ನವದೆಹಲಿ: 2017 ಮತ್ತು 2021 ರ ನಡುವೆ ದೇಶದಲ್ಲಿ ಅರಣ್ಯ ಪ್ರದೇಶವು 5500 ಚದರ ಕಿಲೋಮೀಟರ್ಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಗುರುವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ವರದಿಯ ಪ್ರಕಾರ, ಕೆಲವು ರಾಜ್ಯಗಳು ಅರಣ್ಯ ಪ್ರದೇಶದಲ್ಲಿ ಹೆಚ್ಚಳವನ್ನು ತೋರಿಸಿದರೆ ಇನ್ನು ಕೆಲವು ರಾಜ್ಯಗಳು ಅರಣ್ಯ ಪ್ರದೇಶದಲ್ಲಿ ಕುಸಿತವನ್ನು ತೋರಿಸಿವೆ ಎಂದು ಅವರು ಹೇಳಿದರು.
ಸಂರಕ್ಷಣಾ ಕ್ರಮಗಳು, ಅರಣ್ಯೀಕರಣ ಚಟುವಟಿಕೆಗಳು, ಪ್ಲಾಂಟೇಶನ್ನಲ್ಲಿ ಹೆಚ್ಚಿನ ರಕ್ಷಣಾ ಕ್ರಮಗಳು ಮತ್ತು ಅರಣ್ಯದ ಹೊರಗೆ ಮರಗಳ ವಿಸ್ತರಣೆಯಿಂದಾಗಿ ಅರಣ್ಯ ಪ್ರದೇಶದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಚೌಬೆ ಹೇಳಿದರು.
ಅರಣ್ಯಗಳು ಹಲವಾರು ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತವೆ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡುತ್ತವೆ ಎಂದ ಅವರು, ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲು ಮತ್ತು ದೇಶದಲ್ಲಿ ಅರಣ್ಯವನ್ನು ಹೆಚ್ಚಿಸಲು ಅರಣ್ಯೀಕರಣ ಮತ್ತು ಮರ ನೆಡುವ ಚಟುವಟಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತವೆ ಎಂದು ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.