ಬೆಂಗಳೂರು: ಮಾಧ್ಯಮಗಳಲ್ಲಿ ಬಿತ್ತರಿಸಿದ ಇತ್ತೀಚಿನ ಸ್ಟಿಂಗ್ ಆಪರೇಷನ್ನಲ್ಲಿ ಗೌರಿಬಿದನೂರಿನ ಶಾಸಕ ಶಿವಶಂಕರ್ ರೆಡ್ಡಿ ಅವರು ಬಹುರಾಷ್ಟ್ರೀಯ ಕೇಬಲ್ ಕಂಪೆನಿಯ ಪ್ರತಿನಿಧಿಗಳಿಗೆ ಒಎಫ್ಸಿ ಕೇಬಲ್ ಹಾಕಲು ಒಂದು ಕಿಮೀಗೆ 2 ಲಕ್ಷ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮತ್ತು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಆರೋಪಿಸಿದರು. ಈ ಕುರಿತು ಲೋಕಾಯುಕ್ತಕ್ಕೆ ದೂರು ಕೊಡಲಾಗಿದೆ ಎಂದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮ್ಮ ಸಹಾಯಕ ಈರಣ್ಣನಿಗೆ ಹಣ ಕೊಡಲು ಹೇಳಿದ್ದು, ಅದೇ ಕೊಠಡಿಯಲ್ಲಿ ಹಣ ಪಡೆದುಕೊಂಡಿರುವುದು ಪ್ರಸಾರವಾಗಿದೆ. ಸ್ಟಿಂಗ್ ಆಪರೇಷನ್ನಲ್ಲಿ ಕಾಂಗ್ರೆಸ್ನ ಹಲವಾರು ಎಂಎಲ್ಎಗಳ ಭ್ರಷ್ಟಾಚಾರ ಪ್ರಕರಣಗಳು ಪತ್ತೆಯಾಗಿವೆ. ಸ್ಟಿಂಗ್ ಆಪರೇಷನ್ ಕುರಿತು ತನಿಖೆ ಆಗಬೇಕು; ಎಫ್ಐಆರ್ ದಾಖಲಿಸಿ ಆಪಾದಿತನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಲೋಕಾಯುಕ್ತರನ್ನು ಇವತ್ತು ಭೇಟಿ ಮಾಡಿದ್ದು, ದೂರನ್ನು ಎಸ್ಪಿಗೆ ನೀಡಲು ತಿಳಿಸಿದ್ದಾರೆ. ಇದರ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಎಸ್ಪಿಗೆ ದೂರು ನೀಡಿದ್ದೇವೆ ಎಂದ ಅವರು, ಬೆಂಗಳೂರು ಮತ್ತು ಕರ್ನಾಟಕವು ಬಹುದೊಡ್ಡ ಹೆಮ್ಮೆಯ ತಾಣ, ಇಲ್ಲಿ ಸುಲಭವಾಗಿ ವ್ಯಾಪಾರ ವಹಿವಾಟು ಮಾಡಬಹುದೆಂದು ನಾವು ಹೇಳುತ್ತೇವೆ. ಆದರೆ, ಹೀಗಾಗುತ್ತಿರುವುದು ದುರದೃಷ್ಟಕರ ಸಂಗತಿ. ಅಂತರರಾಷ್ಟ್ರೀಯ ಕಂಪೆನಿಗೆ ಇಲ್ಲಿ ಬರಲು ತಿಳಿಸಿ ಈ ರೀತಿ ಹಣ ಕೇಳುತ್ತಿರುವುದು ಬೇಸರ ತಂದಿದೆ ಎಂದರು.
ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದರು. ಹಣಕ್ಕೆ ಬೇಡಿಕೆ, ಕೊಡಲು ಒಪ್ಪಿದ್ದು ಮತ್ತು ಹಣ ನೀಡುವ ಕಾರ್ಯ ಒಂದೇ ಕೊಠಡಿಯಲ್ಲಿ ನಡೆದಿದೆ. ಆದ್ದರಿಂದ ಇದು ಸ್ಪಷ್ಟವಾಗಿ ಸಾಕ್ಷ್ಯಾಧಾರಗಳ ಜೊತೆ ಗೋಚರವಾಗುವ ಪ್ರಕರಣ. ಮಾಡಾಳ್ ವಿರೂಪಾಕ್ಷ ಅವರಿಗೆ ಅನ್ವಯವಾಗುವ ಕಾನೂನು ಇವರಿಗೂ ಅನ್ವಯ ಆಗಲಿ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.