
ಸುಮಾರು 830 ಕೋಟಿ ಜನಸಂಖ್ಯೆ, ಜನದಟ್ಟಣೆಯ ರೈಲ್ವೆ ನಿಲ್ದಾಣಗಳು, ಕಾರ್ಯನಿರತ ವಿಮಾನ ನಿಲ್ದಾಣಗಳು ಮತ್ತು ಕುಂಭಮೇಳ ಮತ್ತು ಅಮರನಾಥ ಯಾತ್ರೆಯಂತಹ ಬೃಹತ್ ಆಧ್ಯಾತ್ಮಿಕ ಸಭೆಗಳು ಹೀಗೆ ಪ್ರಪಂಚದಾದ್ಯಂತ ಪ್ರತಿದಿನವೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಬಿಗಿಹಗ್ಗದ ಮೇಲೆ ನಡೆದಂತೆ. ಶತ್ರುಗಳು ಅದೃಶ್ಯ ‘ಐಇಡಿ’ಗಳ ರೂಪದಲ್ಲಿ ಅಡಗಿರುವಾಗ, ನಮ್ಮ ಬಾಂಬ್ ಸ್ಕ್ವಾಡ್ಗಳು ಪ್ರತಿ ಸೆಕೆಂಡ್ಗೂ ಎಚ್ಚರವಾಗಿರಬೇಕು. ಅದಕ್ಕಾಗಿ ಇಂದು, ನಮ್ಮ ಭದ್ರತಾ ಪಡೆಗಳು ಕೇವಲ ಧೈರ್ಯವನ್ನು ಅವಲಂಬಿಸಿಲ್ಲ, ಅದೃಶ್ಯ ಬೆದರಿಕೆಯನ್ನು ಎದುರಿಸಲು ‘ರಾಮನ್ ಸ್ಪೆಕ್ಟ್ರೋಸ್ಕೋಪಿ’ ನಂತಹ ಹೈಟೆಕ್ ಶಸ್ತ್ರಾಸ್ತ್ರಗಳನ್ನು ಸಹ ಬಳಸುತ್ತಿವೆ. ಈ ಅಸ್ತ್ರ ನಿಲ್ದಾಣದಲ್ಲಿ ಬಿದ್ದ ಅನಾಥ ಚೀಲವಾಗಿರಲಿ ಅಥವಾ ರಾಸಾಯನಿಕಗಳ ಅಕ್ರಮ ಕಳ್ಳಸಾಗಣೆಯಾಗಲಿ, ಈ ತಂತ್ರಜ್ಞಾನವು ಅಧಿಕಾರಿಗಳಿಗೆ ಅವುಗಳನ್ನು ತೆರೆಯದೆ ಅಥವಾ ಮುಟ್ಟದೆ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ.
ಆದರೆ ಈ “ರಾಮನ್ ಸ್ಪೆಕ್ಟ್ರೋಸ್ಕೋಪಿ” ತಂತ್ರಜ್ಞಾನ ಜಾರಿಗೆ ಬರಲು ಕಾರಣ 2006 ರ ಲಂಡನ್ ಹೀಥ್ರೂ ವಿಮಾನ ನಿಲ್ದಾಣದಲ್ಲಿ ನಡೆದ ವಿಧ್ವಂಸಕ ಕೃತ್ಯ, ಹತ್ತು ವಿಮಾನಗಳು ಮತ್ತು ಅಂದಾಜು 3000 ಪ್ರಯಾಣಿಕರನ್ನು ಗುರಿಯಾಗಿಸಿಕೊಂಡಿತ್ತು ಈ ಕೃತ್ಯ. 9/11 ದಾಳಿಯನ್ನು ಪ್ರತಿಬಿಂಬಿಸುವ ಈ ಬೃಹತ್ ಭಯೋತ್ಪಾದಕ ಸಂಚಿನಿಂದಾಗಿ, ಭಾರತೀಯ ವಿಜ್ಞಾನಿ ಸಿ.ವಿ. ರಾಮನ್ ಕಂಡುಹಿಡಿದ “ರಾಮನ್ ಎಫೆಕ್ಟ್” ಅನ್ನು ಬಳಸಿಕೊಂಡು ವಿಶ್ವಾದ್ಯಂತ ಬಾಂಬ್ಗಳು ಮತ್ತು ಭಯೋತ್ಪಾದಕ ಸಂಚುಗಳನ್ನು ಪತ್ತೆಹಚ್ಚುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಲು “ರಾಮನ್ ಸ್ಪೆಕ್ಟ್ರೋಸ್ಕೋಪಿ” ಜಾರಿಗೆ ಬಂದಿತು.
2006 ರ ಲಂಡನ್ ಹೀಥ್ರೂ ವಿಮಾನ ನಿಲ್ದಾಣದ ಭಯೋತ್ಪಾದಕ ಸಂಚಿನ ವಿಫಲತೆ
ಆಗಸ್ಟ್ 10, 2006 ರಂದು, ಬೆಳಿಗ್ಗೆ 4:00 ಗಂಟೆಗೆ, ಲಂಡನ್ನ ಹೀಥ್ರೂ ವಿಮಾನ ನಿಲ್ದಾಣವು ಸಾವಿರಾರು ಪ್ರಯಾಣಿಕರಿಂದ ತುಂಬಿತ್ತು. ನವವಿವಾಹಿತ ದಂಪತಿಗಳು, ವೃದ್ಧ ನಾಗರಿಕರು ಹೀಗೆ ಎಲ್ಲರೂ ಅಮೆರಿಕಕ್ಕೆ ತೆರಳಲು ತಮ್ಮ ವಿಮಾನಗಳಿಗಾಗಿ ಕಾಯುತ್ತಿದ್ದರು. ಎಲ್ಲವೂ ಸಾಮಾನ್ಯವೆಂದು ತೋರುತ್ತಿದ್ದರೂ, ತೆರೆಮರೆಯಲ್ಲಿ ಭಯಾನಕ ಪಿತೂರಿ ನಡೆಯುತ್ತಿತ್ತು. ಅಲ್ ಖೈದಾ ಭಯೋತ್ಪಾದಕ ಮಾಸ್ಟರ್ ಮೈಂಡ್ ಆಗಿದ್ದ ಅಲಿ ಅಬ್ದುಲ್ಲಾ ಅಹ್ಮದ್ ಸೇರಿದಂತೆ ಏಳು ಭಯೋತ್ಪಾದಕರು, ಆಗಸ್ಟ್ 10 ರಂದು 10 ವಿಮಾನಗಳನ್ನು ನುಸುಳಿ ಮಾರಕ ಸಂಚೊಂದನ್ನು ಜಾರಿಗೊಳಿಸಿ ಜನರ ಜೀವವನ್ನು ತೆಗೆಯುವ ಗುರಿಯನ್ನು ಹೊಂದಿದ್ದರು. ತನಿಖಾಧಿಕಾರಿಗಳು ನಂಬಿರುವಂತೆ ಅವರ ಕಾರ್ಯ ಯೋಜನೆಯು ಯುಎಸ್ ಮೇಲಿನ 9/11 ಭಯೋತ್ಪಾದಕ ದಾಳಿಯನ್ನು ಪ್ರತಿಬಿಂಬಿಸುವಂತಿತ್ತು. ಉಗ್ರರು ತಮ್ಮ ಕಾರ್ಯಾಚರಣೆ ಕಾರ್ಯಗತಗೊಳಿಸಲು ತಂಪು ಪಾನೀಯ ಬಾಟಲಿಗಳನ್ನು ಆಯ್ಕೆ ಮಾಡಿಕೊಂಡು ಅದರ ಸೀಲುಗಳನ್ನು ತೆಗೆಯದೆ, ಪಾನೀಯವನ್ನು ಬರಿದಾಗಿಸಲು ಹೈಪೋಡರ್ಮಿಕ್ ಸೂಜಿಗಳನ್ನು ಬಳಸಿದ್ದರು ಮತ್ತು ಅದನ್ನು ಹೆಕ್ಸಾಮೆಥಿಲೀನ್ ಟ್ರೈಪೆರಾಕ್ಸೈಡ್ ಡೈಮೈನ್ (HMTD) ಎಂಬ ದ್ರವ ಬಾಂಬ್ನಿಂದ ಬದಲಾಯಿಸಿದ್ದರು. ಪ್ರಮಾಣಿತ ಎಕ್ಸ್-ರೇ ಯಂತ್ರಗಳಿಗೆ ನಿರುಪದ್ರವ ದ್ರವವಾಗಿ ಕಂಡುಬರುವ ಈ ದ್ರವ ವಸ್ತುವು ಸುಮಾರು 3,000 ಪ್ರಯಾಣಿಕರನ್ನು ಹಾರಾಟದ ಮಧ್ಯದಲ್ಲಿ ಸಾಯಿಸಿ, ಆಕಾಶವನ್ನು ಸ್ಮಶಾನವನ್ನಾಗಿ ಮಾಡುವುದಾಗಿತ್ತು.
ಆದರೆ, ಸುಮಾರು 3000 ಪ್ರಯಾಣಿಕರನ್ನು ಹೊತ್ತೊಯ್ಯುವ 10 ವಿಮಾನಗಳನ್ನು ಗುರಿಯಾಗಿರಿಸಿಕೊಂಡು ನಡೆಸಲಾದ ಈ ಮಾರಕ ಭಯೋತ್ಪಾದಕ ಸಂಚನ್ನು ಬ್ರಿಟಿಷ್ ಗುಪ್ತಚರ ಸಂಸ್ಥೆಗಳು (MI5) ತಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ವಿಫಲಗೊಳಿಸಿದವು. ಗುಪ್ತ ಕ್ಯಾಮೆರಾಗಳು ಮತ್ತು ಮೈಕ್ರೊಫೋನ್ಗಳನ್ನು ಬಳಸಿಕೊಂಡು ಭಾಗಿಯಾಗಿರುವ ಭಯೋತ್ಪಾದಕರ ಮೇಲೆ ತನಿಖಾಧಿಕಾರಿಗಳು ಅದಾಗಲೇ ಕಣ್ಗಾವಲು ನಡೆಸುತ್ತಿದ್ದರಿಂದ ಈ ಕೃತ್ಯವನ್ನು ಗುಪ್ತಚರ ಅಧಿಕಾರಿಗಳಿಗೆ ವಿಫಲಗೊಳಿಸಲು ಸಾಧ್ಯವಾಯಿತು. ಹಿಂದಿನ ರಾತ್ರಿ, ಆಗಸ್ಟ್ 9 ರಂದು, ಬರ್ಮಿಂಗ್ಹ್ಯಾಮ್ ಮತ್ತು ಹೈ ವೈಕೊಂಬೆಯಲ್ಲಿ 24 ಶಂಕಿತರನ್ನು ಬಂಧಿಸಲಾಯಿತು ಮತ್ತು ಈ ಮೂಲಕ ದ್ರವ ಸ್ಫೋಟಕಗಳನ್ನು ಸ್ಫೋಟಿಸುವ ಯೋಜನೆಯನ್ನು ವಿಫಲಗೊಳಿಸಲಾಯಿತು. ತಂಪು ಪಾನೀಯಗಳು ಅಥವಾ ಸೋಡಾ ಬಾಟಲಿಗಳ ವೇಷದಲ್ಲಿದ್ದ ದ್ರವ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಈ ಸಂಚು ಕ್ಷಣಾರ್ಧದಲ್ಲಿ ವಿಫಲವಾಯಿತು.
ದ್ರವ ಸ್ಫೋಟಕಗಳ ರಹಸ್ಯ ಸ್ಫೋಟಿಸಿದ್ದು ರಾಮನ್ ಸ್ಪೆಕ್ಟ್ರೋಸ್ಕೋಪಿ
ಈ ಕೃತ್ಯದ ನಂತರ ಬಾಂಬ್ಗಳನ್ನು ಪತ್ತೆಹಚ್ಚುವ ತಂತ್ರಜ್ಞಾನದ ಅಗತ್ಯವು ಮುನ್ನೆಲೆಗೆ ಬಂದಿತು. ಆಗ ಬಂದಿದ್ದೇ ಸಿ.ವಿ. ರಾಮನ್ ಅವರ ರಾಮನ್ ಪರಿಣಾಮವನ್ನು ಬಳಸಿಕೊಂಡ ರಾಮನ್ ಸ್ಪೆಕ್ಟ್ರೋಸ್ಕೋಪಿ. ಈ ಸಾಧನವು ನಿರ್ದಿಷ್ಟ ತರಂಗಾಂತರದ ಲೇಸರ್ ಬೆಳಕನ್ನು ಅಪರಿಚಿತ ವಸ್ತುವಿನ ಕಡೆಗೆ ಕಳುಹಿಸುತ್ತದೆ. ಈ ಬೆಳಕು ಪ್ಲಾಸ್ಟಿಕ್ ಕವರ್ಗಳು ಅಥವಾ ಗಾಜಿನ ಬಾಟಲಿಗಳ ಮೂಲಕ ಹಾದುಹೋಗುತ್ತದೆ ಮತ್ತು ಆ ಬೆಳಕು ವಸ್ತುವಿನ ಅಣುಗಳನ್ನು ತಲುಪಿದಾಗ ‘ರಾಮನ್ ಸ್ಕ್ಯಾಟರ್’ ಎಂಬ ಪ್ರಕ್ರಿಯೆಯು ಸಂಭವಿಸುತ್ತದೆ. ಸರಳವಾಗಿ ಹೇಳುವುದಾದರೆ, ಒಳಗಿನ ಅಣುಗಳು ಹೇಗೆ ಕಂಪಿಸುತ್ತಿವೆ ಎಂಬುದರ ಆಧಾರದ ಮೇಲೆ ಬೆಳಕು ಅದರ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಪಾತ್ರೆಯೊಳಗೆ ಏನಿದೆ ಎಂಬುದನ್ನು ಎಂದಿಗೂ ತೆರೆಯದೆಯೇ ನಮಗೆ ತಿಳಿಯಲು ಅನುವು ಮಾಡಿಕೊಡುತ್ತದೆ.
ಪ್ರತಿಯೊಬ್ಬ ಮನುಷ್ಯನಿಗೂ ವಿಶಿಷ್ಟವಾದ ಫಿಂಗರ್ಪ್ರಿಂಟ್ ಇರುವಂತೆ, ಪ್ರತಿಯೊಂದು ರಾಸಾಯನಿಕವು (ಟಿಎನ್ಟಿ ಅಥವಾ ಹೈಡ್ರೋಜನ್ ಪೆರಾಕ್ಸೈಡ್ನಂತಹ) ತನ್ನದೇ ಆದ “ಸ್ಪೆಕ್ಟ್ರಲ್ ಫಿಂಗರ್ಪ್ರಿಂಟ್” ಅನ್ನು ಹೊಂದಿರುತ್ತದೆ. ಈ ಪರಮಾಣು ಬಂಧಗಳು ಎಂದಿಗೂ ಬದಲಾಗುವುದಿಲ್ಲ. ರಾಮನ್ ಸಾಧನವು ಈ ವಿಶಿಷ್ಟ ಮಾದರಿಯನ್ನು ಗುರುತಿಸುತ್ತದೆ ಮತ್ತು ವಸ್ತುವು ಏನೆಂದು ನಿಖರವಾಗಿ ಹೇಳುತ್ತದೆ – ಅದು ದ್ರವ, ಜೆಲ್ ಅಥವಾ ಪುಡಿ ಆಗಿರಲಿ – ಹೆಚ್ಚಿನ ನಿಖರತೆಯೊಂದಿಗೆ ಅದನ್ನು ಗುರುತಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


