ಶ್ರೀನಗರ: ನೂರಾರು ಕಾಶ್ಮೀರಿ ಪಂಡಿತರು ಒಟ್ಟುಗೂಡಿ ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಾಲ್ ಜಿಲ್ಲೆಯ ತುಲ್ಮುಲ್ಲಾದಲ್ಲಿ ವಾರ್ಷಿಕ ಖೀರ್ ಭವಾನಿ ಉತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಇದು ಕಾಶ್ಮೀರದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಸಂಕೇತಿಸುವ ಒಂದು ಪ್ರಾಚೀನ ಉತ್ಸವವಾಗಿದೆ.
ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಉತ್ಸವಕ್ಕೆ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಹವಮಾನ ಕಾರಣದಿಂದಲೂ ಉತ್ಸವ ಅಡ್ಡಿಯನ್ನು ಎದುರಿಸಿತ್ತು, ಆದರೆ ಕಾಶ್ಮೀರಿ ಪಂಡಿತರ ದಿಟ್ಟ ನಿರ್ಧಾರ ಎಲ್ಲಾ ಅಡೆತಡೆಗಳನ್ನು ಮೀರಿ ಖೀರ್ ಭವಾನಿ ಉತ್ಸವವನ್ನು ಯಶಸ್ವಿಗೊಳಿಸಿದೆ. ಭವಾನಿ ಮೇಲಿನ ನಂಬಿಕೆಯು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಚದುರಿಹೋಗಿರುವ ನೂರಾರು ಕಾಶ್ಮೀರ ಪಂಡಿತರ ಪುನರ್ಮಿಲನಕ್ಕೆ ಸಾಕ್ಷಿಯಾಗಿದೆ ಮತ್ತು ಅವರನ್ನು ತಮ್ಮ ಮೂಲ ಬೇರುಗಳಿಗೆ ಮತ್ತೆ ಕರೆತಂದಿದೆ.
1990 ರಲ್ಲಿ ಭಯೋತ್ಪಾದಕ ದಾಳಿಯ ನಂತರ, ಸಾವಿರಾರು ಪಂಡಿತ ಕುಟುಂಬಗಳು ಕಣಿವೆಯಿಂದ ಜಮ್ಮು ಮತ್ತು ದೇಶದ ಇತರ ಭಾಗಗಳಿಗೆ ವಲಸೆ ಹೋಗಿದ್ದವು. ಅಧಿಕೃತ ದಾಖಲೆಗಳು 64,000 ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತ ಕುಟುಂಬಗಳು ಕಾಶ್ಮೀರ ಕಣಿವೆಯ ಹೊರಗೆ ವಾಸಿಸುತ್ತಿವೆ ಎಂದು ತೋರಿಸುತ್ತವೆ. ಅವುಗಳಲ್ಲಿ 43,000 ಜಮ್ಮುವಿನ ವಲಸೆ ಶಿಬಿರಗಳಲ್ಲಿ ಮತ್ತು 19,000 ಕ್ಕೂ ಹೆಚ್ಚು ದೆಹಲಿಯಲ್ಲಿ ವಾಸಿಸುತ್ತಿವೆ.
ದೇವತೆ ರಾಗ್ನ್ಯಾ ದೇವಿಗೆ ಸಮರ್ಪಿತವಾದ ಖೀರ್ ಭವಾನಿ ಮೇಳವು ಕಣಿವೆಯ ಎರಡನೇ ಅತಿದೊಡ್ಡ ಹಿಂದೂ ಸಮಾವೇಶಗಳಲ್ಲಿ ಒಂದಾಗಿದೆ, ಅಮರನಾಥ ಯಾತ್ರೆಯ ನಂತರದ ಸ್ಥಾನ ಇದಕ್ಕಿದೆ. ನೀರಿನ ಬುಗ್ಗೆಯ ಮಧ್ಯದಲ್ಲಿರುವ ದೇವಾಲಯಕ್ಕೆ ಭಕ್ತರು ಹಾಲು ಮತ್ತು ಅನ್ನದ ನೈವೇದ್ಯವನ್ನು ಅರ್ಪಿಸುತ್ತಾರೆ. ಕಾಶ್ಮೀರಿ ಪಂಡಿತರು ಈ ಬುಗ್ಗೆಯ ದೇವಾಲಯದಲ್ಲಿನ ನೀರು ಬಣ್ಣ ಬದಲಾಗುತ್ತದೆ ಮತ್ತು ಅದು ಭವಿಷ್ಯವನ್ನು ಮುನ್ಸೂಚಿಸುತ್ತದೆ ಎಂದು ನಂಬುತ್ತಾರೆ. ನೀರಿನ ಬಣ್ಣ ಮತ್ತೆ ಬದಲಾದರೆ, ಅದನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ.
ಮೇಳಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ದೇವಾಲಯದ ಒಳಗೆ ಮತ್ತು ಸುತ್ತಮುತ್ತ ನೂರಾರು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಖೀರ್ ಭವಾನಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.