
17 ನೇ ಶತಮಾನದ ಮಧ್ಯಭಾಗದಲ್ಲಿ ಡೆಕ್ಕನ್ ತೀವ್ರ ಸಂಕಷ್ಟದಲ್ಲಿತ್ತು. ನಿರಂತರ ಆಕ್ರಮಣಗಳು, ರಾಜಕೀಯ ಕ್ರಾಂತಿಗಳು ಮತ್ತು ಬಲವಂತದ ಮತಾಂತರಗಳು ಸಾಮಾನ್ಯವಾಗಿದ್ದವು ಮತ್ತು ಇದು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಅವರ ತಾಯಿ ಜೀಜಾಬಾಯಿಯವರ ಕುಟುಂಬದ ಮೇಲೆ ಪರಿಣಾಮ ಬೀರಿತು.
ಛತ್ರಪತಿ ಶಿವಾಜಿ ಮಹಾರಾಜರ ಪತ್ನಿಯ ಸಹೋದರ ಬಜಾಜಿ ನಿಂಬಾಳ್ಕರ್ ಕೂಡ ಧಾರ್ಮಿಕ ಮತಾಂತರಕ್ಕೆ ಬಲಿಯಾದರು. ಆ ಸಮಯದಲ್ಲಿ, ಆದಿಲ್ಶಾಹಿ ಸೈನಿಕರು ಬಜಾಜಿ ನಿಂಬಾಳ್ಕರ್ ಅವರನ್ನು ಬಲವಂತವಾಗಿ ಸೆರೆಹಿಡಿದು ಇಸ್ಲಾಂಗೆ ಮತಾಂತರಿಸಿದರು. ಆದಾಗ್ಯೂ, ಆ ಕಾಲದ ಚಿಂತನೆ ಹೇಗಿತ್ತೆಂದರೆ, ಒಮ್ಮೆ ಮತಾಂತರಗೊಂಡ ವ್ಯಕ್ತಿಯನ್ನು ಹಿಂದೂ ಸಮಾಜಕ್ಕೆ ಮರಳಿ ಸ್ವೀಕರಿಸಲಾಗುತ್ತಿರಲಿಲ್ಲ; ಅವರನ್ನು ಹೊರಗಿನವರು ಅಂತ ಪರಿಗಣಿಸಲಾಗುತ್ತಿತ್ತು.
ಈ ಸುದ್ದಿ ಛತ್ರಪತಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯವರಿಗೆ ತಲುಪಿದಾಗ, ಅವರು ತೀವ್ರ ದುಃಖಿತರಾದರು ಮತ್ತು ಚಿಂತಿತರಾದರು. ಮರಾಠರನ್ನು ನೇರವಾಗಿ ಸೋಲಿಸುವುದು ಕಷ್ಟಕರವೆಂದು ಅರ್ಥಮಾಡಿಕೊಂಡಿದ್ದ ಇಸ್ಲಾಮಿಕ್ ಆಕ್ರಮಣಕಾರರು ಮತಾಂತರಕ್ಕೆ ಮುಂದಾಗಿದ್ದರು. ಬಜಾಜಿಯಂತಹ ಪ್ರಮುಖ ಮುಖ್ಯಸ್ಥರನ್ನು ಬಲವಂತವಾಗಿ ಮತಾಂತರಿಸಲು ಸಾಧ್ಯವಾದರೆ, ಅದು ಸಮಾಜದಲ್ಲಿ ಭಯ ಮತ್ತು ಹತಾಶೆಯನ್ನು ಹರಡುತ್ತದೆ – ಎಂಬುದು ಅವರ ಭಾವನೆಯಾಗಿತ್ತು.
ರಾಜಮಾತಾ ಜೀಜಾಬಾಯಿ ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಮಾತನಾಡಿ, ಬಲವಂತವಾಗಿ ಮತಾಂತರಗೊಂಡ ವ್ಯಕ್ತಿಯನ್ನು ಮತ್ತೆ ಸ್ವೀಕರಿಸಬಹುದೇ ಎಂದು ಚರ್ಚಿಸಿದರು. ಈ ಕಲ್ಪನೆಯು ಸಂಪೂರ್ಣವಾಗಿ ಹೊಸದು ಮತ್ತು ಆ ಸಮಯದಲ್ಲಿ ಸಂಪ್ರದಾಯಕ್ಕೆ ವಿರುದ್ಧವಾಗಿತ್ತು, ಆದರೆ ರಾಜಮಾತಾ ಜೀಜಾಬಾಯಿ “ನಾವು ನಮ್ಮವರಾಗಿದ್ದವರನ್ನು, ಮತ್ತೆ ನಮ್ಮವರನ್ನಾಗಿಸಿಯೇ ಸ್ವೀಕರಿಸುತ್ತೇವೆ” ಎಂದು ಹೇಳಿದರು.
೧೬೫೧ ರ ಸುಮಾರಿಗೆ, ನಿಂಬಾಳ್ಕರ್ ಕುಟುಂಬದ ಪವಿತ್ರ ಸ್ಥಳವಾದ ಶಿಖರ್ ಶಿಂಗಣಾಪುರದಲ್ಲಿ ಶುದ್ಧೀಕರಣ ಮತ್ತು ಪುನರ್ ಪ್ರವೇಶ ಸಮಾರಂಭವನ್ನು ನಡೆಸಲಾಯಿತು. ಇಸ್ಲಾಮಿಕ್ ಆಕ್ರಮಣಕಾರರ ಭಯದಿಂದಾಗಿ ಅನೇಕ ಬ್ರಾಹ್ಮಣ ಪುರೋಹಿತರು ಬರಲೊಪ್ಪಲಿಲ್ಲ, ಆದರೆ ಕೆಲವು ವಿದ್ವಾಂಸರು ಮತ್ತು ಸುಧಾರಣಾವಾದಿ ಪುರೋಹಿತರು ಮುಂದೆ ಬಂದು ಸಮಾರಂಭವನ್ನು ನಡೆಸಿದರು.
ಈ ರೀತಿಯಾಗಿ, ಬಜಾಜಿ ನಿಂಬಾಳ್ಕರ್ ಅವರನ್ನು ಹಿಂದೂ ಸಮಾಜಕ್ಕೆ ಗೌರವಯುತವಾಗಿ ಮರು ಸ್ವೀಕರಿಸಲಾಯಿತು. ಇದು ಮರಾಠಾ ಇತಿಹಾಸದಲ್ಲಿ ‘ಘರ್ ವಾಪಸಿ’ಯ ಆರಂಭಿಕ ಉದಾಹರಣೆಗಳಲ್ಲಿ ಒಂದಾಯಿತು. ನಂತರ, ಮೊಘಲರು ನೇತಾಜಿ ಪಾಲ್ಕರ್ ಅವರನ್ನು ಬಲವಂತವಾಗಿ ಮತಾಂತರಿಸಿದಾಗ, ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ತಾಯಿ ಜೀಜಾಬಾಯಿಯವರ ಬೋಧನೆಗಳನ್ನು ಅನುಸರಿಸಿದರು ಮತ್ತು ನೇತಾಜಿಯನ್ನು ಗೌರವದಿಂದ ಘರ್ ವಾಪಸಿ ಮಾಡಿಸಿದರು. ದೇವಾಲಯಗಳನ್ನು ಪುನಃಸ್ಥಾಪಿಸುವುದು, ಸಂಪ್ರದಾಯಗಳನ್ನು ರಕ್ಷಿಸುವುದು ಮತ್ತು ತಮ್ಮ ಜನರನ್ನು ಮರಳಿ ಸ್ವಾಗತಿಸುವ ಈ ದೃಷ್ಟಿಕೋನವು ರಾಜಮಾತಾ ಜೀಜಾಬಾಯಿಯವರ ಪ್ರಮುಖ ಕೊಡುಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


