ನವದೆಹಲಿ: ಖಲಿಸ್ಥಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಭಾರತವನ್ನು ಕೆಣಕುವ ಮತ್ತೊಂದು ಕೃತ್ಯವನ್ನು ಎಸಗಿದೆ. ಗುರುನಾನಕ್ ಸಿಖ್ ಗುರುದ್ವಾರ ದೇವಾಲಯದ ಸಹಯೋಗದೊಂದಿಗೆ, ಕೆನಡಾದ ಸರ್ರೆಯಲ್ಲಿ ‘ಖಲಿಸ್ತಾನದ ರಾಯಭಾರ ಕಚೇರಿ’ಯನ್ನು ಸ್ಥಾಪಿಸಿದೆ.
‘ರಿಪಬ್ಲಿಕ್ ಆಫ್ ಖಲಿಸ್ತಾನ್’ ಎಂದು ಕಛೇರಿಯ ಮುಂದೆ ಫಲಕವನ್ನು ಹಾಕಲಾಗಿದೆ. ಸರ್ರೆಯ ಪ್ರಸಿದ್ಧ ಸಿಖ್ ಸಮುದಾಯ ಕೇಂದ್ರವಾದ ಗುರುದ್ವಾರ ಆವರಣದಲ್ಲಿರುವ ಕಟ್ಟಡದ ಪ್ರವೇಶದ್ವಾರದಲ್ಲಿ ಫಲಕ ಇದೆ.
ಸ್ಥಳೀಯ ನಿವಾಸಿಗಳು “ರಾಯಭಾರ ಕಚೇರಿ” ಇರುವ ಕಟ್ಟಡವನ್ನು ಬ್ರಿಟಿಷ್ ಕೊಲಂಬಿಯಾದ ಪ್ರಾಂತೀಯ ಸರ್ಕಾರದ ನಿಧಿಯಿಂದ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ, ಪ್ರಾಂತೀಯ ಸರ್ಕಾರವು ಸೌಲಭ್ಯದಲ್ಲಿ ಲಿಫ್ಟ್ ಅಳವಡಿಸಲು $150,000 ಮಂಜೂರು ಮಾಡಿದೆ ಎಂದು ವರದಿಯಾಗಿದೆ.
ಕೆನಡಾದ ಗುಪ್ತಚರ ಸಂಸ್ಥೆ, ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್ (ಸಿಎಸ್ಐಎಸ್) ಮಹತ್ವದ ಸಾರ್ವಜನಿಕ ಸಂಗತಿಯನ್ನು ಬಹಿರಂಗಪಡಿಸಿದ ಕೆಲವೇ ತಿಂಗಳುಗಳ ನಂತರ ಈ ಘಟನೆ ಸಂಭವಿಸಿದೆ. “ಖಲಿಸ್ತಾನಿ ಉಗ್ರಗಾಮಿಗಳು ಪ್ರಾಥಮಿಕವಾಗಿ ಭಾರತದಲ್ಲಿ ಹಿಂಸಾಚಾರದ ಪ್ರಚಾರ, ನಿಧಿಸಂಗ್ರಹಣೆ ಅಥವಾ ಯೋಜನೆಗಾಗಿ ಕೆನಡಾವನ್ನು ನೆಲೆಯಾಗಿ ಬಳಸುವುದನ್ನು ಮುಂದುವರೆಸಿದ್ದಾರೆ” ಎಂದು ಸಿಎಸ್ಐಎಸ್ ದೃಢಪಡಿಸಿದೆ.
ಕೆನಡಾದ ನೆಲದಲ್ಲಿ ನಡೆಯುತ್ತಿರುವ ಖಾಲಿಸ್ಥಾನಿ ಉಗ್ರವಾದದ ಬಗ್ಗೆ ಭಾರತ ಪದೇ ಪದೇ ಕಳವಳ ವ್ಯಕ್ತಪಡಿಸಿದರೂ ಇಂತಹ ಕೃತ್ಯಗಳು ನಡೆಯುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.