ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಶ್ರೀನಗರದ ಶೇರ್- ಎ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC) ನಲ್ಲಿ ವಿದೇಶಿ ಪ್ರತಿನಿಧಿಗಳಿಗಾಗಿ ವಿಶೇಷ ಆಹಾರ ಮಳಿಗೆ “ಮಿಲೆಟ್ ಹಬ್” ಅನ್ನು ಸ್ಥಾಪಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ, ಶ್ರೀನಗರವು ಪ್ರಸ್ತುತ ಮೂರನೇ G20 ವರ್ಕಿಂಗ್ ಗ್ರೂಪ್ ಸಭೆಯನ್ನು ಆಯೋಜಿಸುತ್ತಿದೆ.
ಭಾರತದ ಉಪಕ್ರಮದಡಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಮಾರ್ಚ್ 2021 ರಲ್ಲಿ 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿತು. ಏಷ್ಯಾ ಮತ್ತು ಆಫ್ರಿಕಾದಲ್ಲಿ ಸಿರಿಧಾನ್ಯ ಮೊದಲನೇಯ ಬೆಳೆಯಾಗಿ ಬೆಳೆಸಲಾಯಿತು. ನಂತರ ಇದನ್ನು ಪ್ರಪಂಚದಾದ್ಯಂತ ಮುಂದುವರಿದ ನಾಗರಿಕತೆಗಳಿಗೆ ಪ್ರಮುಖ ಆಹಾರ ಮೂಲವಾಗಿ ಅಳವಡಿಸಿಕೊಳ್ಳಲಾಯಿತು.
ದಾಲ್ ಸರೋವರದ ದಡದಲ್ಲಿರುವ ಎಸ್ಕೆಐಸಿಸಿಯಲ್ಲಿ ನಿನ್ನೆ ಪ್ರಾರಂಭವಾದ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಸರ್ಕಾರವು “ಮಿಲೆಟ್ ಫುಡ್” ಎಂಬ ವಿಶೇಷ ಆಹಾರ ಮಳಿಗೆಯನ್ನು ಸ್ಥಾಪಿಸಿದೆ. ಈ ಉಪಕ್ರಮವು ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ (JKRLM) ಮತ್ತು ಗ್ರಾಸ್ ರೂಟ್ ಇನ್ನೋವೇಶನ್ ಆಗ್ಮೆಂಟೇಶನ್ ನೆಟ್ವರ್ಕ್ (GIAN) ಜಂಟಿ ಉದ್ಯಮವಾಗಿದ್ದು, ಅತಿಥಿಗಳಿಗೆ ಸಿರಿಧಾನ್ಯ ಆಹಾರವನ್ನು ನೀಡಲು ಮತ್ತು ಭವಿಷ್ಯದಲ್ಲಿ ಸ್ವಂತ ಘಟಕಗಳನ್ನು ಸ್ಥಾಪಿಸಲು ಸ್ವ-ಸಹಾಯ ಗುಂಪುಗಳ ಉದ್ಯಮಿಗಳಿಗೆ ಸರಿಯಾದ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.