News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾರ್ವಜನಿಕ ಒಳಿತಿಗಾಗಿ ದಾನ ಮಾಡುವುದು ಅತ್ಯಂತ ಪ್ರಮುಖ ಆಧ್ಯಾತ್ಮಿಕ ಮೌಲ್ಯಗಳಲ್ಲಿ ಒಂದು: ರಾಷ್ಟ್ರಪತಿ

ನವದೆಹಲಿ:  ಸ್ವಾರ್ಥವನ್ನು ತೊರೆದು ಮೇಲೇರುತ್ತಾ ಜನಕಲ್ಯಾಣ ಮನೋಭಾವದಿಂದ ಕೆಲಸ ಮಾಡುವುದು ಆಂತರಿಕ ಆಧ್ಯಾತ್ಮಿಕತೆಯ ಸಾಮಾಜಿಕ ಅಭಿವ್ಯಕ್ತಿಯಾಗಿದೆ. ಸಾರ್ವಜನಿಕ ಒಳಿತಿಗಾಗಿ ದಾನ ಮಾಡುವುದು ಅತ್ಯಂತ ಪ್ರಮುಖ ಆಧ್ಯಾತ್ಮಿಕ ಮೌಲ್ಯಗಳಲ್ಲಿ ಒಂದಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಬ್ರಹ್ಮಕುಮಾರಿಯರಿಂದ ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಆಧ್ಯಾತ್ಮಿಕ ಸಬಲೀಕರಣದ ರಾಷ್ಟ್ರೀಯ ಆರಂಭ ಸಮಾರಂಭ ಕಾರ್ಯಕ್ರಮದಲ್ಲಿ  ಮುರ್ಮು ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸ್ವಸ್ಥ ಮನಸ್ಥಿತಿಯಿಂದ ಮಾತ್ರ ಸಮಗ್ರ ಸ್ವಾಸ್ಥ್ಯ ಸಾಧ್ಯ. ಆಧ್ಯಾತ್ಮಿಕ ಸಬಲೀಕರಣವೇ ನಿಜವಾದ ಸಬಲೀಕರಣವಾಗಿದ್ದು, ಆಧ್ಯಾತ್ಮಿಕ ಮೌಲ್ಯಗಳು ಎಲ್ಲ ಧರ್ಮದ ಜನರನ್ನು ಪರಸ್ಪರ ಸಂಪರ್ಕಿಸುತ್ತವೆ ಎಂದರು.

ಭಯ, ಭಯೋತ್ಪಾದನೆ ಮತ್ತು ಯುದ್ಧವನ್ನು ಉತ್ತೇಜಿಸುವ ಶಕ್ತಿಗಳು ವಿಶ್ವದ ಹಲವೆಡೆ ಸಕ್ರಿಯವಾಗಿವೆ ಮತ್ತು ಅಂತಹ ವಾತಾವರಣದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯು 100 ಕ್ಕೂ ಹೆಚ್ಚು ದೇಶಗಳಲ್ಲಿ ಅನೇಕ ಕೇಂದ್ರಗಳ ಮೂಲಕ ಮಾನವೀಯತೆಯ ಸಬಲೀಕರಣಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸಿದೆ ಎಂದು ರಾಷ್ಟ್ರಪತಿ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top