ನವದೆಹಲಿ: ದೆಹಲಿ ಚುನಾವಣೆಗೆ ಮುನ್ನ ಭಾರೀ ಸುದ್ದಿ ಮಾಡಿದ್ದ ಯಮುನಾ ನದಿಯ ಮಾಲಿನ್ಯಕ್ಕೆ ಈಗ ಪರಿಹಾರ ದೊರೆಯುವ ಸಮಯ ಬಂದಿದೆ. ಬಿಜೆಪಿ ನೀಡಿದ ಭರವಸೆಯಂತೆ ಯಮುನಾ ಶುಚಿಗೊಳಿಸುವ ಕಾರ್ಯ ಭಾನುವಾರ ಪ್ರಾರಂಭವಾಗಿದೆ. ಕಸ ತೆಗೆಯುವ ಯಂತ್ರಗಳು, ಕಳೆ ಕೊಯ್ಲು ಯಂತ್ರಗಳು ಮತ್ತು ಡ್ರೆಡ್ಜ್ ಯುಟಿಲಿಟಿ ಘಟಕಗಳು ಕಾರ್ಯಪ್ರವೃತ್ತವಾಗಿವೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ರಾಷ್ಟ್ರ ರಾಜಧಾನಿಯ ಮುಖ್ಯ ಕಾರ್ಯದರ್ಶಿ ನಡುವಿನ ಸಭೆಯ ನಂತರ ಯುಮನಾ ಶುಚಿಗೆ ಕ್ರಮ ಕೈಗೊಳ್ಳಲಾಯಿತು, ಸಭೆಯಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ತಕ್ಷಣದ ನಿರ್ದೇಶನ ನೀಡಲಾಯಿತು.
ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಹೇಳಿಕೆಯ ಪ್ರಕಾರ, ಯಮುನಾದಲ್ಲಿನ ಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸಲು ನಾಲ್ಕು-ವಿಧದ ಕಾರ್ಯತಂತ್ರ ಅಳವಡಿಸಲಾಗಿದೆ.
“ಮೊದಲಿಗೆ, ಯಮುನಾ ನದಿಯಯಲ್ಲಿರುವ ಕಸ ಮತ್ತು ಹೂಳು ತೆಗೆಯಲಾಗುವುದು. ನಜಾಫ್ಗಢ ಡ್ರೈನ್, ಪೂರಕ ಡ್ರೈನ್ ಮತ್ತು ಇತರ ಎಲ್ಲಾ ಪ್ರಮುಖ ಡ್ರೈನ್ಗಳಲ್ಲಿ ಏಕಕಾಲದಲ್ಲಿ ಶುಚಿಗೊಳಿಸುವ ಕಾರ್ಯಾಚರಣೆಗಳು ಪ್ರಾರಂಭವಾಗಲಿವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತರ ಎರಡು ವಿಧಾನಗಳೆಂದರೆ ಅಸ್ತಿತ್ವದಲ್ಲಿರುವ ಎಸ್ಟಿಪಿಗಳ (ಒಳಚರಂಡಿ ಸಂಸ್ಕರಣಾ ಘಟಕಗಳು) ಅವುಗಳ ಸಾಮರ್ಥ್ಯ ಮತ್ತು ಉತ್ಪಾದನೆಯ ವಿಷಯದಲ್ಲಿ ದೈನಂದಿನ ನಿಗಾ ಇಡಲಾಗುವುದು ಮತ್ತು ಸುಮಾರು 400 ಎಂಜಿಡಿ ಒಳಚರಂಡಿಯನ್ನು ಸಂಸ್ಕರಿಸುವ ಕೊರತೆಯನ್ನು ಪೂರೈಸಲು ಹೊಸ ಎಸ್ಟಿಪಿಗಳು/ಡಿಎಸ್ಟಿಪಿಗಳು ಇತ್ಯಾದಿಗಳ ನಿರ್ಮಾಣದ ವಿಷಯದಲ್ಲಿ ಸಮಯಕ್ಕೆ ಅನುಗುಣವಾಗಿ ಯೋಜನೆಯನ್ನು ಜಾರಿಗೆ ತರಲಾಗುವುದು ಮತ್ತು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ನದಿಯನ್ನು ಸ್ವಚ್ಛಗೊಳಿಸಲು ಎಲ್-ಜಿ ಕಚೇರಿ ಮೂರು ವರ್ಷಗಳ ಕಾಲಾವಕಾಶವನ್ನು ನಿಗದಿಪಡಿಸಿದ್ದು, ವಿವಿಧ ಸಂಸ್ಥೆಗಳು ಮತ್ತು ಇಲಾಖೆಗಳ ನಡುವೆ ‘ತಡೆರಹಿತ ಸಮನ್ವಯ’ದ ಅಗತ್ಯವನ್ನು ಒತ್ತಿಹೇಳಿದೆ.
“ಸುಮಾರು 3 ವರ್ಷಗಳಲ್ಲಿ ನದಿಯನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯಗತಗೊಳಿಸಲು ಡಿಜೆಬಿ (ದೆಹಲಿ ಜಲ ಮಂಡಳಿ), ಐ & ಎಫ್ಸಿ (ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆ), ಎಂಸಿಡಿ (ದೆಹಲಿ ಪುರಸಭೆ), ಪರಿಸರ ಇಲಾಖೆ, ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ಮತ್ತು ಡಿಡಿಎ (ದೆಹಲಿ ಅಭಿವೃದ್ಧಿ ಪ್ರಾಧಿಕಾರ) ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಇಲಾಖೆಗಳ ನಡುವೆ ಸರಾಗ ಸಮನ್ವಯದ ಅಗತ್ಯವಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.