ನವದೆಹಲಿ: ಕನನಾಸ್ಕಿಸ್ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾದ ಹೊಸದಾಗಿ ಆಯ್ಕೆಯಾದ ಪ್ರಧಾನಿ ಮಾರ್ಕ್ ಕಾರ್ನಿ ನಡುವೆ ಮಹತ್ವದ ಸಭೆ ನಡೆದಿದೆ, ತಿಂಗಳುಗಳ ಕಾಲ ಹದಗೆಟ್ಟ ಸಂಬಂಧಗಳ ಬಳಿಕ ಈ ಸಭೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ. ಈ ಸಭೆಯಲ್ಲಿ ಭಾರತ ಮತ್ತು ಕೆನಡಾ ತಮ್ಮ ಹೈಕಮಿಷನರ್ಗಳನ್ನು ಪುನಃಸ್ಥಾಪಿಸಲು ಒಪ್ಪಿಕೊಂಡಿವೆ ಎಂದು ಮೂಲಗಳು ವರದಿ ಮಾಡಿವೆ.
ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಹೈಕಮಿಷನರ್ಗಳನ್ನು ಮರುಸ್ಥಾಪಿಸುವುದರೊಂದಿಗೆ ಪ್ರಾರಂಭಿಸಿ ಸಂಬಂಧಗಳನ್ನು ಸ್ಥಿರಗೊಳಿಸುವವರೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
“ಇನ್ನಿತರ ರಾಜತಾಂತ್ರಿಕ ಕ್ರಮಗಳು ಸೂಕ್ತ ಸಮಯದಲ್ಲಿ ಅನುಷ್ಠಾನಗೊಳ್ಳಲಿದೆ” ಎಂದು ಅವರು ಹೇಳಿದರು.
ಸ್ಥಗಿತಗೊಂಡ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸಲು ಮೋದಿ ಮತ್ತು ಕಾರ್ನಿ ಒಪ್ಪಿಕೊಂಡರು ಮತ್ತು ಶೀಘ್ರದಲ್ಲೇ ಮಾತುಕತೆಗಳನ್ನು ಪುನರಾರಂಭಿಸುವಂತೆ ತಮ್ಮ ಅಧಿಕಾರಿಗಳಿಗೆ ನಿರ್ದೇಶಿಸಲು ನಿರ್ಧರಿಸಿದರು. ಮುಕ್ತ ಸಂವಾದವನ್ನು ಕಾಪಾಡಿಕೊಳ್ಳಲು ಎರಡೂ ಕಡೆಯವರು ಉತ್ಸುಕರಾಗಿದ್ದಾರೆ ಎಂದು ವಿಕ್ರಮ್ ಮಿಶ್ರಿ ಹೇಳಿದರು.
ಮೋದಿ-ಕಾರ್ನಿ ಸಂವಾದದ ಉದ್ದೇಶವು ಎರಡೂ ರಾಷ್ಟ್ರಗಳ ನಡುವೆ ಸಾಮಾನ್ಯ ಕಾನ್ಸುಲರ್ ಮತ್ತು ವ್ಯಾಪಾರ ಸೇವೆಗಳನ್ನು ಪುನಃಸ್ಥಾಪಿಸುವುದಾಗಿತ್ತು.
ಕೆನಡಾದ ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆಯ ಪ್ರಕಾರ, ಮಾರ್ಕ್ ಕಾರ್ನಿ ಮತ್ತು ಪ್ರಧಾನಿ ಮೋದಿ ಅವರು ಪರಸ್ಪರ ಗೌರವ, ಕಾನೂನಿನ ನಿಯಮಕ್ಕೆ ಬದ್ಧತೆ ಮತ್ತು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಹಂಚಿಕೆಯ ಬದ್ಧತೆಯಲ್ಲಿ ನೆಲೆಗೊಂಡಿರುವ ಕೆನಡಾ-ಭಾರತ ಸಂಬಂಧಗಳ ಮಹತ್ವವನ್ನು ಪುನರುಚ್ಚರಿಸಿದ್ದಾರೆ.
“ಎರಡೂ ದೇಶಗಳಲ್ಲಿನ ನಾಗರಿಕರು ಮತ್ತು ವ್ಯವಹಾರಗಳಿಗೆ ನಿಯಮಿತ ಸೇವೆಗಳಿಗೆ ಮರಳುವ ಉದ್ದೇಶದಿಂದ ಹೊಸ ಹೈಕಮಿಷನರ್ಗಳನ್ನು ನೇಮಿಸಲು ನಾಯಕರು ಒಪ್ಪಿಕೊಂಡರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ನಮ್ಮ ಜನರ ನಡುವಿನ ಬಲವಾದ ಮತ್ತು ಐತಿಹಾಸಿಕ ಸಂಬಂಧಗಳು, ಆರ್ಥಿಕ ಬೆಳವಣಿಗೆಯಲ್ಲಿ ಪಾಲುದಾರಿಕೆ, ಪೂರೈಕೆ ಸರಪಳಿಗಳು ಮತ್ತು ಇಂಧನ ಪರಿವರ್ತನೆ ಸೇರಿದಂತೆ ಇಂಡೋ-ಪೆಸಿಫಿಕ್ನಲ್ಲಿನ ಪಾಲುದಾರಿಕೆಗಳು ಮತ್ತು ಕೆನಡಾ ಮತ್ತು ಭಾರತದ ನಡುವಿನ ಮಹತ್ವದ ವಾಣಿಜ್ಯ ಸಂಪರ್ಕಗಳ ಬಗ್ಗೆ ಉಭಯ ಆಯಕರು ಚರ್ಚಿಸಿದರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.