ನವದೆಹಲಿ: ದಕ್ಷಿಣ ಕೊರಿಯಾದ ಯೆಚಿಯಾನ್ನಲ್ಲಿ ಇಂದು ನಡೆದ ಆರ್ಚರಿ ವಿಶ್ವಕಪ್ನ ಎರಡನೇ ಸುತ್ತಿನಲ್ಲಿ ಮಹಿಳಾ ಕಾಂಪೌಂಡ್ ಆರ್ಚರಿ ವಿಭಾಗದಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಸ್ವಾಮಿ ಅವರನ್ನೊಳಗೊಂಡ ಸತತ ಮೂರನೇ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೇ ಭಾರತದ ಮಿಶ್ರ ತಂಡವು ಎರಡನೇ ಹಂತದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದೆ. ದಕ್ಷಿಣ ಕೊರಿಯಾದ ಯೆಚಿಯಾನನ್ನಲ್ಲಿ ಶನಿವಾರ ನಡೆದ ಹಂತ ಎರಡನೇ ಸುತ್ತಿನಲ್ಲಿ ಭಾರತೀಯರು ಸಾಧನೆ ಮಾಡಿದ್ದಾರೆ.
ವಿಶ್ವದ ನಂ.1 ಭಾರತೀಯ ಕಾಂಪೌಂಡ್ ಮಹಿಳಾ ತಂಡವು ಟರ್ಕಿಯ ಹಜಲ್ ಬುರುನ್, ಅಯ್ಸೆ ಬೆರಾ ಸುಜರ್ ಮತ್ತು ಬೇಗಂ ತ್ರಿವಳಿಗಳ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಒಂದೇ ಒಂದು ಸೆಟ್ ಸೋಲದೆ ಗೆದ್ದು ಬೀಗಿದರು.
ಈ ಗೆಲುವಿನೊಂದಿಗೆ ಜ್ಯೋತಿ, ಪರ್ನೀತ್ ಮತ್ತು ವಿಶ್ವ ಚಾಂಪಿಯನ್ ಅದಿತಿ ಜೊತೆಯಾಗಿ ವಿಶ್ವಕಪ್ ಚಿನ್ನದ ಪದಕಗಳ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಈ ಹಿಂದೆ ಶಾಂಘೈನಲ್ಲಿ ನಡೆದ ಋತುವಿನ ಆರಂಭಿಕ ವಿಶ್ವಕಪ್ ಹಂತ ಒಂದನ್ನು ಗೆದ್ದಿದ್ದ ತ್ರಿವಳಿಗಳು, ಆ ಬಳಿಕ ಕಳೆದ ವರ್ಷ ಪ್ಯಾರಿಸ್ನಲ್ಲಿ ನಡೆದ ಈವೆಂಟ್ನ ನಾಲ್ಕನೇ ಹಂತದಲ್ಲಿ ಬಂಗಾರದ ಸಾಧನೆ ಮಾಡಿದ್ದರು.
ಅತ್ತ ಏಷ್ಯನ್ ಗೇಮ್ಸ್ ಚಾಂಪಿಯನ್ ಜ್ಯೋತಿ ಅವರು, ಪ್ರಿಯಾಂಶ್ ಅವರೊಂದಿಗೆ ಕಾಂಪೌಂಡ್ ಮಿಶ್ರ ತಂಡದ ಆರಂಭಿಕ ಸುತ್ತಿನಲ್ಲಿ ಮುನ್ನಡೆ ಸಾಧಿಸಿದರು. ಆದರೆ, ಫೈನಲ್ನಲ್ಲಿ ಅಮೆರಿಕದ ಒಲಿವಿಯಾ ಡೀನ್ ಮತ್ತು ಸಾಯರ್ ಸುಲ್ಲಿವಾನ್ ವಿರುದ್ಧ ಕೇವಲ ಎರಡು ಅಂಕಗಳ ಅಂತರದಿಂದ (155-153) ಸೋಲು ಕಂಡರು.
ಕಂಚಿನ ಪದಕಕ್ಕಾಗಿ ನಡೆದ ಪ್ಲೇಆಫ್ನ ಶೂಟ್-ಆಫ್ನಲ್ಲಿ ನೆದರ್ಲೆಂಡ್ಸ್ನ ಮೈಕ್ ಸ್ಕ್ಲೋಸರ್ ವಿರುದ್ಧ ಯುವ ಆಟಗಾರ ಪ್ರಥಮೇಶ್ ಫು ಸೋತರು. ಹೀಗಾಗಿ ಭಾರತದ ಬಿಲ್ಲುಗಾರರು ಕಾಂಪೌಂಡ್ ವಿಭಾಗದಲ್ಲಿ ಮೂರನೇ ಪದಕ ಗೆಲ್ಲಲು ವಿಫಲರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.