ನವದೆಹಲಿ: ವಿಯೆಟ್ನಾಂನಾದ್ಯಂತ ಐತಿಹಾಸಿಕ ಮತ್ತು ಭಾವನಾತ್ಮಕ ಯಾತ್ರೆ ಕೈಗೊಂಡಿರುವ ಬುದ್ಧನ ಅವಶೇಷಗಳು ನಿಗದಿಯಂತೆ ಇಂದು ಭಾರತಕ್ಕೆ ವಾಪಾಸ್ ಆಗಿದೆ. ಒಂದು ತಿಂಗಳ ಅವಧಿಯಲ್ಲಿ, ಈ ಅವಶೇಷಗಳ ದರ್ಶನವನ್ನು ವಿಯೆಟ್ನಾಂನಲ್ಲಿ ಅಂದಾಜು 17.8 ಮಿಲಿಯನ್ ಭಕ್ತರು ಪಡೆದುಕೊಂಡಿದ್ದಾರೆ, ಇದು ಇತ್ತೀಚಿನ ಇತಿಹಾಸದಲ್ಲಿನ ಅತಿದೊಡ್ಡ ಬೌದ್ಧ ಪೂಜಾ ಕಾರ್ಯಕ್ರಮ ಎಂಬ ಕೀರ್ತಿಗೂ ಪಾತ್ರವಾಯಿತು.
ಭಾರತ ಮತ್ತು ವಿಯೆಟ್ನಾಂ ನಡುವಣ ಆಧ್ಯಾತ್ಮಿಕ ರಾಜತಾಂತ್ರಿಕತೆ ಮತ್ತು ಹಂಚಿಕೆಯ ಪರಂಪರೆಯ ಮಹತ್ವವನ್ನು ಈ ಯಾತ್ರೆ ಪ್ರತಿಬಿಂಬಿಸುತ್ತದೆ.
ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ (ಐಬಿಸಿ) ಸಹಯೋಗದೊಂದಿಗೆ ಭಾರತ ಸರ್ಕಾರವು ವಿಯೆಟ್ನಾಂಗೆ ಕಳುಹಿಸಿದ ಅವಶೇಷಗಳು, ದಕ್ಷಿಣ ನಗರವಾದ ಹೋ ಚಿ ಮಿನ್ಹ್ನಿಂದ ಉತ್ತರ ಪ್ರಾಂತ್ಯದ ಕ್ವಾಂಗ್ ನಿನ್ಹ್ವರೆಗೆ ವಿಯೆಟ್ನಾಂನ ಒಂಬತ್ತು ಪ್ರಮುಖ ತಾಣಗಳಲ್ಲಿ ಪ್ರಯಾಣಿಸಿದೆ.
ಯಾತ್ರೆಯ ಉದ್ದಕ್ಕೂ, ಭಕ್ತರು ಧ್ಯಾನ, ಪಠಣ, ಧರ್ಮ ಬೋಧನೆಗಳು ಮತ್ತು ಮೆರವಣಿಗೆಗಳನ್ನು ನಡೆಸಿದರು. ನಗರಗಳು ಮತ್ತು ಪಗೋಡ ಏಕತೆಯ ಕೇಂದ್ರಗಳಾಗಿ ಪರಿವರ್ತನೆಗೊಂಡವು. ಈ ತೀರ್ಥಯಾತ್ರೆಯು ವಿಯೆಟ್ನಾಂನ ಆಳವಾದ ಬೌದ್ಧ ಸಂಪ್ರದಾಯಗಳನ್ನು ಪ್ರದರ್ಶಿಸಿದ್ದಲ್ಲದೆ, ಭಾರತ ಮತ್ತು ವಿಯೆಟ್ನಾಂ ನಡುವಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸಿದೆ.
ವಿಯೆಟ್ನಾಂ ಸನ್ಯಾಸಿಗಳು, ಅಧಿಕಾರಿಗಳು ಮತ್ತು ಭಾರತೀಯ ಪ್ರತಿನಿಧಿಗಳು ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಬುದ್ಧ ಅವಶೇಷಗಳನ್ನು ಗೌರವಯುತವಾಗಿ ಭಾರತಕ್ಕೆ ಹಿಂತಿರುಗಿಸಿದರು. ಹಸ್ತಾಂತರವನ್ನು ಸಾಂಪ್ರದಾಯಿಕ ಪಠಣಗಳು, ಪುಷ್ಪಾರ್ಚನೆ ಮತ್ತು ಪ್ರಾರ್ಥನೆಗಳೊಂದಿಗೆ ನಡೆಸಲಾಯಿತು, ಇದು ರಾಷ್ಟ್ರಗಳು ಮತ್ತು ತಲೆಮಾರುಗಳಾದ್ಯಂತ ಬುದ್ಧನ ಸಂದೇಶದ ನಿರಂತರತೆಯನ್ನು ಸಂಕೇತಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.