
ಭಾರತದ ರಕ್ಷಣಾ ದೃಷ್ಟಿಕೋನವು ರೂಪುಗೊಂಡಿದ್ದು 1959ರಲ್ಲಿ, ಆ ವರ್ಷ ಭಾರತವು ರಾಷ್ಟ್ರೀಯ ರಕ್ಷಣಾ ಕಾಲೇಜು (National Defence College – NDC) ಸ್ಥಾಪಿಸಿತು ಮತ್ತು ಅದರ ಮೊದಲ ಕಮಾಂಡಂಟ್ ಆಗಿ ಲೆಫ್ಟಿನೆಂಟ್ ಜನರಲ್ ಕೆ. ಬಹದ್ದೂರ್ ಸಿಂಗ್ ಅವರನ್ನು ನೇಮಿಸಲಾಯಿತು.
ಸಂಸ್ಥೆಯನ್ನು ಪೂರ್ತಿಯಾಗಿ ಶೂನ್ಯದಿಂದ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತ ಸಿಂಗ್ ಅವರು, ಅದನ್ನು ಕೇವಲ ಸೈನಿಕ ತರಬೇತಿ ಕೇಂದ್ರವನ್ನಾಗಿ ಮಾತ್ರವಲ್ಲದೆ, ಹಿರಿಯ ಸೈನಿಕ ಅಧಿಕಾರಿಗಳು ಮತ್ತು ನಾಗರಿಕ ಸೇವಕರು ಒಟ್ಟಿಗೆ ರಣತಂತ್ರ, ಆಡಳಿತ ಮತ್ತು ಜಾಗತಿಕ ವ್ಯವಹಾರಗಳನ್ನು ಅಧ್ಯಯನ ಮಾಡುವ ವೇದಿಕೆಯನ್ನಾಗಿ ರೂಪಿಸಿದರು. ಅಲ್ಲಿ ಮುಕ್ತ ಚರ್ಚೆಗಳು, ವಿಶ್ಲೇಷಣಾತ್ಮಕ ಚಿಂತನೆಗಳನ್ನು ಪ್ರೋತ್ಸಾಹಿಸಲಾಯಿತು. ಈ ಕಾಲೇಜು ಭಾರತವನ್ನು ಹೆಚ್ಚು ಬಲಿಷ್ಠವಾಗಿ ಮತ್ತು ಯಾವುದೇ ಅಪಾಯಕ್ಕೆ ಸಿದ್ಧವಾಗಿರುವಂತೆ ಮಾಡುವ ಗುರಿಯನ್ನು ಹೊಂದಿತ್ತು. ಆದರೆ ಆರಂಭವಾದ ಕೇವಲ ಎರಡು ವರ್ಷಗಳ ನಂತರ, 1962ರಲ್ಲಿ ಈ ಕಾಲೇಜು ಶಾಶ್ವತವಾಗಿ ಮುಚ್ಚಲ್ಪಡುವ ಸಂಕಷ್ಟಕ್ಕೆ ಒಳಗಾಯಿತು.
ಲೆಫ್ಟಿನೆಂಟ್ ಜನರಲ್ ಕೆ. ಬಹದ್ದೂರ್ ಸಿಂಗ್ ಅವರ ಕಥೆ ಕೇವಲ ಒಬ್ಬ ಸೈನಿಕನದ್ದಲ್ಲ; ಅವರು ಭಾರತದ ರಣತಂತ್ರದ ಚಿಂತನೆಯನ್ನು ನಿರ್ಣಾಯಕ ಸಮಯದಲ್ಲಿ ರೂಪಿಸಿದ ದೂರದೃಷ್ಟಿಯವರು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜನ್ನು ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು.
1960ರಲ್ಲಿ ರಾಷ್ಟ್ರೀಯ ರಕ್ಷಣಾ ಕಾಲೇಜು ಮೊದಲ ಬಾರಿಗೆ ತೆರೆಯಿತು. ಇದು ಭಾರತದಲ್ಲಿ ಹೊಸ ಆಲೋಚನೆಯಾಗಿತ್ತು. ಉತ್ತಮ ಸೈನಿಕ ಅಧಿಕಾರಿಗಳು ಮತ್ತು ಸರ್ಕಾರಿ ನಾಯಕರಿಗೆ ಯುದ್ಧ ರಣತಂತ್ರ, ರಕ್ಷಣಾ ಯೋಜನೆ ಮತ್ತು ದೇಶ ರಕ್ಷಣೆಯ ಬಗ್ಗೆ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು. ವಿವಿಧ ದೇಶಗಳು, ಸೇನೆಗಳು, ಯುದ್ಧಗಳ ಸಾಧ್ಯತೆಗಳು, ಭವಿಷ್ಯದ ಅಪಾಯಗಳನ್ನು ಅಧ್ಯಯನ ಮಾಡಲಾಗುತ್ತಿತ್ತು.
1962ರಲ್ಲಿ ಕಾಲೇಜಿನಲ್ಲಿ ಒಂದು ಅತ್ಯಂತ ಮಹತ್ವದ ಘಟನೆ ನಡೆಯಿತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಚೀನಾದ ಬಗ್ಗೆ ಆಳವಾದ ಅಧ್ಯಯನ ನಡೆಸಿದರು. ಭಾರತ-ಚೀನಾ ಸಂಬಂಧ, ಗಡಿ ಪ್ರದೇಶ, ಇತಿಹಾಸವನ್ನು ವಿಶ್ಲೇಷಿಸಿದ ನಂತರ ಅವರು ಒಂದು ತೀರ್ಮಾನಕ್ಕೆ ಬಂದರು: ಭಾರತ ಮತ್ತು ಚೀನಾ ನಡುವೆ ಯುದ್ಧ ಸಂಭವಿಸಬಹುದು, ಅದು ಶೀಘ್ರದಲ್ಲೇ ಆಗಬಹುದು. ಈ ಭವಿಷ್ಯವಾಣಿಯನ್ನು ವಿವರವಾದ ಅಧ್ಯಯನದ ರೂಪದಲ್ಲಿ ರಕ್ಷಣಾ ಸಚಿವಾಲಯಕ್ಕೆ ಕಳುಹಿಸಲಾಯಿತು.
ಆದರೆ ಆ ಸಮಯದ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರು ಈ ಭವಿಷ್ಯವಾಣಿಯನ್ನು ಕೇಳಿ ತೀವ್ರ ಕೋಪಗೊಂಡರು. ಅವರು ಚೀನಾದೊಂದಿಗೆ ಯುದ್ಧವಾಗಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದರು. ಭಾರತ-ಚೀನಾ ಸ್ನೇಹವನ್ನು ಅವರು ನಂಬಿದ್ದರು. ರಕ್ಷಣಾ ಕಾಲೇಜು ಭಯ ಹುಟ್ಟಿಸುತ್ತಿದೆ, ತಪ್ಪು ಆಲೋಚನೆಗಳನ್ನು ಹರಡುತ್ತಿದೆ ಎಂದು ಅವರು ಟೀಕೆ ಮಾಡಿದರು.
1962ರಲ್ಲಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ಅವರು ಅತ್ಯಂತ ಕೋಪದಲ್ಲಿದ್ದರು. ಚೀನಾದೊಂದಿಗೆ ಯುದ್ಧದ ಬಗ್ಗೆ ಮಾತನಾಡಬಾರದು, ಇದು ತಪ್ಪು ಚಿಂತನೆ ಎಂದು ಅವರು ಹೇಳಿದರು. ಕಾಲೇಜನ್ನು ಮುಚ್ಚಬೇಕು ಎನ್ನುವ ಮಟ್ಟಕ್ಕೆ ರೇಗಿದರು. ಕಾಲೇಜು ನಿಷ್ಪ್ರಯೋಜಕವಾಗಿದೆ, ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದರು.ರಕ್ಷಣಾ ಸಚಿವರ ಕೋಪ ಗಂಭೀರವಾಗಿತ್ತು. ಕಾಲೇಜು ದೊಡ್ಡ ಅಪಾಯಕ್ಕೆ ಒಳಗಾಯಿತು. ಸರ್ಕಾರ ರಕ್ಷಣಾ ಕಾಲೇಜಿನಲ್ಲಿ ಹೊಸ ಕೋರ್ಸ್ಗಳನ್ನು ಆರಂಭಿಸದಂತೆ ನಿರ್ಧರಿಸಿತು. ಆರು ತಿಂಗಳ ಕಾಲ ಯಾವುದೇ ಹೊಸ ತರಗತಿಗಳು ಆರಂಭವಾಗಲಿಲ್ಲ. ಶಿಕ್ಷಕರು ಮತ್ತು ಅಧಿಕಾರಿಗಳು ದುಃಖ ಮತ್ತು ಆತಂಕದಲ್ಲಿದ್ದರು. ಕಾಲೇಜು ಶಾಶ್ವತವಾಗಿ ಮುಚ್ಚಲ್ಪಡುವ ಭಯ ಅವರಲ್ಲಿತ್ತು.
ಆದರೆ ನಂತರ ಒಂದು ಘಟನೆ ಎಲ್ಲವನ್ನೂ ಬದಲಾಯಿಸಿತು.1962ರ ಅಕ್ಟೋಬರ್ನಲ್ಲಿ, ರಕ್ಷಣಾ ಸಚಿವರ ಕೋಪದ ಭೇಟಿಯ ಕೆಲವೇ ತಿಂಗಳ ನಂತರ, ಚೀನಾ ಭಾರತದ ಮೇಲೆ ದಾಳಿ ಮಾಡಿತು. ನಿಜವಾದ ಯುದ್ಧ ಆರಂಭವಾಯಿತು. ರಾಷ್ಟ್ರೀಯ ರಕ್ಷಣಾ ಕಾಲೇಜು ಹೇಳಿದ್ದ ಭವಿಷ್ಯವಾಣಿ ಸರಿಯಾಗಿತ್ತು. ಅವರು ಹೇಳಿದ ಯುದ್ಧ ನಿಜವಾಯಿತು. ಭಾರತದ ಅಧಿಕಾರಿಗಳು ಮತ್ತು ನಾಯಕರು ಕಾಲೇಜು ಸರಿಯಾಗಿತ್ತು ಎಂದು ಅರಿತರು. ಯುದ್ಧದ ಸುಮಾರು ಎರಡು ವರ್ಷಗಳ ಮೊದಲೇ ಕಾಲೇಜು ನೀಡಿದ್ದ ಎಚ್ಚರಿಕೆಯ ಮಹತ್ವ ಆಗ ಎಲ್ಲರಿಗೂ ಅರ್ಥವಾಯಿತು.
ಪ್ರಧಾನಿ ಜವಾಹರಲಾಲ್ ನೆಹರು ಅವರು ಕೂಡ ಬಳಿಕ ಕಾಲೇಜಿನ ಮಹತ್ವವನ್ನು ಅರ್ಥಮಾಡಿಕೊಂಡರು. ಕಾಲೇಜು ಉತ್ತಮ ಕೆಲಸ ಮಾಡುತ್ತಿದೆ. ಭವಿಷ್ಯದ ಅಪಾಯಗಳಿಗೆ ಭಾರತವನ್ನು ಸಿದ್ಧಗೊಳಿಸಲು ಇದು ಸಹಾಯ ಮಾಡುತ್ತದೆ ಎಂಬುದು ಅವರ ಅರಿವಿಗೆ ಬಂತು.
ಕಾಲೇಜಿನ ಮೊದಲ ಕಮಾಂಡಂಟ್ ಮತ್ತು ಸ್ಥಾಪಕ ಲೆಫ್ಟಿನೆಂಟ್ ಜನರಲ್ ಕೆ. ಬಹದ್ದೂರ್ ಸಿಂಗ್ ಅವರು, ಪ್ರಧಾನಿ ನೆಹರು ಅವರನ್ನು ಭೇಟಿಯಾದರು. ಅಧಿಕೃತ ಊಟದ ಸಂದರ್ಭದಲ್ಲಿ ಅವರು ನೆಹರು ಅವರಿಗೆ ಕಾಲೇಜಿನ ಕೆಲಸವನ್ನು ವಿವರಿಸಿದರು. ಚೀನಾ ಯುದ್ಧದ ಭವಿಷ್ಯವಾಣಿಯನ್ನು ತೋರಿಸಿದರು. ರಕ್ಷಣಾ ಸಚಿವಾಲಯಕ್ಕೆ ಕಳುಹಿಸಿದ ಅಧ್ಯಯನವನ್ನು ತೋರಿಸಿ, ಕಾಲೇಜು ಭಾರತದ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದು ಎಂದು ವಿವರಿಸಿದರು. ನೆಹರು ಎಚ್ಚರಿಕೆಯಿಂದ ಅವರ ಮಾತನ್ನು ಕೇಳಿದರು. ಕಾಲೇಜು ತನ್ನ ಉದ್ದೇಶವನ್ನು ಸರಿಯಾಗಿ ನಿರ್ವಹಿಸುತ್ತಿದೆ ಎಂದು ಅರಿತರು. ಭವಿಷ್ಯದ ಬಗ್ಗೆ ಚಿಂತಿಸಿ ಅಪಾಯಗಳಿಗೆ ಸಿದ್ಧವಾಗುವಂತೆ ಮಾಡುತ್ತಿದೆ ಎಂದು ತಿಳಿದರು.
ಕಾಲೇಜನ್ನು ಮುಂದುವರಿಸಬೇಕು ಎಂದು ನಿರ್ಧರಿಸಿದರು. ಹೊಸ ರಕ್ಷಣಾ ಸಚಿವ ವೈ.ಬಿ. ಚವಾಣ್ ಅವರಿಗೆ ಕಾಲೇಜನ್ನು ಮುಚ್ಚಬಾರದು . ಕಾಲೇಜಿನ ಕೆಲಸ ಮುಂದುವರಿಯಬೇಕು ಎಂದು ಆದೇಶಿಸಿದರು. ಲೆಫ್ಟಿನೆಂಟ್ ಜನರಲ್ ಕೆ. ಬಹದ್ದೂರ್ ಸಿಂಗ್ ಅವರ ಧೈರ್ಯ ಮತ್ತು ಕಠಿಣ ಪರಿಶ್ರಮದಿಂದ ರಾಷ್ಟ್ರೀಯ ರಕ್ಷಣಾ ಕಾಲೇಜು ಉಳಿಯಿತು. ಹೊಸ ಜೀವನ ಪಡೆಯಿತು. ಅಂದಿನಿಂದ ಕಾಲೇಜು ಬೆಳೆಯಿತು, ಬಲಿಷ್ಠವಾಯಿತು. ಅನೇಕ ಸೈನಿಕ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ರಣತಂತ್ರ ಮತ್ತು ರಕ್ಷಣೆಯ ಬಗ್ಗೆ ಶಿಕ್ಷಣ ನೀಡಿತು. ವರ್ಷಗಳಿಂದ ಭಾರತಕ್ಕೆ ಸೇವೆ ಸಲ್ಲಿಸುತ್ತಿದೆ. ಭಾರತವನ್ನು ಹೆಚ್ಚು ಸಿದ್ಧವಾಗಿ, ಬಲಿಷ್ಠವಾಗಿ ಮಾಡಿದೆ.
ಇಂದು ರಾಷ್ಟ್ರೀಯ ರಕ್ಷಣಾ ಕಾಲೇಜು ಭಾರತದ ಅತ್ಯಂತ ಮಹತ್ವದ ಸಂಸ್ಥೆಗಳಲ್ಲಿ ಒಂದಾಗಿದೆ. ಉತ್ತಮ ಸೈನಿಕ ಅಧಿಕಾರಿಗಳು ಮತ್ತು ಸರ್ಕಾರಿ ನಾಯಕರಿಗೆ ಶಿಕ್ಷಣ ನೀಡುತ್ತದೆ. ಭವಿಷ್ಯದ ಬಗ್ಗೆ ಚಿಂತಿಸಿ ಯಾವುದೇ ಅಪಾಯಕ್ಕೆ ಸಿದ್ಧವಾಗುವಂತೆ ಸಹಾಯ ಮಾಡುತ್ತದೆ.ಇದೆಲ್ಲವೂ ಲೆಫ್ಟಿನೆಂಟ್ ಜನರಲ್ ಕೆ. ಬಹದ್ದೂರ್ ಸಿಂಗ್ ಅವರ ಧೈರ್ಯದಿಂದ ಸಾಧ್ಯವಾಯಿತು. ತಮ್ಮ ಕಾಲೇಜಿಗಾಗಿ ಹೋರಾಡಿದರು. ಅದರ ಕೆಲಸದ ಮೇಲೆ ನಂಬಿಕೆ ಇಟ್ಟರು. ಪ್ರಧಾನಿಯನ್ನು ಭೇಟಿಯಾಗಿ ಸತ್ಯವನ್ನು ಹೇಳಲು ಹೆದರಲಿಲ್ಲ. ವರ್ಷಗಳಿಂದ ಭಾರತಕ್ಕೆ ಸಹಾಯ ಮಾಡುತ್ತಿರುವ ಸಂಸ್ಥೆಯನ್ನು ಉಳಿಸಿದರು. ಸರಿಯಾದದ್ದನ್ನು ಮಾಡಲು ಧೈರ್ಯ ತೋರಿದ ಮಹಾನ್ ನಾಯಕರಾಗಿ ಅವರು ನೆನಪಾಗುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


