ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶುಕ್ರವಾರ ಇಸ್ರೇಲಿ ಮತ್ತು ಇರಾನಿನ ಸಚಿವರುಗಳಿಗೆ ಪ್ರತ್ಯೇಕ ಫೋನ್ ಕರೆಗಳನ್ನು ಮಾಡಿ ಮಾತನಾಡಿದರು.
ಇರಾನಿನ ಭೂಪ್ರದೇಶದ ಮೇಲೆ ಇಸ್ರೇಲಿ ದಾಳಿ ನಡೆಸಿ ವಿಧ್ವಂಸವನ್ನೇ ಸೃಷ್ಟಿಸಿದೆ. ಇದರಿಂದ ಸಿಡಿದೆದ್ದಿರುವ ಟೆಹ್ರಾನ್ ಪ್ರಬಲ ಪ್ರತಿಕ್ರಿಯೆಯ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಇಸ್ರೇಲ್ ಮೇಲೆ ಡ್ರೋನ್ ದಾಳಿಗಳನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಜೈಶಂಕರ್ ಅವರು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಎರಡೂ ಕಡೆಯವರೊಂದಿಗೆ ಸಂಭಾಷಣೆಗಳನ್ನು ನಡೆಸಿದ್ದಾರೆ.
ಎರಡೂ ರಾಷ್ಟ್ರಗಳೊಂದಿಗೆ ಸಂವಾದವನ್ನು ನಡೆಸುವ ಮೂಲಕ, ಭಾರತವು ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಶಾಂತಿ ಪಾಲಿಸಲು, ಸಂಯಮವನ್ನು ಹೊಂದಲು ಪ್ರಚೋದಿಸುತ್ತಿದೆ.
ಇಸ್ರೇಲ್ ಶುಕ್ರವಾರ ಇರಾನ್ನಾದ್ಯಂತ ಸರಣಿ ದಾಳಿಗಳನ್ನು ನಡೆಸಿತು, ಅದರ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಿಲಿಟರಿ ಸ್ಥಾಪನೆಗಳು ಮತ್ತು ತಾಣಗಳನ್ನು ಹೊಡೆದುರುಳಿಸಿದೆ.
Received a call this afternoon from FM @gidonsaar of Israel regarding ongoing developments.
— Dr. S. Jaishankar (@DrSJaishankar) June 13, 2025
Spoke to Iranian FM @araghchi this evening on the latest situation.
— Dr. S. Jaishankar (@DrSJaishankar) June 13, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.