News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ವಿಶ್ವದ ಜ್ಞಾನ ಆಧಾರಿತ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ: ಜಿತೇಂದ್ರ ಸಿಂಗ್ 

ನವದೆಹಲಿ:  ಭಾರತವು ವಿಶ್ವದ ಜ್ಞಾನ ಆಧಾರಿತ ಆರ್ಥಿಕತೆಯಾಗಿ ವೇಗವಾಗಿ ಹೊರಹೊಮ್ಮುತ್ತಿದೆ  ಮತ್ತು ಕಳೆದ ಕೆಲವು ವರ್ಷಗಳಿಂದ ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಸಿಐಐ ಪಾಲುದಾರಿಕೆ ಶೃಂಗಸಭೆಯ 28ನೇ ಆವೃತ್ತಿಯ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ದೇಶದ ನಾವೀನ್ಯತೆಯ ಬೆಳವಣಿಗೆ ಅದರ ಕೈಗಾರಿಕಾ ವಲಯಗಳನ್ನು ರೂಪಿಸಲು ಮತ್ತು ಉಳಿಸಿಕೊಳ್ಳಲು, ಆರ್ಥಿಕ ಬೆಳವಣಿಗೆ, ಉದ್ಯೋಗಗಳು, ಸಂಪತ್ತು ಸೃಷ್ಟಿ ಮತ್ತು ಕಾರ್ಯತಂತ್ರದ ಅಂಚನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕವು ವ್ಯಾಪಾರ ಜಗತ್ತಿಗೆ ಪ್ರಮುಖ ಪಾಠವನ್ನು ಕಲಿಸಿದ್ದು, ನಾವಿನ್ಯತೆ ಅನಿವಾರ್ಯವಾಗಿದೆ. ಅಮೃತ ಕಾಲದ ಮೊದಲ ವರ್ಷದಲ್ಲಿ ಭಾರತವು ಒಂದು ಮಿಷನ್‌ ಮೋಡ್‌ನಲ್ಲಿದೆ ಮತ್ತು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಆಕಾಂಕ್ಷೆಯನ್ನು ಸಾಧಿಸುವತ್ತ ಈ ಮಿಷನ್ ತಂತ್ರಜ್ಞಾನ-ಚಾಲಿತವಾಗಿದೆ. ಆದ್ದರಿಂದ ಸಾಮಾಜಿಕ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಈ ಹಂತದಲ್ಲಿ ತಂತ್ರಜ್ಞಾನವು ಕೇಂದ್ರ ಹಂತದಲ್ಲಿರುತ್ತದೆ ಎಂದು ಡಾ. ಸಿಂಗ್ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top