ನವದೆಹಲಿ: ಪೊಳ್ಳು ಜಾತ್ಯಾತೀತತೆಯನ್ನು ಅಂತ್ಯಗೊಳಿಸಬೇಕಾದ ಅಗತ್ಯತೆಯನ್ನು ಸಾರಿರುವ ಬಾಂಗ್ಲಾದೇಶದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಾಹಿತಿಗಳ ದ್ವಿಮುಖ ನೀತಿಯನ್ನು ಪ್ರಶ್ನಿಸಿದ್ದಾರೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ನನ್ನ ಪುಸ್ತಕವನ್ನು ಪಶ್ಚಿಮಬಂಗಾಳ ನಿಷೇಧಿಸಿದಾಗ, ನನ್ನ ವಿರುದ್ಧ 5 ಫತ್ವಾಗಳನ್ನು ಹೊರಡಿಸಿದಾಗ ಬಹುತೇಕ ಬರಹಗಾರರು ಸುಮ್ಮನಿದ್ದರು. ಇನ್ನೂ ಕೆಲವರಂತು ನನ್ನ ಪುಸ್ತಕ ನಿಷೇಧಿಸಲು ಆಗಿನ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಮನವಿಯನ್ನೂ ಮಾಡಿಕೊಂಡರು.
‘ಈಗ ಅವರು ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸುವ ಮೂಲಕ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ಇದರಲ್ಲಿ ಯಾವುದೇ ತಪ್ಪಿಲ್ಲ. ಕೆಲವರು ಒಂದು ಐಡಿಯಾವನ್ನು ಹುಟ್ಟು ಹಾಕಿದರೆ ಅದನ್ನು ಇನ್ನಿತರರು ಇಷ್ಟಪಡುತ್ತಾರೆ. ಆದರೆ ಅಸಮ್ಮತಿಯ ವಿಷಯ ಬಂದಾಗ ಹೆಚ್ಚಿನ ಬರಹಗಾರರು ಡಬಲ್ ಸ್ಟ್ಯಾಂಡರ್ಡ್ನ್ನು ಅನುಸರಿಸುತ್ತಾರೆ’ ಎಂದು ತಸ್ಲೀಮಾ ಆರೋಪಿಸಿದ್ದಾರೆ.
ಅಲ್ಲದೇ ಭಾರತದ ಹೆಚ್ಚಿನ ಜಾತ್ಯಾತೀತವಾದಿಗಳು, ಪ್ರಗತಿಪರರು ಮುಸ್ಲಿಂ ಪರವಾದ ಮತ್ತು ಹಿಂದೂ ವಿರೋಧಿ ಧೋರಣೆಯನ್ನು ಇಟ್ಟುಕೊಂಡಿದ್ದಾರೆ ಎನ್ನುವ ಮೂಲಕ ಪೊಳ್ಳು ಜಾತ್ಯಾತೀತವಾದಿಗಳ ವಿರುದ್ಧ ತಸ್ಲೀಮಾ ಕಿಡಿಕಾರಿದ್ದಾರೆ.
ಭಾರತೀಯ ರಾಜಕಾರಣಿಗಳು ಮತಕ್ಕಾಗಿ ಮುಸ್ಲಿಮರನ್ನು ಓಲೈಸುತ್ತಾರೆ. ಇದು ಹಿಂದೂಗಳನ್ನು ಕೆರಳಿಸುತ್ತದೆ. ೨೦೧೩ರಲ್ಲಿ ಹಿಂದೂ ಗ್ರಾಮವನ್ನು ಪಶ್ಚಿಮಬಂಗಾಳದಲ್ಲಿ ಮುಸ್ಲಿಮರು ಸುಟ್ಟು ಹಾಕಿದ್ದರು. ಹೆಚ್ಚಿನ ಜಾತ್ಯಾತೀತರು ಹಿಂದೂ ವಿರೋಧಿ, ಮುಸ್ಲಿಂ ಪರವಾಗಿರುವವರು. ಹಿಂದೂ ಮೂಲಭೂತವಾದಿಗಳು ಕುಕೃತ್ಯ ನಡೆಸಿದಾಗ ಪ್ರತಿಭಟಿಸುತ್ತಾರೆ, ಆದರೆ ಮುಸ್ಲಿಂ ಮೂಲಭೂತವಾದಿಗಳು ಕುಕೃತ್ಯ ನಡೆಸಿದಾಗ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. ಒಂದು ವೇಳೆ ಭಾರತದಲ್ಲಿ ಮುಸ್ಲಿಮರ ಮೇಲೆ ಅಮಾನುಷವಾಗಿ ದಾಳಿ ನಡೆಸಲಾಗುತ್ತಿದ್ದರೆ ಅವರು ಬಾಂಗ್ಲಾ ಹಿಂದೂಗಳು ಭಾರತಕ್ಕೆ ವಲಸೆ ಬಂದಂತೆ ಪಾಕಿಸ್ಥಾನಕ್ಕೆ ವಲಸೆ ಹೋಗುತ್ತಿದ್ದರು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.