ನವದೆಹಲಿ: ಚುನಾವಣಾ ವಂಚನೆ ಆರೋಪದ ಮೇಲೆ ರಾಹುಲ್ ಗಾಂಧಿ ಅವರನ್ನು ಚುನಾವಣಾ ಆಯೋಗ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದು, ಕಾನೂನಿನಡಿಯಲ್ಲಿ ಔಪಚಾರಿಕ ಘೋಷಣೆಗೆ ಸಹಿ ಹಾಕಿ ಇಲ್ಲವೇ ಷ್ಟ್ರದ ಕ್ಷಮೆಯಾಚಿಸಿ ಎಂದು ಸೂಚಿಸಿದೆ.
“ರಾಹುಲ್ ಗಾಂಧಿ ಅವರ ವಿಶ್ಲೇಷಣೆ ನಿಜವೇ ಆಗಿದ್ದರೆ ಮತ್ತು ಚುನಾವಣಾ ಆಯೋಗದ ವಿರುದ್ಧದ ಅವರ ಆರೋಪಗಳು ನಿಜವೆಂದು ಅವರು ನಂಬಿದ್ದೇ ಆದರೆ ಘೋಷಣೆಗೆ ಸಹಿ ಹಾಕುವಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಬಾರದು. ರಾಹುಲ್ ಗಾಂಧಿ ಘೋಷಣೆಗೆ ಸಹಿ ಹಾಕದಿದ್ದರೆ, ಸತ್ವಃ ಅವರೇ ತಮ್ಮ ವಿಶ್ಲೇಷಣೆ ಮತ್ತು ಫಲಿತಾಂಶದ ತೀರ್ಮಾನಗಳು ಮತ್ತು ಅಸಂಬದ್ಧ ಆರೋಪಗಳನ್ನು ನಂಬುವುದಿಲ್ಲ ಎಂದರ್ಥ. ಇಂತಹ ಸಂದರ್ಭದಲ್ಲಿ ಅವರು ರಾಷ್ಟ್ರಕ್ಕೆ ಕ್ಷಮೆಯಾಚಿಸಬೇಕು. ಆದ್ದರಿಂದ, ಅವರಿಗೆ ಎರಡು ಆಯ್ಕೆಗಳಿವೆ- ಒಂದು ಘೋಷಣೆಗೆ ಸಹಿ ಮಾಡಿ ಅಥವಾ ಇಸಿಐ ವಿರುದ್ಧ ಅಸಂಬದ್ಧ ಆರೋಪಗಳನ್ನು ಮಾಡಿದ್ದಕ್ಕಾಗಿ ರಾಷ್ಟ್ರಕ್ಕೆ ಕ್ಷಮೆಯಾಚಿಸಿ” ಎಂದು ಆಯೋಗ ಖಡಕ್ ಆಗಿ ಸೂಚಿಸಿದೆ.
ಗುರುವಾರ ರಾಹುಲ್ ಅವರು ಕರ್ನಾಟಕ ಕ್ಷೇತ್ರದಲ್ಲಿ 1,00,250 ಮತಗಳ್ಳತನ ನಡೆದಿದೆ ಎಂದಿದ್ದಾರೆ ಮತ್ತು ವಿವಿಧ ಅಕ್ರಮಗಳ ಬಗ್ಗೆ ಆರೋಪಿಸಿ “ವೋಟ್ ಚೋರಿ” ಎಂದು ಆರೋಪಿಸಿದ್ದರು.
ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ತಯಾರಿಸಲಾಗುತ್ತದೆ ಮತ್ತು ಪಕ್ಷದ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಕರ್ನಾಟಕ ಚುನಾವಣಾ ಆಯುಕ್ತ ರಾಹುಲ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.