ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿದಾಗ ಕಾಂಗ್ರೆಸ್ನ ಯಾವೊಬ್ಬ ಖ್ಯಾತ ವಕೀಲರೂ ಯಾಕೆ ಅವರ ಸಹಾಯಕ್ಕೆ ಬರಲಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಮಂಗಳವಾರ ಪ್ರಶ್ನಿಸಿದ್ದು, ಇದು ಉದ್ದೇಶಪೂರ್ವಕ ಮತ್ತು ಪಕ್ಷದೊಳಗಿನ ಪಿತೂರಿಯ ಭಾಗವೇ ಎಂದು ಪ್ರಶ್ನಿಸಿದ್ದಾರೆ.
ಠಾಕೂರ್ ಅವರು ‘ಟೈಮ್ಸ್ ನೆಟ್ವರ್ಕ್ ಇಂಡಿಯಾ ಡಿಜಿಟಲ್ ಫೆಸ್ಟ್’ ಅನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಈ ಹೇಳಿಕೆಯನ್ನು ನೀಡಿದ್ದಾರೆ.
ಗಾಂಧಿಯನ್ನು ಸರಣಿ ಅಪರಾಧಿ ಎಂದು ಬಣ್ಣಿಸಿದ ಅವರು, ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ ನಂತರವೂ ವಿವಿಧ ನ್ಯಾಯಾಲಯಗಳಲ್ಲಿ ಏಳು ಮಾನನಷ್ಟ ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ ಎಂದಿದ್ದಾರೆ.
ರಾಹುಲ್ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸುವಲ್ಲಿ ಸರ್ಕಾರ ಅಥವಾ ಲೋಕಸಭೆಯ ಕಾರ್ಯದರ್ಶಿಯವರ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಕ್ಷಣದಲ್ಲಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಯಿತು ಎಂದು ಠಾಕೂರ್ ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯಸಭೆಗೆ ಕಳುಹಿಸಿದ ಖ್ಯಾತ ವಕೀಲರಲ್ಲಿ ಯಾರೊಬ್ಬರೂ ಅನರ್ಹಗೊಂಡ ಸಂದರ್ಭದಲ್ಲಿ ರಾಹುಲ್ ಅವರ ಸಹಾಯಕ್ಕೆ ಯಾಕೆ ಬರಲಿಲ್ಲ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
“ಇದು ಉದ್ದೇಶಪೂರ್ವಕವೇ? ಕಾಂಗ್ರೆಸ್ನ ಷಡ್ಯಂತ್ರದ ಭಾಗವೇ? ಒಂದು ಗಂಟೆಯೊಳಗೆ ಇಡೀ ವಕೀಲರು ಪವನ್ ಖೇರಾ ಅವರ ರಕ್ಷಣೆಗೆ ಬಂದಿದ್ದರು, ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಂಬಲಿಸಿ ನ್ಯಾಯಾಲಯಕ್ಕೆ ಯಾರೂ ಯಾಕೆ ಹೋಗಲಿಲ್ಲ ಡಂಬುದು ದೊಡ್ಡ ಪ್ರಶ್ನೆ” ಎಂದಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಸಂಚು ರೂಪಿಸಿದ ಈ ವ್ಯಕ್ತಿಗಳು ಯಾರು ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.