ನವದೆಹಲಿ: 2022-23ರ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ 1 ಕೋಟಿ 24 ಲಕ್ಷ ರೈತರು ಭತ್ತದ ಖರೀದಿಯಿಂದ ಪ್ರಯೋಜನ ಪಡೆದಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಈ ವಿಷಯ ತಿಳಿಸಿದ್ದಾರೆ.
ಇದೇ ಅವಧಿಯಲ್ಲಿ 846 ಲಕ್ಷ ಟನ್ಗಳಷ್ಟು ಭತ್ತವನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು. ಸರಿಯಾದ ನೋಂದಣಿ ಮತ್ತು ನಿಜವಾದ ಸಂಗ್ರಹಣೆಯ ಮೇಲ್ವಿಚಾರಣೆಯ ಮೂಲಕ ರೈತರಿಗೆ ಪಾರದರ್ಶಕತೆ ಮತ್ತು ಅನುಕೂಲತೆ ಒದಗಿಸಲು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್ಸಿಐ) ಮತ್ತು ಎಲ್ಲಾ ಸಂಗ್ರಹಿಸುವ ರಾಜ್ಯಗಳು ತಮ್ಮದೇ ಆದ ಆನ್ಲೈನ್ ಸಂಗ್ರಹಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ ಎಂದು ಜ್ಯೋತಿ ಹೇಳಿದರು.
ಪ್ರತಿ ಮಾರುಕಟ್ಟೆ ಋತುವಿನ ಆರಂಭದ ಮೊದಲು ರಾಜ್ಯ ಸರ್ಕಾರಗಳು ಮತ್ತು ಎಫ್ಸಿಐ ಜೊತೆ ಸಮಾಲೋಚಿಸಿ ಭತ್ತದ ಸಂಗ್ರಹಣೆಯ ಅಂದಾಜು ದರಗಳನ್ನು ಕೇಂದ್ರವು ಅಂತಿಮಗೊಳಿಸುತ್ತದೆ ಎಂದು ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.