ನವದೆಹಲಿ: ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ) ಯ ಸಶಕ್ತ ಕಾರ್ಯಪಡೆಯ (ಇಟಿಎಫ್) 11 ನೇ ಸಭೆಯ ಅಧ್ಯಕ್ಷತೆ ವಹಿಸಿದರು. ಇದರಲ್ಲಿ ಅವರು ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು.
ಅಲ್ಲದೇ ದೆಹಲಿಯಲ್ಲಿರುವ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ) ಕಚೇರಿಯಲ್ಲಿ ಮಾನಿಟರಿಂಗ್ ಸೆಂಟರ್ ‘PRAYAG’ ಪ್ರಾರಂಭಿಸಿದರು. ಇದು ಯಮುನಾ, ಗಂಗಾ ಮತ್ತು ಅವುಗಳ ಉಪನದಿಗಳ ನೈಜ-ಸಮಯದ ವಿಶ್ಲೇಷಣೆಗಾಗಿನ ವೇದಿಕೆಯಾಗಿದೆ. ಗಂಗಾ ತರಂಗ್ ಪೋರ್ಟಲ್, PMT ಟೂಲ್ ಡ್ಯಾಶ್ಬೋರ್ಡ್, ಗಂಗಾ ಡಿಸ್ಟ್ರಿಕ್ಟ್ ಪರ್ಫಾರ್ಮೆನ್ಸ್ ಮಾನಿಟರಿಂಗ್ ಸಿಸ್ಟಮ್, ನದಿ ನೀರಿನ ಗುಣಮಟ್ಟ ಇತ್ಯಾದಿಗಳನ್ನು ಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು PRAYAG ನೈಜ-ಸಮಯದ ಮಾನಿಟರಿಂಗ್ ಕೇಂದ್ರವಾಗಿದೆ.
ಕೇಂದ್ರ ಸಚಿವರು ‘ಚಾಚಾ ಚೌಧರಿ ಕೆ ಸಾಥ್, ಗಂಗಾ ಕಿ ಬಾತ್’ ಎಂಬ ಕಾಮಿಕ್ ಸರಣಿಯನ್ನು ಬಿಡುಗಡೆ ಮಾಡಿದರು.
ಸಭೆಯಲ್ಲಿ, ಶೇಖಾವತ್ ಅವರು ಗಂಗಾ ನದಿಯ ಉದ್ದಕ್ಕೂ ವಿವಿಧ ಕೈಗಾರಿಕೆಗಳ ಸಿಹಿನೀರಿನ ಬಳಕೆಯನ್ನು ಅಧ್ಯಯನ ಮಾಡಲು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳು, ಸಂಸ್ಕರಣಾಗಾರಗಳು, ರೈಲ್ವೆಗಳು ಮತ್ತು ಇತರ ಕೈಗಾರಿಕೆಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಮರುಬಳಕೆ ಮಾಡಲು ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.