ಬೆಳಗಾವಿ: ಇಂದು ಬಿಜೆಪಿಗೆ ಶುಭ ದಿನ ಯಾಕೆಂದರೆ ತ್ರಿಪುರ, ನಾಗಾಲ್ಯಾಂಡ್, ಮೇಘಾಲಯದ ಫಲಿತಾಂಶ ಹೊರಬೀಳುತ್ತಿದೆ. ತ್ರಿಪುರ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಮೇಘಾಲಯದಲ್ಲಿ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಂದು ಅವರು ಬೆಳಗಾವಿಯಲ್ಲಿ ವಿಜಯ ಸಂಕಲ್ಪ ರಥಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಪರಂಪರೆ ಮತ್ತು ಆಧುನಿಕತೆಯ ಒಂದು ಅಮೂಲ್ಯ ಸಂಗಮವಿದೆ. ಭಗವಾನ್ ಬಸವೇಶ್ವರರು ಕರ್ನಾಟಕದ ಕಣ ಕಣದಲ್ಲೂ ಇದ್ದಾರೆ. ವಿದೇಶದಲ್ಲೂ ಬಸವೇಶ್ವರರ ಬಗ್ಗೆ ಚರ್ಚೆಗಳು ನಡೆಯುತ್ತವೆ. ಮಹಾನ್ ಕವಿಗಳನ್ನು ಕಂಡ ನಾಡಿದು. ರನ್ನ, ಪಂಪರ ಗುಣಗಾನ ಈಗಲೂ ನಡೆಯುತ್ತಿದೆ. ಅಕ್ಕಮಹಾದೇವಿಯ ನಾಡಿದು. ರಾಣಿ ಚೆನ್ನಮ್ಮಳ ಸಾಹಸಗಾಥೆಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಚರ್ಚೆ ಮಾಡಲಾಗುತ್ತದೆ. ಇಂತಹ ಪುಣ್ಯ ಭೂಮಿ ಕರ್ನಾಟಕ ಎಂದರು.
ನಾವು ಮತ್ತೊಮ್ಮೆ ಬಹುಮತದೊಂದಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ನವ ಕರ್ನಾಟಕದ ನಿರ್ಮಾಣ ಮಾಡಲಿದ್ದೇವೆ. ಈ ಬಗ್ಗೆ ನಾವೆಲ್ಲ ದೃಢ ಸಂಕಲ್ಪ ಮಾಡಬೇಕಿದೆ. ಬೆಳಗಾವಿ ಕರ್ನಾಟಕದ ಶಿರವಾಗಿದೆ. ಯಡಿಯೂರಪ್ಪ ಅವರ ಬಳಿಕ ಸಜ್ಜನ, ನೇರ ವ್ಯಕ್ತಿತ್ವದ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದಿದ್ದೇವೆ. ಯಡಿಯೂರಪ್ಪ ಅವರ ಕೊಡುಗೆಯನ್ನು ನಾವು ಕೊಂಡಾಡಬೇಕು. ಅವರು ಕರ್ನಾಟಕ ಮತ್ತು ಬಿಜೆಪಿಯ ಮಹಾನ್ ನಾಯಕ. ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ ಬಳಿಕ ನರೇಂದ್ರ ಮೋದಿ ಮತ್ತು ನಾವೆಲ್ಲ ಸೇರಿ ಅವರನ್ನು ಸಂಸದೀಯ ಮಂಡಳಿಯಲ್ಲಿ ನೇಮಿಸುವ ನಿರ್ಧಾರ ಮಾಡಿದೆವು. ಅವರು ಕರ್ನಾಟಕದ ಸೇವೆ ಮಾಡಿದ್ದಾರೆ. ಅವರನ್ನು ಬಿಜೆಪಿ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.