ನವದೆಹಲಿ: ಖಲಿಸ್ತಾನ್ ಪರ ಗುಂಪುಗಳ ಕುರಿತು ಭಾರತದಿಂದ ಪ್ರಶ್ನೆಗಳನ್ನು ಎದುರಿಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ತಮ್ಮ ದೇಶವು ಯಾವಾಗಲೂ ಹಿಂಸಾಚಾರದ ಬೆದರಿಕೆಗಳನ್ನು “ಅತ್ಯಂತ ಗಂಭೀರವಾಗಿ” ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಮಾಧ್ಯಮ ಸಂವಾದದ ಸಂದರ್ಭದಲ್ಲಿ, ಕೆನಡಾದ ಪ್ರಧಾನ ಮಂತ್ರಿಯವರಿಗೆ ಬ್ರಾಂಪ್ಟನ್ನಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಬಿಂಬಿಸುವ ಪರೇಡ್ ಫ್ಲೋಟ್ ಮತ್ತು ಖಾಲಿಸ್ತಾನ್ ಬೆಂಬಲಿಗರು ಹಾಕಿರುವ “ಕಿಲ್ ಇಂಡಿಯಾ” ಪೋಸ್ಟರ್ಗಳ ಬಗ್ಗೆ ಕೇಳಲಾಯಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖಲಿಸ್ಥಾನಿಗಳ ಬಗ್ಗೆ ತಮಗೆ ಮೃದು ಧೋರಣೆ ಇದೆ ಎಂಬುದು ತಪ್ಪು ಎಂದಿದ್ದಾರೆ.
ಚುನಾವಣೆಗಳಿಗಾಗಿ ತಮ್ಮ ಸರ್ಕಾರವು ಖಾಲಿಸ್ತಾನ್ ಬೆಂಬಲಿಗರ ಬಗ್ಗೆ ಮೃದುವಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಟ್ರೂಡೊ, “ಅದು ತಪ್ಪು. ಕೆನಡಾ ಯಾವಾಗಲೂ ಹಿಂಸಾಚಾರ ಮತ್ತು ಹಿಂಸಾಚಾರದ ಬೆದರಿಕೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ನಾವು ಯಾವಾಗಲೂ ಭಯೋತ್ಪಾದನೆಯ ವಿರುದ್ಧ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.
“ನಾವು ಅತ್ಯಂತ ವೈವಿಧ್ಯಮಯ ದೇಶವನ್ನು ಹೊಂದಿದ್ದೇವೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ನಮ್ಮಲ್ಲಿದೆ ಆದರೆ ನಾವು ಹಿಂಸಾಚಾರ ಮತ್ತು ಉಗ್ರವಾದದ ವಿರುದ್ಧ ಅದರ ಎಲ್ಲಾ ರೂಪಗಳ ವಿರುದ್ಧ ಇದ್ದೇವೆ ಎಂದು ನಾವು ಯಾವಾಗಲೂ ಖಚಿತಪಡಿಸಿಕೊಳ್ಳುತ್ತೇವೆ” ಎಂದು ಅವರು ಹೇಳಿದರು.
ಕೆನಡಾದಲ್ಲಿ ಖಲಿಸ್ತಾನಿ-ಪರ ಅಂಶಗಳಿಂದ ಹೆಚ್ಚುತ್ತಿರುವ ಚಟುವಟಿಕೆಗಳ ಕುರಿತು ಕೇಂದ್ರವು ಕೆನಡಾದ ರಾಯಭಾರಿಯನ್ನು ಕರೆಸಿ ಪ್ರಶ್ನೆ ಮಾಡಿದ ಕೆಲವು ದಿನಗಳ ನಂತರ ಟ್ರಡೋ ಹೇಳಿಕೆ ಬಂದಿದೆ. ಖಾಲಿಸ್ತಾನ್ ಬೆಂಬಲಿಗರ ಕೆಲವು ಗುಂಪುಗಳು ಈ ಶನಿವಾರ ಕೆನಡಾದಲ್ಲಿರುವ ಭಾರತೀಯ ಮಿಷನ್ಗಳ ಹೊರಗೆ ಪ್ರತಿಭಟನೆಗಳನ್ನು ಯೋಜಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.