ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ಸಾರ್ವಜನಿಕರಿಗೆ ಮುಕ್ತವಾದ ಮೊದಲ ಏಳು ದಿನಗಳಲ್ಲಿ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೂಗಾರಿಕೆ ಇಲಾಖೆಯ ಪ್ರಕಾರ, ಮಾರ್ಚ್ 19 ರಂದು ಉದ್ಯಾನವನ್ನು ತೆರೆದಾಗಿನಿಂದ ಸುಮಾರು 1,15,000 ಪ್ರವಾಸಿಗರು ಭೇಟಿ ನೀಡಿದ್ದಾರೆ, ಅದು ಪ್ರಾರಂಭದ ಮೂರನೇ ದಿನದಲ್ಲಿ 35,000 ಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.
2022 ರಲ್ಲಿ ಟುಲಿಪ್ ಉದ್ಯಾನವು ಸುಮಾರು 3.6 ಲಕ್ಷ ದಾಖಲೆ ಸಂಖ್ಯೆಯ ಪ್ರವಾಸಿಗರಿಗೆ ಸಾಕ್ಷಿಯಾಗಿತ್ತು. ಈ ಬಾರಿ ಇದು ಕಳೆದ ವರ್ಷದ ಸಂಖ್ಯೆಯನ್ನು ದಾಟುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಟುಲಿಪ್ ಗಾರ್ಡನ್ನ ಫ್ಲೋರಿಕಲ್ಚರ್ ಅಧಿಕಾರಿ ಶೇಕ್ ರಸೂಲ್ ಹೇಳಿದ್ದಾರೆ.
ಈ ಉದ್ಯಾನ ಶ್ರೀನಗರದ ಜಬರ್ವಾನ್ ಬೆಟ್ಟಗಳ ನಡುವೆ ವಿಶ್ವಪ್ರಸಿದ್ಧ ದಾಲ್ ಸರೋವರದ ದಡದಲ್ಲಿದೆ ಮತ್ತು ಈ ವರ್ಷ ಇದು 68 ಪ್ರಭೇದಗಳ 16 ಲಕ್ಷಕ್ಕೂ ಹೆಚ್ಚು ಟುಲಿಪ್ ಗಿಡಗಳನ್ನು ಹೊಂದಿದೆ. ಸುಮಾರು 500 ಮಂದಿ ತೋಟಗಾರರು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸಿ ಸಾರ್ವಜನಿಕರಿಗೆ ಉದ್ಯಾನ ಸಿದ್ಧಗೊಳಿಸಿದ್ದಾರೆ.
ಟುಲಿಪ್ ಉದ್ಯಾನವು ವಸಂತ ಋತುವಿನಲ್ಲಿ ಕಾಶ್ಮೀರ ಕಣಿವೆಗೆ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಈ ವರ್ಷ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮವನ್ನು ಶೀಘ್ರವೇ ಗರೊಗೆದರುವಂತೆ ಮಾಡಿದೆ, ಸಾಮಾನ್ಯವಾಗಿ ಏಪ್ರಿಲ್ ಕೊನೆಯ ವಾರದಲ್ಲಿ ಕಣಿವೆ ಪ್ರವಾಸೋದ್ಯಮ ಪ್ರಾರಂಭವಾಗುತ್ತದೆ.
ಉದ್ಯಾನವನ್ನು ಸಾಮಾನ್ಯವಾಗಿ ಏಪ್ರಿಲ್ ಮೊದಲ ವಾರದಲ್ಲಿ ಸಾರ್ವಜನಿಕರಿಗೆ ತೆರೆದಿಡಲಾಗುತ್ತದೆ. ಆದರೆ ಈ ಬಾರಿ ಮಾರ್ಚ್ನಲ್ಲೇ ತೆರೆಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.