ನವದೆಹಲಿ: ಕೇರಳ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಯೆಮೆನ್ನಲ್ಲಿ ಮುಂದೂಡಲಾಗಿದ್ದು, ಇದು ಆಕೆಯ ಕುಟುಂಬಕ್ಕೆ ದೊಡ್ಡ ರಿಲೀಫ್ ತಂದಿದೆ. ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ ಸ್ಥಳೀಯ ಅಧಿಕಾರಿಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಕೇರಳದ ನರ್ಸ್ ಅನ್ನು ಉಳಿಸಲು ಕೊನೆಯ ಪ್ರಯತ್ನವಾಗಿ ಮಾತುಕತೆಗಳು ನಡೆಯುತ್ತಿವೆ.
ಪ್ರಿಯಾ ಅವರ ಮರಣದಂಡನೆಯನ್ನು ನಾಳೆಗೆ ನಿಗದಿಪಡಿಸಲಾಗಿತ್ತು, ಆದರೆ ಕೊಲೆಯಾದ ವ್ಯಕ್ತಿಯ ಕುಟುಂಬವನ್ನು ಮನವೊಲಿಸಿ ಅದನ್ನು ಕನಿಷ್ಠ ಒಂದು ದಿನ ಮುಂದೂಡಲು ಮನವರಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರರ್ಥ ಆಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಅಥವಾ ಭಾರತಕ್ಕೆ ಹಿಂತಿರುಗಿಸಲಾಗುತ್ತದೆ ಎಂದಲ್ಲ ಎಂಬುದನ್ನು ಕೂಡ ಮೂಲಗಳು ಸ್ಪಷ್ಟಪಡಿಸಿವೆ.
ನಿಮಿಷಾ ಪ್ರಸ್ತುತ ಯೆಮೆನ್ನ ಹೌತಿ ಹಿಡಿತದಲ್ಲಿರುವ ರಾಜಧಾನಿ ಸನಾದಲ್ಲಿದ್ದಾರೆ. ಭಾರತವು ಹೌತಿ ಬಂಡುಕೋರರೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ.
ಮರಣದಂಡನೆಯನ್ನು ನಿಲ್ಲಿಸಲು ತನ್ನ ಮಿತಿಯೊಳಗೆ ಎಲ್ಲವನ್ನೂ ಮಾಡಿದೆ ಎಂದು ಭಾರತ ಸರ್ಕಾರ ನಿನ್ನೆ ಪ್ರತಿಪಾದಿಸಿತ್ತು, ʼಬ್ಲಡ್ ಮನಿʼ ನೀಡಿ ಮರಣದಿಂದ ತಪ್ಪಿಸಿಕೊಳ್ಳುವುದು ಪ್ರಿಯಾಗೆ ಇರುವ ಕೊನೆಯ ಆಯ್ಕೆ. ಆದರೆ ಅದಕ್ಕೆ ಮೃತನ ಕುಟುಂಬ ಇದುವರೆಗೆ ಒಪ್ಪಿಕೊಂಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.