ನವದೆಹಲಿ: ಸುಡಾನ್ನಲ್ಲಿನ ಅರೆಸೇನಾಪಡೆಗಳು ಮತ್ತು ನಿಯಮಿತ ಸೈನ್ಯವು ಪರಸ್ಪರರ ನೆಲೆಗಳ ಮೇಲೆ ದಾಳಿಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಭಾರತೀಯರಿಗೆ ಮನೆಯಲ್ಲೇ ಇರುವಂತೆ ಮತ್ತು ಮನೆ ಬಿಟ್ಟು ಹೊರಬರದಂತೆ ಭಾರತ ಸಲಹೆ ನೀಡಿದೆ.
ಸುಡಾನ್ ರಾಜಧಾನಿಯಲ್ಲಿ ಸ್ಫೋಟಗಳು ಮತ್ತು ಗುಂಡಿನ ದಾಳಿಗಳು ನಡೆದ ಬಳಿಕ ಆ ಆಫ್ರಿಕನ್ ರಾಷ್ಟ್ರದಲ್ಲಿನ ಭಾರತೀಯ ಮಿಷನ್ನಲ್ಲಿ ಆಶ್ರಯ ಪಡೆಯುವಂತೆ ಭಾರತೀಯರಿಗೆ ಕರೆ ನೀಡಲಾಗಿದೆ.
“ವರದಿಯಾದ ಗುಂಡಿನ ದಾಳಿಗಳು ಮತ್ತು ಘರ್ಷಣೆಗಳ ದೃಷ್ಟಿಯಿಂದ, ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ, ಮನೆಯೊಳಗೆ ಉಳಿಯಿರಿ ಮತ್ತು ತಕ್ಷಣದಿಂದ ಹೊರಗೆ ಹೋಗುವುದನ್ನು ನಿಲ್ಲಿಸಿ. ದಯವಿಟ್ಟು ಶಾಂತವಾಗಿರಿ ಮತ್ತು ಮಾಹಿತಿಗಳನ್ನು ಪಾಲಿಸುತ್ತಿರಿ” ಎಂದು ಖಾರ್ಟೂಮ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಟ್ವೀಟ್ ಮಾಡಿದೆ.
ಸೇನಾ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೈನಿಕ ಕಮಾಂಡರ್ ಮೊಹಮ್ಮದ್ ಹಮ್ದಾನ್ ಡಾಗ್ಲೋ ನಡುವೆ ಉದ್ವಿಗ್ನತೆಯ ನಂತರ ಶನಿವಾರ ಸುಡಾನ್ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್ಎಸ್ಎಫ್)ಗಳನ್ನು ನಿಯಮಿತ ಸೈನ್ಯದೊಂದಿಗೆ ಏಕೀಕರಣಗೊಳಿಸಲು ಮುಂದಾಗಿರುವುದೇ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ.
NOTICE TO ALL INDIANS
IN VIEW OF REPORTED FIRINGS AND CLASHES, ALL INDIANS ARE ADVISED TO TAKE UTMOST PRECAUTIONS, STAY INDOORS AND STOP VENTURING OUTSIDE WITH IMMEDIATE EFFECT. PLEASE ALSO STAY CALM AND WAIT FOR UPDATES.
— India in Sudan (@EoI_Khartoum) April 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.