ನವದೆಹಲಿ: ಭಾರತೀಯ ಸೇನೆಯ ತ್ರಿಶಕ್ತಿ ಕಾರ್ಪ್ಸ್ನ ಪಡೆಗಳು BRO ಸಹಾಯದಿಂದ ಉತ್ತರ ಸಿಕ್ಕಿಂನ ಚುಂಗ್ಥಾಂಗ್ನಲ್ಲಿ ತೀಸ್ತಾ ನದಿಯ ಮೇಲೆ ಬೈಲಿ ಸೇತುವೆಯ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಿವೆ.
ಅಕ್ಟೋಬರ್ 3 ರ ರಾತ್ರಿಯಿಂದ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಕಡಿತಗೊಂಡಿದ್ದ ಉತ್ತರ ಸಿಕ್ಕಿಂನ ಪ್ರವಾಹ ಪೀಡಿತ ಪ್ರದೇಶಗಳಿಗೆ ಈ ಸೇತುವೆ ಮತ್ತೆ ಸಂಪರ್ಕ ಒದಗಿಸಿದೆ. ಸೇತುವೆಯು ಈಗ ವಾಹನಗಳ ತಡೆರಹಿತ ಸಂಚಾರಕ್ಕೆ ಮತ್ತು ಈ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವ ಮಾರ್ಗವನ್ನು ಸುಗಮಗೊಳಿಸಿದೆ.
ಡಿಫೆನ್ಸ್ PRO ಪತ್ರಿಕಾ ಹೇಳಿಕೆಯ ಪ್ರಕಾರ, 200 ಅಡಿಗಳ ಬೈಲಿ ಸೇತುವೆಯು ಇಂಜಿನಿಯರಿಂಗ್ ಅದ್ಭುತವಾಗಿದೆ ಏಕೆಂದರೆ ಇದು ಅತಿ ಉದ್ದದ ಮತ್ತು ಭಾರವಾದ ಸಿಂಗಲ್ ಸ್ಪ್ಯಾನ್ ಬೈಲಿ ಸೇತುವೆಯಾಗಿದೆ. ಈ ಸೇತುವೆಗಾಗಿ BRO ಹಗಲಿರುಳು ಕೆಲಸ ಮಾಡಿದೆ, ಆರಂಭದಲ್ಲಿ ಕಾಂಕ್ರೀಟ್ ಅಬ್ಯುಟ್ಮೆಂಟ್ಗಳನ್ನು ನಿರ್ಮಿಸಿತು ಮತ್ತು ನಂತರ ಸೇತುವೆ ನಿರ್ಮಾಣಕ್ಕಾಗಿ ತ್ರಿಶಕ್ತಿ ಸ್ಯಾಪರ್ಸ್ ಸುಮಾರು ಐದು ದಿನಗಳನ್ನು ತೆಗೆದುಕೊಂಡಿತು.
ಭಾರತೀಯ ಸೇನೆ, BRO ಮತ್ತು ನಾಗರಿಕ ಆಡಳಿತದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಿಕ್ಕಿಂ ಸರ್ಕಾರದ ಸಚಿವರಾದ ಸಂದುಪ್ ಲೆಪ್ಚಾ ಅವರು ಸೇತುವೆಯನ್ನು ಉದ್ಘಾಟಿಸಿದರು.
ತ್ರಿಶಕ್ತಿ ಕಾರ್ಪ್ಸ್ನ ಇಂಜಿನಿಯರ್ ಟ್ರೂಪ್ಸ್ ಮತ್ತು BRO ಒಟ್ಟಾಗಿ ಹಲವು ಭಾರೀ ಅರ್ತ್ ಮೂವಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ ಸೇತುವೆ ನಿರ್ಮಾಣದ ಕಾರ್ಯಾಚರಣೆಯನ್ನು ನಡೆಸಿದೆ. ಈ ಮೂಲಕ ಭಾರತೀಯ ಸೇನೆಯು ರಾಷ್ಟ್ರ ನಿರ್ಮಾಣಕ್ಕೆ ಸದಾ ಬದ್ಧವಾಗಿದೆ ಮತ್ತು ದೇಶದ ಜನರ ಅಗತ್ಯದ ಸಮಯದಲ್ಲಿ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.