ಜೈಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ರಾಜಸ್ಥಾನದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ ಮತ್ತು ದೆಹಲಿಯ ನಾಯಕರಿಗೆ ರಾಜ್ಯವನ್ನು ಎಟಿಎಂ ಆಗಿ ಬಳಕೆ ಮಾಡಲಾಗಿದೆ ಎಂದಿದ್ದಾರೆ.
ಅಜ್ಮೀರ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ, ಕಾಂಗ್ರೆಸ್ ರಾಜಸ್ಥಾನವನ್ನು ತನ್ನ ವೈಯಕ್ತಿಕ ಎಟಿಎಂ ಎಂದು ಪರಿಗಣಿಸಿದೆ. ಇಂತಹ ಸರಕಾರವನ್ನು ಕಿತ್ತೊಗೆಯುವ ಅಗತ್ಯವಿದೆ, ವೋಟ್ ಬ್ಯಾಂಕ್ ಗಾಗಿ ತುಷ್ಟೀಕರಣ ರಾಜಕಾರಣ ಮಿತಿ ಮೀರುತ್ತಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರ, ತುಷ್ಟೀಕರಣದ ರಾಜಕೀಯ, ಮಹಿಳೆಯರ ವಿರುದ್ಧದ ಅಪರಾಧಗಳು, ಸೈಬರ್ ಕ್ರೈಮ್ ಮತ್ತು ಹಣದುಬ್ಬರದಲ್ಲಿ ರಾಜಸ್ಥಾನವು ಹೇಗೆ ಉನ್ನತ ಶ್ರೇಣಿಯ ರಾಜ್ಯವೆಂದು ಕುಖ್ಯಾತಿ ಗಳಿಸಿದೆ ಎಂಬುದನ್ನು ಶಾ ಎತ್ತಿ ತೋರಿಸಿದರು. ರಾಜ್ಯದಲ್ಲಿನ ಹೆಚ್ಚಿನ ವಿದ್ಯುತ್ ದರಗಳು ಮತ್ತು ಇಂಧನ ಬೆಲೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಮತದಾರರು ತಮ್ಮ ಆಯ್ಕೆಗಳಲ್ಲಿ ವ್ಯಾಪಕ ಪರಿಣಾಮವನ್ನು ಪರಿಗಣಿಸುವಂತೆ ಒತ್ತಾಯಿಸಿದರು.
ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆಯನ್ನು ಉಲ್ಲೇಖಿಸಿ ಗೆಹ್ಲೋಟ್ ಸರ್ಕಾರ ರಾಜಸ್ಥಾನವನ್ನು ಗಲಭೆಗಳ ರಾಜ್ಯವನ್ನಾಗಿ ಮಾಡಿದೆ ಎಂದು ಗೃಹ ಸಚಿವರು ಆರೋಪಿಸಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಂತಹ ಸಂಘಟನೆಗಳು ಬೆಳವಣಗೆ ಹೊಂದಲಿದ್ದು, ರಾಜ್ಯದ ಸುರಕ್ಷತೆಗೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದರು.
66,000 ಕೋಟಿ ಗಣಿ ಹಗರಣ, ರೂ 1,000 ಕೋಟಿ ಗುತ್ತಿಗೆ ಹಗರಣ, ಮತ್ತು ರೂ 1,000 ಕೋಟಿ ಪಡಿತರ ಹಗರಣವನ್ನು ಉಲ್ಲೇಖಿಸಿದ ಶಾ, ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ ಅತಿರೇಕದ ಭ್ರಷ್ಟಾಚಾರ ನಡೆದಿದೆ, ಗೆಹ್ಲೋಟ್ ಅವರ ಭ್ರಷ್ಟಾಚಾರವು ಸ್ವಾತಂತ್ರ್ಯದ ನಂತರ ಯಾವುದೇ ಸರ್ಕಾರವನ್ನು ಮೀರಿಸಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.