ಲಕ್ನೋ: ರಾಜ್ಯದಲ್ಲಿನ ಮದರಸಾಗಳು ವಿದೇಶದಿಂದ ಪಡೆದ ಹಣದ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಹೆಚ್ಚುವರಿ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ. ಉತ್ತರ ಪ್ರದೇಶದಲ್ಲಿ ಸುಮಾರು 25,000 ಮದರಸಾಗಳಿವೆ ಮತ್ತು ಅವುಗಳಲ್ಲಿ 16,500 ಕ್ಕೂ ಹೆಚ್ಚು ಮದರಸಾ ಶಿಕ್ಷಣ ಮಂಡಳಿಯಿಂದ ಗುರುತಿಸಲ್ಪಟ್ಟಿದೆ.
“ತನಿಖೆಯ ಸಮಯದಲ್ಲಿ, ನಾವು ವಿದೇಶದಿಂದ ಹಣವನ್ನು ಪಡೆಯುತ್ತಿರುವ ಮದರಸಾಗಳ ಖಾತೆಗಳನ್ನು ಪರಿಶೀಲಿಸುತ್ತೇವೆ. ವಿದೇಶಿ ನಿಧಿಯ ಮೂಲಕ ಪಡೆದ ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಈ ಹಣವನ್ನು ಮದರಸಾಗಳನ್ನು ನಡೆಸಲು ಅಥವಾ ಯಾವುದೇ ಇತರ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂದು ವಿಚಾರಿಸಲು ಎಟಿಎಸ್ ಹೆಚ್ಚುವರಿ ಮಹಾನಿರ್ದೇಶಕ ಮೋಹಿತ್ ಅಗರ್ವಾಲ್ ಅವರು ತನಿಖೆಯ ನೇತೃತ್ವ ವಹಿಸಿದ್ದಾರೆ. ಎಸ್ಐಟಿಯ ಇತರ ಇಬ್ಬರು ಸದಸ್ಯರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರು ಮತ್ತು ಸೈಬರ್ ಸೆಲ್ ಪೊಲೀಸ್ ವರಿಷ್ಠಾಧಿಕಾರಿಗಳು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದರಸಗಳ ಹಣದ ವಹಿವಾಟುಗಳನ್ನು ಪರಿಶೀಲಿಸಲು ಯಾವುದೇ ನಿರ್ದಿಷ್ಟ ಅವಧಿಯನ್ನು ಎಸ್ಐಟಿಗೆ ಸರ್ಕಾರ ನೀಡಿಲ್ಲ. ಸಿದ್ಧಾರ್ಥ್ ನಗರ, ಬಹ್ರೈಚ್, ಶ್ರಾವಸ್ತಿ, ಬಲರಾಮ್ಪುರ್ ಮತ್ತು ಮಹಾರಾಜ್ಗಂಜ್ ಸೇರಿದಂತೆ ಇಂಡೋ-ನೇಪಾಳ ಗಡಿಯುದ್ದಕ್ಕೂ ಇರುವ ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಮದರಸಾಗಳ ಮೇಲೆ ಏಜೆನ್ಸಿ ಹೆಚ್ಚು ಗಮನಹರಿಸುವ ಸಾಧ್ಯತೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.