ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಮುಂದಾಳತ್ವದಲ್ಲಿ ಸಾಧ್ಯತೆಗಳ ಸಾಗರವಾಗಿರುವ ಮಂಗಳೂರಿನಲ್ಲಿ ಮುಂದಿನ ಐದು ವರ್ಷದಲ್ಲಿ ಉದ್ದಿಮೆ ರಂಗದಲ್ಲಿ ಹೊಸ ಯಶೋಗಾಥೆ ಸೃಷ್ಟಿಸುವ ಉದ್ದೇಶದಿಂದ 🪔”ಬೊಲ್ಪು”🪔 ಎಂಬ ವಿಶೇಷ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ.
ಬೊಲ್ಪುವಿನ ಉದ್ದೇಶ ಏನು?
ಮಂಗಳೂರನ್ನು ಜಾಗತಿಕ ಉದ್ಯಮ ಹಬ್ ಆಗಿ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ, ಮಂಗಳೂರು ಹಾಗೂ ಮಂಗಳೂರು ಮೂಲದ ಉದ್ಯಮ ಸ್ಥಾಪಿಸುವ ಕನಸಿರುವ ಆರಂಭಿಕ/ಮಧ್ಯಮ ಹಂತದ ಮತ್ತು ಉದಯೋನ್ಮುಖ ಉದ್ಯಮಿಗಳಿಗೆ ಬೊಲ್ಪು ಸೂಕ್ತ ಅವಕಾಶ ಕಲ್ಪಿಸಲಿದೆ. ತಮ್ಮ ಹೊಸ ಕಲ್ಪನೆ-ಅಲೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕು, ಉದ್ಯಮ ಸ್ಥಾಪಿಸಬೇಕು ಎನ್ನುವ ತುಡಿತವಿರುವರಿಗೆ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು, ಅವುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮತ್ತು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಬೆಳೆಸಲು ಅಗತ್ಯವಾದ ಸಂಪೂರ್ಣ ನೆರವು ಹಾಗೂ ಪರಿಸರ ವ್ಯವಸ್ಥೆಯನ್ನು ಬೊಲ್ಪು ಒದಗಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 50 ಯಶೋಗಾಥೆಗಳನ್ನು ಸೃಷ್ಟಿಸುವ ಗುರಿಯನ್ನು “ಬೊಲ್ಪು” ಹೊಂದಿದೆ.
ಅರ್ಜಿ ಸಲ್ಲಿಸುವುದು ಹೇಗೆ?
➡️ಅಧಿಕೃತ ವೆಬ್ಸೈಟ್ bolpumangaluru.com ಗೆ ಹೋಗಿ
➡️‘Apply Now’ ಬಟನ್ನಲ್ಲಿ ಕ್ಲಿಕ್ ಮಾಡಿ
➡️ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ (ಉದ್ಯಮದ ಮಾದರಿ, ಉದ್ಯಮದ ಹಂತ, ವಿಸ್ತರಣೆ, ವ್ಯಕ್ತಿಗತ ವಿವರ, ಯೋಜನೆ ಸಾರಾಂಶ ಮುಂತಾದವು)
Bolpuವಿಗೆ ಆಯ್ಕೆಯಾದವರಿಗೆ ತಂತ್ರಜ್ಞಾನದ ಬೆಂಬಲ, ಹಣಕಾಸು, ಮಾರುಕಟ್ಟೆಗೆ ಬಿಡುಗಡೆಗೆ ಪ್ರೋತ್ಸಾಹ ಹೀಗೆ ಸಮಗ್ರ ವೇದಿಕೆಯನ್ನು ಒದಗಿಸಲಿದೆ.
ಮಂಗಳೂರಿನಲ್ಲಿ ನಿಮ್ಮ ಉದ್ಯಮದ ಕನಸನ್ನು ನನಸಾಗಿಸಲು ಬೊಲ್ಪು ಒಂದು ಉತ್ತಮ ಅವಕಾಶವಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ವಿಳಾಸ: ಸಂಸದರ ಕಚೇರಿ 204-2ನೇ ಮಹಡಿ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ, ಬಂದರು, ಮಂಗಳೂರು, ಕರ್ನಾಟಕ – 575001
ದೂರವಾಣಿ : +91 82771 13300
ಮೇಲ್: reachus@bolpumangaluru.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.