ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀ ಅಮರನಾಥ ದೇಗುಲ ಮಂಡಳಿ (SASB) ಜುಲೈ 1 ರಂದು ಪ್ರಾರಂಭವಾಗುವ 62 ದಿನಗಳ ವಾರ್ಷಿಕ ಶ್ರೀ ಅಮರನಾಥ ಯಾತ್ರೆಯಲ್ಲಿ 40 ಕ್ಕೂ ಹೆಚ್ಚು ಆಹಾರ ಪದಾರ್ಥಗಳನ್ನು ನಿಷೇಧಿಸಿದೆ. ಅಲ್ಲದೇ ಯಾತ್ರಾರ್ಥಿಗಳು ದಿನಕ್ಕೆ ಕನಿಷ್ಠ 5 ಕಿಲೋಮೀಟರ್ಗಳಷ್ಟು ನಡೆಯುವುದರ ಮೂಲಕ ದೈಹಿಕ ಸದೃಢತೆಯನ್ನು ಸಾಧಿಸಬೇಕು ಎಂದು ದೇಗುಲ ಮಂಡಳಿಯು ತನ್ನ ಆರೋಗ್ಯ ಸಲಹೆಯಲ್ಲಿ ಸಲಹೆ ನೀಡಿದೆ.
ಹಿಮಾಲಯದ ಗುಹೆ ದೇಗುಲವಾದ ಅಮರನಾಥಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರು ದೈಹಿಕ ಸಾಮರ್ಥ್ಯವನ್ನು ಸಾಧಿಸಬೇಕು ಎಂದು ಆರೋಗ್ಯ ಸಲಹೆಗಾರರು ಕರೆ ನೀಡಿದ್ದಾರೆ. ಅಲ್ಲದೇ ಪೂರ್ವಸಿದ್ಧತೆಯಾಗು ಬೆಳಿಗ್ಗೆ ಮತ್ತು ಸಂಜೆ ದಿನಕ್ಕೆ 4 ರಿಂದ 5 ಕಿ.ಮೀ ನಡೆಯುವಂತೆ ಮನವಿ ಮಾಡಿದ್ದಾರೆ. ನಿಷೇಧಿತ ಆಹಾರ ಪದಾರ್ಥಗಳಲ್ಲಿ ಪಾನೀಯಗಳು, ಕರಿದ ಮತ್ತು ತ್ವರಿತ ಆಹಾರ ಪದಾರ್ಥಗಳು ಸೇರಿವೆ. ಭಕ್ತರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಂಡಳಿಯು ಧಾನ್ಯಗಳು, ಬೇಳೆಕಾಳುಗಳು, ಹಸಿರು ತರಕಾರಿಗಳು ಮತ್ತು ಸಲಾಡ್ಗಳಂತಹ ಆರೋಗ್ಯಕರ ಆಯ್ಕೆಗಳನ್ನು ಕೆಲವು ಅಕ್ಕಿ ಭಕ್ಷ್ಯಗಳೊಂದಿಗೆ ಶಿಫಾರಸು ಮಾಡಿದೆ.
ದೇಗುಲ ಮಂಡಳಿಯು ಹೈಪೋಥರ್ಮಿಯ ತಡೆಗಟ್ಟಲು ಯಾತ್ರಿಕರಿಗೆ ಐದು ಸಲಹೆಗಳನ್ನು ನೀಡಿದೆ, ಇದರಲ್ಲಿ ಸಾಕಷ್ಟು ದ್ರವಗಳು, ಬೆಚ್ಚಗಿನ ಪಾನೀಯಗಳು ಮತ್ತು ಶಕ್ತಿಗಾಗಿ ನಿಯಮಿತವಾದ ಆರೋಗ್ಯಕರ ಆಹಾರವನ್ನು ಶಿಫಾರಸ್ಸು ಮಾಡಿದೆ, ಇದರಿಂದ ದೇಹವು ಶಾಖವನ್ನು ಉತ್ಪಾದಿಸುತ್ತದೆ. ಆಲ್ಕೋಹಾಲ್, ಕೆಫೀನ್ ಮತ್ತು ಧೂಮಪಾನವನ್ನು ತ್ಯಜಿಸಲು ಭಕ್ತರಿಗೆ ಸಲಹೆ ನೀಡಿದೆ ಏಕೆಂದರೆ ಇವೆಲ್ಲವೂ ದೇಹವು ಶಾಖವನ್ನು ಕಳೆದುಕೊಳ್ಳುವ ಪ್ರಮಾಣವನ್ನು ಹೆಚ್ಚಿಸುತ್ತವೆ.
3880 ಮೀಟರ್ ಎತ್ತರದ ಪವಿತ್ರ ಗುಹೆಗೆ 62 ದಿನಗಳ ವಾರ್ಷಿಕ ಯಾತ್ರೆ ಜುಲೈ 1 ರಂದು ಅವಳಿ ಮಾರ್ಗಗಳಿಂದ ಪ್ರಾರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.