ನವದೆಹಲಿ: ಪವಿತ್ರ ಕನ್ವರ್ ಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಇದು ಅತ್ಯಂತ ಪ್ರಮುಖ ಹಿಂದೂ ಧಾರ್ಮಿಕ ಯಾತ್ರೆಯಾಗಿದ್ದು, ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಯಾತ್ರೆಯಲ್ಲಿ ಭಕ್ತರು (ಕನ್ವರಿಯಾಗಳು) ಗಂಗಾ ನದಿಯಿಂದ ಪವಿತ್ರ ಜಲವನ್ನು ಕನ್ವರ್ (ಬಿದಿರಿನ ಕೋಲಿನ ಎರಡೂ ಬದಿಗಳಲ್ಲಿ ಜೋಡಿಸಲಾದ ಜಲಪಾತ್ರೆ) ನಲ್ಲಿ ತುಂಬಿಕೊಂಡು ಶಿವನ ದೇವಾಲಯಗಳಿಗೆ ಸಮರ್ಪಿಸುತ್ತಾರೆ.
ಯಾತ್ರೆಯು ಜುಲೈ 23 ರವರೆಗೆ ಮುಂದುವರೆಯಲಿದೆ.
ಕನ್ವರಿಯಾಗಳು ಹರಿದ್ವಾರದ ಹರ್ ಕಿ ಪೌರಿಯಲ್ಲಿ, ಪ್ರಯಾಗರಾಜ್ನ ದಶಾಶ್ವಮೇಧ ಘಾಟ್ನಲ್ಲಿ, ಗಾಜಿಯಾಬಾದ್, ಮೀರತ್, ಮುಜಫರ್ನಗರ, ಮತ್ತು ದೇವಘರ್ ಮುಂತಾದ ಗಾಜಿಯಾಬಾದ್, ಮೀರತ್, ಮುಜಫರ್ನಗರ, ಮತ್ತು ದೇವಘರ್ ಮುಂತಾದ ಗಂಗಾ ನದಿ ತೀರಗಳಿಂದ ಪವಿತ್ರ ಸ್ನಾನ ಮಾಡಿ ಜಲವನ್ನು ಸಂಗ್ರಹಿಸುತ್ತಾರೆ.
ಭಕ್ತರು ಗಂಗಾಜಲವನ್ನು ಶಿವನ ದೇವಾಲಯಗಳಾದ ಕಾಶಿಯ ಕಾಶಿ ವಿಶ್ವನಾಥ ದೇವಸ್ಥಾನ, ದೇವಘರದ ಬೈದ್ಯನಾಥ ದೇವಸ್ಥಾನ, ಅಥವಾ ಇತರ ಪ್ರಮುಖ ಶಿವಾಲಯಗಳಿಗೆ ಸಮರ್ಪಿಸುತ್ತಾರೆ. ಇವರು ಗಂಗಾಜಲವನ್ನು ಕನ್ವರ್ನಲ್ಲಿ ತುಂಬಿಕೊಂಡು ಕಾಲ್ನಡಿಗೆಯಲ್ಲಿ ಶಿವಾಲಯಗಳಿಗೆ ತೆರಳುತ್ತಾರೆ.
ಯಾತ್ರೆಯ ಸಮಯದಲ್ಲಿ “ಹರ್ ಹರ್ ಮಹಾದೇವ್” ಘೋಷಣೆಯನ್ನು ಆರಿಸಿದರೆ ಶಿವನ ಭಕ್ತಿಗೀತೆಗಳನ್ನು ಹಾಡಿದರು.
ಉಪವಾಸವನ್ನು ಆಚರಿಸುತ್ತಾರೆ ಮತ್ತು ಶಿವನ ಆರಾಧನೆಯಲ್ಲಿ ತೊಡಗುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.