ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯಶಸ್ವಿಯಾಗಿ ಜಿ20 ಸಭೆಯನ್ನು ಭಾರತ ಆಯೋಜಿಸಿದೆ. ಈ ಮೂಲಕ ಇಡೀ ಜಗತ್ತಿಗೆ ಭೂಲೋಕದ ಸ್ವರ್ಗದ ನಿಜವಾದ ಚಿತ್ರಣವನ್ನು ಪ್ರಸ್ತುತಪಡಿಸಿದೆ.
ಶ್ರೀನಗರದಲ್ಲಿ ನಡೆದ ಮೂರನೇ ಜಿ 20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಭಾಗವಹಿಸಿದ ಪ್ರತಿನಿಧಿಗಳು ಗಾಲ್ಫ್, ಯೋಗ, ದೋಣಿ ವಿಹಾರಗಳನ್ನು ಆನಂದಿಸಿದ್ದಾರೆ. ಬುಧವಾರ ನಗರದ ದಾಲ್ ಲೇಕ್ ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ ಮತ್ತು ಸ್ಥಳೀಯ ಮಾರುಕಟ್ಟೆಗಳಿಂದ ವಸ್ತುಗಳನ್ನು ಖರೀದಿಸಿ ಸಂತೋಷಪಟ್ಟಿದ್ದಾರೆ. ಒಟ್ಟಿನಲ್ಲಿ ಭೂಲೋಕದ ಸ್ವರ್ಗದ ಸೌಂದರ್ಯವನ್ನು ಸವಿಯುತ್ತಾ ಅತಿಥಿಗಳು ಉತ್ಸಾಹ, ಉಲ್ಲಾಸದೊಂದಿಗೆ ಜಿ20ಶೃಂಗಸಭೆಯನ್ನು ಯಶಸ್ಸುಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆಎ.
ಬೆಳಿಗ್ಗೆ ಪ್ರತಿನಿಧಿಗಳು ಅವರು ವಾಸಿಸುವ ಐಷಾರಾಮಿ ಹೋಟೆಲ್ನ ಹುಲ್ಲುಹಾಸಿನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೆಲವು ಅತಿಥಿಗಳು ರಾಯಲ್ ಸ್ಪ್ರಿಂಗ್ಸ್ ಗಾಲ್ಫ್ ಕೋರ್ಸ್ (RSGC) ನಲ್ಲಿ ಗಾಲ್ಫ್ ಆಡಿದರು. ನಂತರ ದಾಲ್ ಸರೋವರದ ದಡದಲ್ಲಿರುವ ನಿಶಾತ್ – ಪ್ರಸಿದ್ಧ 12 ಟೆರೇಸ್ಡ್ ಮೊಘಲ್ ಉದ್ಯಾನಕ್ಕೆ ಭೇಟಿ ನೀಡಿದರು. ಅದರ ನಂತರ, ನಗರದ ಹೃದಯಭಾಗದಲ್ಲಿರುವ ಇತ್ತೀಚೆಗೆ ಮರುಅಭಿವೃದ್ಧಿಪಡಿಸಿದ ಪೋಲೋ ವ್ಯೂ ಮಾರುಕಟ್ಟೆಗೆ ಭೇಟಿ ನೀಡಿ ಕೆಲವು ಸ್ಥಳೀಯ ಕಲಾ ವಸ್ತುಗಳು ಮತ್ತು ಇತರ ವಸ್ತುಗಳನ್ನು ಖರೀದಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.