ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಅವರು ಭಾರತ ಪ್ರವಾಸದಲ್ಲಿರುವ ಡೆನ್ಮಾರ್ಕ್ ರಾಜಕುಮಾರ ಫ್ರೆಡೆರಿಕ್ ಮತ್ತು ಡೆನ್ಮಾರ್ಕ್ ರಾಜಕುಮಾರಿ ಮೇರಿ ಎಲಿಜಬೆತ್ ಅವರನ್ನು ಇಂದು ಭೇಟಿಯಾದರು.
ಭೇಟಿಯ ಸಂದರ್ಭದಲ್ಲಿ ವಿಶೇಷವಾಗಿ ಸುಸ್ಥಿರತೆ ಮತ್ತು ಡಿಜಿಟಲ್ ವಿತರಣೆ ಕುರಿತು ಸಂವಾದ ನಡೆಸಲಾಗಿದೆ ಎಂದು ಡಾ.ಜೈಶಂಕರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ನವ ಭಾರತದ ವಿವಿಧ ಅಂಶಗಳನ್ನು ರಾಜಮನೆತನದ ದಂಪತಿಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಹಸಿರು ಕಾರ್ಯತಂತ್ರದ ಪಾಲುದಾರಿಕೆಯು ಪ್ರೇರಕ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಡ್ಯಾನಿಶ್ ರಾಯಲ್ ದಂಪತಿಗಳು ನಾಲ್ಕು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ದಂಪತಿಗಳು ನಿನ್ನೆ ನವದೆಹಲಿಗೆ ಆಗಮಿಸಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Delighted to call on their Royal Highness, Crown Prince Frederik and Princess Mary Elizabeth of Denmark during their India visit.
Shared with them various aspects of the New India in making. Our conversation covered sustainability and digital delivery in particular. pic.twitter.com/2k5UZ4oYpw
— Dr. S. Jaishankar (@DrSJaishankar) February 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.