೂಟಿ ಮತ್ತು ನಿರಪರಾಧಿ ಹಿಂದುಗಳ ನರಸಂಹಾರ ಮಾಡಿದ ಇತಿಹಾಸ ನಮಗೆಲ್ಲ ಗೊತ್ತೇ ಇದೆ. ಆದರೆ ಅವರದ್ದೇ ಭೂಮಿ ಗಾಂಧಾರ (ಅಫ್ಘಾನಿಸ್ತಾನ)ದಲ್ಲಿ ಒಬ್ಬ ಭಾರತೀಯ ವೀರ ಇದ್ದ ಕಥೆ ಇತಿಹಾಸದಿಂದ ಮರೆಮಾಚಲ್ಪಟ್ಟಿದೆ. ಈ ಕಥೆಯನ್ನು ವಾಮಪಂಥಿ ಇತಿಹಾಸಕಾರರು ಇತಿಹಾಸದ ಪುಟಗಳಿಂದ ದಬ್ಬಿದ್ದಾರೆ. ಇದು ಒಬ್ಬ ಭಾರತೀಯ ಶೂರನ ನಿಜವಾದ ಕಥೆಯಾಗಿದ್ದು, ಅವನ ಭಯದಿಂದ ಕಟ್ಟರ್ಪಂಥಿ ಅಫ್ಘಾನಿ ಪಠಾಣರು ನಡುಗುತ್ತಿದ್ದರು. ಅವನ ಬಗೆಗಿನ ಭಯ ಇಷ್ಟು ತೀವ್ರವಾಗಿತ್ತು ಎಂದರೆ ಅಫ್ಘಾನಿ ಪಠಾಣರು ಭಯದಿಂದ ಮಹಿಳೆಯರ ಸಲ್ವಾರ್ ಧರಿಸಲು ಆರಂಭಿಸಿದ್ದರು.
ಈ ವೀರ ಬೇರೆ ಯಾರೂ ಅಲ್ಲ, ಮಹಾರಾಜಾ ರಣಜಿತ್ ಸಿಂಗ್ ಅವರ ಮಹಾನ್ ಸೇನಾನಿ ಸರದಾರ್ ಹರಿ ಸಿಂಗ್ ನಲ್ವಾ. ಅವರನ್ನು ಸೀಮಾಂತ ಪ್ರದೇಶಗಳ (ಖೈಬರ್ ಪಖ್ತೂನ್ಖ್ವಾ ಮತ್ತು ಅಫ್ಘಾನಿಸ್ತಾನ) ಗವರ್ನರ್ ಆಗಿ ನಿಯೋಜಿಸಿದಾಗ, ಭಯದಿಂದ ಕಟ್ಟರ್ಪಂಥಿ ಅಫ್ಘಾನ್ ಕಬೀಲಗಳು ತಮ್ಮ ಇಸ್ಲಾಮಿಕ್ ಗುರುತನ್ನೇ ಬದಲಾಯಿಸಿದರು. ಹರಿ ಸಿಂಗ್ ನಲ್ವಾ ಅವರಿಗೆ ಇದು ಸಾಮಾನ್ಯ ಸೈನಿಕ ವಿಜಯವಾಗಿರಲಿಲ್ಲ, ಬದಲಿಗೆ ಒಬ್ಬ ಭಾರತೀಯ ಯೋಧನು ಭೂಗೋಳವನ್ನು ಮಾತ್ರವಲ್ಲದೆ ಶತ್ರುಗಳ ಸಂಸ್ಕೃತಿಯನ್ನೂ ಪ್ರಭಾವಿಸಿದ್ದ ಘಟನೆ ಇದಾಗಿತ್ತು.
19ನೇ ಶತಮಾನದ ಆರಂಭಿಕ ದಶಕಗಳಲ್ಲಿ ಮಹಾರಾಜಾ ರಣಜಿತ್ ಸಿಂಗ್ ಅವರ ಸಾಮ್ರಾಜ್ಯ ತನ್ನ ಉಚ್ಛಸ್ಥಿತಿಯಲ್ಲಿತ್ತು. ಆಗ ಉತ್ತರ-ಪಶ್ಚಿಮ ಸೀಮಾಂತ (ಇಂದಿನ ಖೈಬರ್ ಪಖ್ತೂನ್ಖ್ವಾ ಮತ್ತು ಅಫ್ಘಾನಿಸ್ತಾನ) ಅತ್ಯಂತ ಅಶಾಂತ ಪ್ರದೇಶಗಳಲ್ಲಿ ಒಂದಾಗಿತ್ತು. ಈ ಪ್ರದೇಶ ಸಹಸ್ರಾರು ವರ್ಷಗಳಿಂದ ಆಕ್ರಮಣಕಾರರಿಗೆ ಭಾರತದೊಳಗೆ ಪ್ರವೇಶಿಸುವ ಮಾರ್ಗವಾಗಿತ್ತು. ಇಸ್ಲಾಮಿಕ್ ಲೂಟಿ, ಸನಾತನಿಗಳನ್ನು ಬಲವಂತವಾಗಿ ಮತಾಂತರಿಸುವುದು ಮತ್ತು ಹಿಂಸೆ ಇಲ್ಲಿ ಸಾಮಾನ್ಯವಾಗಿತ್ತು. ಆದರೆ ಸರದಾರ್ ಹರಿ ಸಿಂಗ್ ನಲ್ವಾ ಅವರನ್ನು ಈ ಪ್ರದೇಶದ ಗವರ್ನರ್ ಆಗಿ ನಿಯೋಜಿಸಿದಾಗ ಪರಿಸ್ಥಿತಿ ಬದಲಾಗಲು ಆರಂಭವಾಯಿತು. ಅವರು ತಮ್ಮ ವೀರತೆ ಮತ್ತು ಸೈನಿಕ ಸಾಮರ್ಥ್ಯದಿಂದ ಮಹಾರಾಜಾ ರಣಜಿತ್ ಸಿಂಗ್ ಅವರ ಸಾಮ್ರಾಜ್ಯವನ್ನು ಪೇಶಾವರ್, ಕಂದಹಾರ್, ಮುಲ್ತಾನ್, ಹೆರಾತ್, ಕಲಾತ್, ಬಲೂಚಿಸ್ತಾನ್, ಪರ್ಷಿಯಾ (ಇರಾನ್) ವರೆಗೂ ವಿಸ್ತರಿಸಿದರು. ನಲ್ವಾ ಕೇವಲ ಆಡಳಿತ ನಿಯಂತ್ರಣವನ್ನು ಸ್ಥಾಪಿಸಲಿಲ್ಲ, ಬದಲಿಗೆ ಅಫ್ಘಾನ್ ಇಸ್ಲಾಮಿಕ್ ಆಕ್ರಮಣಕಾರರ ಮನಸ್ಸಿನಲ್ಲಿ ಭಯವನ್ನು ಬಿತ್ತಿದರು – ಕಟ್ಟರ್ಪಂಥಿಗಳು ಅವರನ್ನು ಎದುರಿಸುವ ಬದಲು ಮಹಿಳೆಯರ ಸಲ್ವಾರ್ ಧರಿಸಿ ತಮ್ಮ ಪ್ರಾಣ ಉಳಿಸಿಕೊಳ್ಳುವ ಪ್ರಾರ್ಥನೆ ಮಾಡುತ್ತಿದ್ದರು.
ಸಿಖ್ ಪರಂಪರೆಯ ಶಿಕ್ಷಣದಲ್ಲಿ ನಿರಾಯುಧರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಕೈ ಎತ್ತುವುದು ಅಧರ್ಮ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಕೇವಲ ಧಾರ್ಮಿಕತೆ ಮಾತ್ರವಲ್ಲ ಸೈನಿಕ ನಡವಳಿಕೆಯ ಭಾಗವೂ ಆಗಿತ್ತು. ಗಾಂಧಾರ (ಅಫ್ಘಾನಿಸ್ತಾನ) ಪ್ರದೇಶದ ಗವರ್ನರ್ ಆದಾಗ, ಹರಿಸಿಂಗ್ ನಲ್ವಾ ಅವರು ಭಾರತವನ್ನು ಲೂಟಿ ಮಾಡಿ ಇಸ್ಲಾಂ ಹರಡುವ ಉದ್ದೇಶ ಹೊಂದಿದ್ದ ಕಟ್ಟರ್ಪಂಥಿ ಅಫ್ಘಾನಿ ಪಠಾಣರಿಗೆ ಎಚ್ಚರಿಕೆ ನೀಡಿದರು- ಸಿಖ್ಖರ ಕೋಪದಿಂದ ತಪ್ಪಿಸಿಕೊಳ್ಳಲು ಬಯಸಿದರೆ ಮಹಿಳೆಯರ ವೇಷ ಧರಿಸಿ, ಏಕೆಂದರೆ ಸಿಖ್ಖರು ಸ್ತ್ರೀಯರ ಮೇಲೆ ದಾಳಿ ಮಾಡುವುದಿಲ್ಲ. ಪಂಜಾಬ್ನಲ್ಲಿ ಆ ಕಾಲದಲ್ಲಿ (ಇಂದಿಗೂ ಪ್ರಚಲಿತ) ಸಲ್ವಾರ್-ಕಮೀಜ್ ಮಹಿಳೆಯರ ಉಡುಗೆಯಾಗಿತ್ತು. ಭಯದಿಂದ ಅಫ್ಘಾನರು ಅದೇ ರೀತಿಯ ಅಫ್ಘಾನಿ ಸಲ್ವಾರ್-ಕಮೀಜ್ ಧರಿಸಲು ಆರಂಭಿಸಿದರು. ಏಕೆಂದರೆ ಸಲ್ವಾರ್-ಕಮೀಜ್ ಧರಿಸಿದ ಪಠಾಣರ ಮೇಲೆ ಸಿಖ್ ಯೋಧರು ದಾಳಿ ಮಾಡುತ್ತಿರಲಿಲ್ಲ. ಭಯದಿಂದ ಸೇರಿಕೊಂಡ ಈ ಉಡುಗೆ ನಂತರ ಅಫ್ಘಾನರ ಸಾಂಪ್ರದಾಯಿಕ ಉಡುಗೆಯಾಗಿ ಮಾರ್ಪಟ್ಟಿತು. ಇಂದಿಗೂ ಅದನ್ನು ಪಠಾಣಿ ಸೂಟ್ ಎಂದು ಧರಿಸಲಾಗುತ್ತದೆ.
ಇದಕ್ಕೂ ಮುಂಚೆ ಅಫ್ಘಾನ್ ಪುರುಷರು ಒಂದು ಢೀಲು ಚೋಗಾ ರೀತಿಯ ವಸ್ತ್ರ ಧರಿಸುತ್ತಿದ್ದರು, ಅದು ಇಂದಿನ ಅರಬ್ ಉಡುಗೆಗೆ ಹೋಲುತ್ತಿತ್ತು. ಆದರೆ ಸಿಖ್ ಸೈನಿಕರು ಮಹಿಳೆಯರ ವೇಷದಲ್ಲಿರುವ ಯಾರ ಮೇಲೂ ಕೈ ಎತ್ತುವುದಿಲ್ಲ ಎಂಬ ಭಾವನೆ ಹರಡಿದಾಗ ಅಫ್ಘಾನರು ಪಂಜಾಬಿ ಮಹಿಳೆಯರು ಧರಿಸುತ್ತಿದ್ದ ಸಲ್ವಾರ್-ಕಮೀಜ್ ಅನ್ನು ಅಳವಡಿಸಿಕೊಳ್ಳಲು ಆರಂಭಿಸಿದರು. ಕ್ರಮೇಣ ಇದು ಅವರ ‘ರಕ್ಷಣಾ ಉಪಾಯ’ವಾಗಿ ಮತ್ತು ನಂತರ ಅವರ ಧಾರ್ಮಿಕ ಗುರುತಾಗಿ ಮಾರ್ಪಟ್ಟಿತು. ಇಂದು ನಾವು ‘ಪಠಾಣಿ ಸೂಟ್’ ಎಂದು ಕರೆಯುವ ಢೀಲು ಸಲ್ವಾರ್ ಮತ್ತು ಉದ್ದ ಕಮೀಜ್ ಈ ಬದಲಾವಣೆಯ ಪರಿಣಾಮವೆಂದು ಪರಿಗಣಿಸಲಾಗುತ್ತದೆ.
ಸರದಾರ್ ಹರಿ ಸಿಂಗ್ ನಲ್ವಾ ಅವರ ಈ ವೀರತೆಗೆ ಐತಿಹಾಸಿಕ ಸಾಕ್ಷ್ಯಗಳೂ ದೊರೆಯುತ್ತವೆ, ಅದು ಅಫ್ಘಾನರ ಮನಸ್ಸಿನಲ್ಲಿ ಅವರು ಬಿತ್ತಿದ್ದ ಭಯವನ್ನು ತೋರಿಸುತ್ತದೆ. ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ರಾಜ್ಯದ ಸ್ವಾತ್ ಸ್ಟೇಟ್ನ ಮಾಜಿ ವಲಿ ಮಿಯಾಂಗುಲ್ ಔರಂಗಜೇಬ್ ಅವರು ಅಫ್ಘಾನ್ ತಾಲಿಬಾನ್ ಆಡಳಿತಕ್ಕೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದರು: ಯಾರ ಪೂರ್ವಜರು ಭಯದಿಂದ ಮಹಿಳೆಯರ ಉಡುಗೆ ಅಳವಡಿಸಿಕೊಂಡಿದ್ದರೋ ಅವರು ಇಂದು ಮಹಿಳೆಯರ ಮೇಲೆ ಹಿಜಾಬ್ ಧರಿಸಲು ಒತ್ತಡ ಹೇರುವುದು ಹೇಗೆ? ಈ ಪತ್ರ ಐತಿಹಾಸಿಕ ಸತ್ಯಕ್ಕಿಂತ ಹೆಚ್ಚು ನೈತಿಕ ಟಿಪ್ಪಣಿಯಾಗಿತ್ತು, ಅದು ಹರಿ ಸಿಂಗ್ ನಲ್ವಾ ಅವರು ಅಫ್ಘಾನರ ಮನಸ್ಸಿನಲ್ಲಿ ಬಿತ್ತಿದ ಭಯವನ್ನು ಮತ್ತೆ ಜೀವಂತಗೊಳಿಸಿತು.
ಹರಿ ಸಿಂಗ್ ನಲ್ವಾ ಕೇವಲ ಖಡ್ಗದ ಬಲದಿಂದಲ್ಲ, ತಮ್ಮ ಹೆಸರಿನ ಭಯದಿಂದಲೂ ಆಡಳಿತ ನಡೆಸಿದರು. ಅವರು ಸೀಮಾಂತ ಪ್ರದೇಶದಲ್ಲಿ ಸಮತೋಲನ ಸ್ಥಾಪಿಸಿದರು, ಅದು ಸಹಸ್ರಾರು ವರ್ಷಗಳಿಂದ ನಡೆದ ಅರಾಜಕತೆಗೆ ಸವಾಲು ಹಾಕಿತು. ಅವರ ಪ್ರಭಾವ ಇಷ್ಟು ಆಳವಾಗಿತ್ತು ಎಂದರೆ ಕಟ್ಟರ್ಪಂಥಿಗಳು ಕೇವಲ ಸೋಲಲಿಲ್ಲ, ತಮ್ಮ ಉಡುಗೆಯ ಸಂಸ್ಕೃತಿಯನ್ನೇ ಬದಲಾಯಿಸಿದರು.
28 ಏಪ್ರಿಲ್ 1791ರಂದು ಪಂಜಾಬ್ನ ಗುಜ್ರಾನ್ವಾಲಾದಲ್ಲಿ ಜನಿಸಿದ ಹರಿ ಸಿಂಗ್ ಬಾಲ್ಯದಿಂದಲೇ ವೀರನಾಗಿದ್ದರು. ಅವರ ಬಳಿ ಭಾಲಾ, ಬಾಣ ಮತ್ತು ಖಡ್ಗ ಚಲಾಯಿಸುವ ಅದ್ಭುತ ಪ್ರತಿಭೆಯಿತ್ತು. ಇದರಿಂದ ಪ್ರಭಾವಿತರಾಗಿ ಮಹಾರಾಜಾ ರಣಜಿತ್ ಸಿಂಗ್ ಅವರು ಅವರನ್ನು ತಮ್ಮ ಸೇನೆಯಲ್ಲಿ ಸೇರಿಸಿಕೊಂಡರು. ಒಮ್ಮೆ ಬೇಟೆಯ ಸಮಯದಲ್ಲಿ ಹರಿ ಸಿಂಗ್ ಅವರು ಮಹಾರಾಜಾ ರಣಜಿತ್ ಸಿಂಗ್ ಅವರ ಪ್ರಾಣವನ್ನು ಸಿಂಹದ ದಾಳಿಯಿಂದ ರಕ್ಷಿಸಿದರು ಎಂಬ ಪ್ರತೀತಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


