ಪಣಜಿ: ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಪಾಕಿಸ್ಥಾನಕ್ಕೆ ಭಾರತೀಯ ನೌಕಾಪಡೆಯ ಅಪ್ರತಿಮ ಶಕ್ತಿಯ ಬಗ್ಗೆ ಎಚ್ಚರಿಕೆ ರವಾನಿಸಿದ್ದಾರೆ, ಒಂದು ವೇಳೆ ಆಪರೇಷನ್ ಸಿಂದೂರ್ ಸಮಯದಲ್ಲಿ ನೌಕಾಪಡೆಯು ಭೂಸೇನೆ ಮತ್ತು ವಾಯುಸೇನೆಯ ಜೊತೆ ಸೇರಿ ಸಂಘರ್ಷದಲ್ಲಿ ತೊಡಗಿಕೊಂಡಿದ್ದರೆ, ಪಾಕಿಸ್ಥಾನವು 1971 ಕ್ಕಿಂತ ಕೆಟ್ಟ ಫಲಿತಾಂಶವನ್ನು ಎದುರಿಸುತ್ತಿತ್ತು ಮತ್ತು ನಾಲ್ಕು ತುಂಡುಗಳಾಗಿ ಹೋಗುತ್ತಿತ್ತು ಎಂದಿದ್ದಾರೆ.
“ಭಾರತೀಯ ನೌಕಾಪಡೆ ಕಾರ್ಯಪ್ರವೃತ್ತವಾದಾಗ, ಪಾಕಿಸ್ಥಾನವು ಒಂದರಿಂದ ಎರಡಾಗಿ ವಿಭಜನೆಯಾಗುತ್ತದೆ ಎಂಬುದಕ್ಕೆ 1971 ಸಾಕ್ಷಿಯಾಗಿದೆ. ಒಂದು ವೇಳೆ ಆಪರೇಷನ್ ಸಿಂಧೂರ್ನಲ್ಲಿ ಭಾರತೀಯ ನೌಕಾಪಡೆ ಕಾರ್ಯಪ್ರವೃತ್ತವಾಗಿದ್ದರೆ, ಪಾಕಿಸ್ಥಾನವು ಎರಡು ಭಾಗಗಳಾಗಿ ಅಲ್ಲ ನಾಲ್ಕು ಭಾಗಗಳಾಗಿ ವಿಭಜನೆಯಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ” ಎಂದು ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾಗಿರುವ ಐಎನ್ಎಸ್ ವಿಕ್ರಾಂತ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ, ವಿಕ್ರಾಂತ್ನಲ್ಲಿ ಅವರು ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದರು ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಬೆದರಿಕೆಗಳನ್ನು ತಟಸ್ಥಗೊಳಿಸುವಲ್ಲಿ ನೌಕಾಪಡೆಯ ಪಾತ್ರವನ್ನು ಶ್ಲಾಘಿಸಿದರು.
“‘ಆಪರೇಷನ್ ಸಿಂದೂರ್’ ಸಮಯದಲ್ಲಿ, ಭಾರತೀಯ ನೌಕಾಪಡೆಯು ಮೌನವಾಗಿಯೇ ಸೇವೆ ಸಲ್ಲಿಸುವ ಮೂಲಕ ಪ್ರತಿಯೊಬ್ಬ ಭಾರತೀಯನನ್ನೂ ಮೆಚ್ಚಿಸಿದೆ. ಮೌನವಾಗಿದ್ದರೂ, ಭಾರತೀಯ ನೌಕಾಪಡೆಯು ಪಾಕಿಸ್ಥಾನಿ ಸೈನ್ಯವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ” ಎಂದು ಅವರು ಹೇಳಿದರು.
ಆಪರೇಷನ್ ಸಿಂದೂರ್ ಸಮಯದಲ್ಲಿ ಸಮುದ್ರಕ್ಕಿಳಿದು ಸಮರ ಮಾಡುವ ಧೈರ್ಯವನ್ನು ಪಾಕಿಸ್ಥಾನ ತೋರಿಸಿಲ್ಲ, ಇದಕ್ಕೆ ಭಾರತೀಯ ನೌಕಾಪಡೆಯ ಶಕ್ತಿಯೇ ಕಾರಣ, ನೌಕಾದಳದ ಆಕ್ರಮಣಕಾರಿ ನಿಯೋಜನೆ, ಕಡಲ ಪ್ರಾಬಲ್ಯ ಮತ್ತು ಹೆಚ್ಚಿನ ಸನ್ನದ್ಧತೆಯು ಪಾಕಿಸ್ಥಾನವನ್ನು ಹಿಮ್ಮೆಟ್ಟುವಂತೆ ಮಾಡಿತು ಎಂದಿದ್ದಾರೆ.
“ಈ ಸಂಪೂರ್ಣ ಸಮಗ್ರ ಕಾರ್ಯಾಚರಣೆಯಲ್ಲಿ ನೌಕಾಪಡೆಯ ಪಾತ್ರ ಅದ್ಭುತವಾಗಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ, ವಾಯುಪಡೆಯು ಪಾಕಿಸ್ಥಾನಿ ನೆಲದಲ್ಲಿ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದಾಗ, ಅರೇಬಿಯನ್ ಸಮುದ್ರದಲ್ಲಿ ನೌಕೆ ಆಕ್ರಮಣಕಾರಿ ನಿಯೋಜನೆ ಮಾಡಿತು, ಅದರ ಸಾಟಿಯಿಲ್ಲದ ಕಡಲ ಕ್ಷೇತ್ರದ ಅರಿವು ಮತ್ತು ಪ್ರಾಬಲ್ಯವು ಪಾಕಿಸ್ಥಾನಿ ನೌಕಾಪಡೆಯನ್ನು ಅದರ ತೀರಗಳಿಗೆ ಸೀಮಿತಗೊಳಿಸಿತು. ಅವರು ತೆರೆದ ಸಮುದ್ರಕ್ಕೆ ಬರಲು ಧೈರ್ಯವನ್ನು ಕೂಡ ಮಾಡಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.