ನವದೆಹಲಿ: ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಸ್ಪೂರ್ತಿಯ ಮಹಾನ್ ಅಭಿವ್ಯಕ್ತಿಯನ್ನು ಪ್ರದರ್ಶಿಸಿರುವ ಪಂಜಾಬಿ ಗಾಯಕ ಸ್ನೇಹದೀಪ್ ಸಿಂಗ್ ಕಲ್ಸಿ ಅವರು ಜನಪ್ರಿಯ ಹಾಡು ಕೇಸರಿಯಾವನ್ನು 5 ವಿವಿಧ ಭಾಷೆಗಳಲ್ಲಿ ಹಾಡಿ ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿದ್ದಾರೆ.
ವೈರಲ್ ವಿಡಿಯೋ ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನೂ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗಾಯಕ ಹಾಡುತ್ತಿರುವ ವೀಡಿಯೊವನ್ನು ಅದ್ಭುತ ಶೀರ್ಷಿಕೆಯೊಂದಿಗೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ಪ್ರತಿಭಾವಂತ ಸ್ನೇಹದೀಪ್ ಸಿಂಗ್ ಕಲ್ಸಿ ಅವರಿಂದ ಈ ಅದ್ಭುತ ನಿರೂಪಣೆಯನ್ನು ಕಂಡೆ. ಮಾಧುರ್ಯದ ಜೊತೆಗೆ, ಇದು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಸ್ಪೂರ್ತಿಯ ಒಂದು ದೊಡ್ಡ ಅಭಿವ್ಯಕ್ತಿಯಾಗಿದೆ” ಎಂದಿದ್ದಾರೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದ ಜನಪ್ರಿಯ ಟ್ರ್ಯಾಕ್ ಅನ್ನು ಸ್ನೇಹದೀಪ್ ಹಾಡಿದ್ದಾರೆ. ಈ ಹಾಡನ್ನು ಮೂಲತಃ ಅರಿಜಿತ್ ಸಿಂಗ್ ಹಾಡಿದ್ದಾರೆ. ಸ್ನೇಹದೀಪ್ ಅವರು ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸುಂದರವಾದ ಟ್ರ್ಯಾಕ್ ಅನ್ನು ಹಾಡಿ ಕುಣಿಯುವ ಮೂಲಕ ಜನರನ್ನು ಮಂತ್ರಮುಗ್ಧಗೊಳಿಸಿದರು.
ಪ್ರಧಾನಿ ಟ್ವಿಟ್ಗೆ ಸಂಸತ ವ್ಯಕ್ತಪಡಿಸಿರುವ ಸ್ನೇಹದೀಪ್, “ಅಭಿನಂದನೆಗೆ ತುಂಬಾ ಧನ್ಯವಾದಗಳು ಸರ್. ಈ ಹಾಡು ನಿಮ್ಮನ್ನು ತಲುಪಿದ್ದಕ್ಕಾಗಿ ಮತ್ತು ನೀವು ಅದನ್ನು ಆನಂದಿಸಿದ್ದಕ್ಕಾಗಿ ತುಂಬಾ ಸಂತೋಷವಾಯಿತು” ಎಂದಿದ್ದಾರೆ.
ಈ ಹಿಂದೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಯುವ ಗಾಯಕನ ಪ್ರತಿಭೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. “ಸುಂದರವಾಗಿದೆ. ಇದು ಒಡೆಯಲಾಗದ, ಅಖಂಡ ಭಾರತ ಧ್ವನಿಸುತ್ತದೆ” ಎಂದಿದ್ದರು.
Thank you so much for the appreciation sir. Means a lot. So glad it reached you and you enjoyed it 🙏🏻 https://t.co/8PNl6Bofqi
— Snehdeep Singh Kalsi (@SnehdeepSK) March 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.