ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಆಯೋಜಿತವಾಗಿರುವ ಐದನೇ ಆವೃತ್ತಿಯ ಎರಡು ದಿನಗಳ ಮಂಗಳೂರು ಲಿಟ್ ಫೆಸ್ಟ್ ಇಂದು ನಗರದ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಆರಂಭಗೊಂಡಿದೆ. ಮಿಥಿಕ್ ಸೊಸೈಟಿ ಮತ್ತು ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಗೌರವ ಕಾರ್ಯದರ್ಶಿ ವಿ.ನಾಗಾರಾಜ್ ದೀಪ ಪ್ರಜ್ವಲನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮದ ಅಧ್ಯಕ್ಷ ನಿಟ್ಟಿ ವಿಶ್ವವಿದ್ಯಾಲಯದ ಕುಲಪತಿ ವಿನಯ್ ಹೆಗ್ಡೆ ಅವರು ಮಾತನಾಡಿ, “ನಮ್ಮ ದೇಶದ ವಿಚಾರಗಳನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿರುವ ಭಾರತ್ ಫೌಂಡೇಶನ್ ಕಾರ್ಯ ಶ್ಲಾಘನೀಯ. ಭಾರತವೊಂದು ವಿಶೇಷ ರಾಷ್ಟ್ರ, ಅದರಲ್ಲೂ ಮಂಗಳೂರು ಅತ್ಯಂತ ವಿಶೇಷ ನಗರ. ಭಾರತದ ಯಾವ ಸ್ಥಳದಲ್ಲೂ ಇರದ ವಿಷಯಗಳು ಮಂಗಳೂರಿನಲ್ಲಿವೆ. ವಿದ್ಯೆ, ಆರೋಗ್ಯ, ಉದ್ಯೋಗದಲ್ಲಿ ಮುಂಚೂಣಿಯಲ್ಲಿದೆ. ನಾನಿದನ್ನು ದೇವರ ಭೂಮಿ ಎಂದು ವಿಮರ್ಶಿಸುತ್ತೇನೆ. ಎಲ್ಲಾ ಸಮಾಜದವರು ಮಂಗಳೂರಿಗೆ ವಿಶೇಷತೆ ಮತ್ತು ಅನ್ಯೋನ್ಯತೆಯನ್ನು ತಂದಿದ್ದಾರೆ. ದೇಶದಲ್ಲೇ ವಿಶೇಷ ಮತ್ತು ಶ್ರೇಷ್ಠ ಸ್ಥಳ ಮಂಗಳೂರು. ಇಂತಹ ಮಂಗಳೂರನ್ನು ಗುರುತಿಸುವ ಕಾರ್ಯವನ್ನು ಭಾರತ್ ಫೌಂಡೇಶನ್ ಮಾಡಿದೆ” ಎಂದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷರಾದ ಶ್ರೀ ತುಕಾರಾಮ್ ಪೂಜಾರಿ ಅವರಿಗೆ ಜೀವಮಾನ ಶ್ರೇಷ್ಠ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಬಳಿಕ ಮಾತನಾಡಿದ ವಿ.ನಾಗರಾಜ್,” ಭಾರತ ಫೌಂಡೇಶನ್ನ ಈ ಲಿಟ್ ಫೆಸ್ಟ್ ಕಾರ್ಯಕ್ರಮದ ಮೂಲ ಸೂತ್ರ ಐಡಿಯಾ ಆಫ್ ಭಾರತ್. ಅಂದರೆ ಭಾರತದ ವಿಚಾರಗಳನ್ನು ಮುಂದಿಡುವ ಕಾರ್ಯ. ಸರಸ್ವತಿ (ಪುಸ್ತಕ)ಯನ್ನು ಪಲ್ಲಕ್ಕಿಯಲ್ಲಿ ಹೊತು ತಂದು ಕಾರ್ಯಕ್ರಮ ಆರಂಭಿಸಿರುವುದು ಶ್ಲಾಘನೀಯ. ಲಿಟ್ ಫೆಸ್ಟ್ ಎಂಬುದು ಸಂಸ್ಕೃತಿ, ವೈಚಾರಿಕತೆ ಬೆಳೆದಿರುವ ನಾಡಿನಲ್ಲಿ ಮಾತ್ರ ನಡೆಯಲು ಸಾಧ್ಯ. ಲಿಟ್ ಫೆಸ್ಟ್ ಎಂಬುದು ಆಯಾ ಕಾಲಖಂಡದ ವೈಚಾರಿಕತೆ, ಸಾಹಿತ್ಯ, ಕಲಾ ಪ್ರಕಾರವನ್ನು ಮತ್ತು ಅದರ ಸೃಷ್ಟಿಕರ್ತರನ್ನು ಪ್ರತಿಬಿಂಬಿಸುತ್ತದೆ. ಇದು ರಾಷ್ಟ್ರದ ಸ್ಪೂರ್ತಿಯನ್ನು ಪ್ರತಿಬಿಂಬಿಸುತ್ತದೆ. ಅನೇಕ ದಶಕಗಳಿಂದ ನಮ್ಮ ದೇಶದಲ್ಲಿ ನಮ್ಮದಲ್ಲದ ವಿಚಾರಧಾರೆಯನ್ನು ನಮ್ಮದಾಗಿಸುವ ಪ್ರಯತ್ನ ನಡೆಯುತ್ತಾ ಬಂದಿತು. ಆದರೆ ಆಗಲೂ ಅನೇಕರು ನಮ್ಮದೇ ಆದ ವಿಚಾರಧಾರೆಗಳಿಂದ ಸಾಹಿತ್ಯ ರಚಿಸಿದರು. ಇದರಿಂದಾಗಿ ನಮ್ಮತನ ಉಳಿದುಕೊಂಡಿತು. ಅದು ಇಂದು ಹೆಚ್ಚು ಹೆಚ್ಚು ಮುನ್ನಲೆಗೆ ಬರುತ್ತಿದೆ. ಲಿಟ್ ಫೆಸ್ಟ್ ಉದ್ದೇಶ ಪರಂಪರಾಗತವಾದ ನಮ್ಮ ವಿಚಾರಗಳು, ಚಿಂತನೆಗಳನ್ನು ಕಾಲಕ್ಕೆ ತಕ್ಕಂತೆ ಮಾರ್ಪಾಟು ಮಾಡುವುದು. 5000 ವರ್ಷಗಳ ಕಾಲ ನಮ್ಮ ಸಂಸ್ಕೃತಿ ನಿರಂತರವಾಗಿ ಬೆಳೆದುಕೊಂಡು ಬಂದಿದೆ. ಬೇರೆ ಯಾವ ದೇಶದಲ್ಲೂ ಕಾಣದ ಸಾಂಸ್ಕೃತಿಕ ನಿರಂತರತೆ ನಮ್ಮಲ್ಲಿ ಇದೆ. ಅದೆಷ್ಟೋ ದಾಳಿಗಳು ನಡೆದರೂ ನಮ್ಮ ಸಂಸ್ಕೃತಿ ಮುಂದುವರೆದುಕೊಂಡು ಬಂದಿದೆ. ಬೇರೆ ದೇಶಗಳಲ್ಲಿ ನಡೆದ ದಾಳಿಗಳು ಅಲ್ಲಿನ ಸಂಸ್ಕೃತಿಯನ್ನು ನಾಶಪಡಿಸಿದವು. ಭಾರತದಲ್ಲಿ ಹೀಗೆ ಆಗದಿರಲು ನಮ್ಮ ಜನಸಾಮಾನ್ಯರು ಕಾರಣ, ಅವರು ನಮ್ಮ ಮಣ್ಣಿನ ಸಂಸ್ಕೃತಿಯಲ್ಲಿ ಕೃಷಿ ಮಾಡಿದವರು. ಅವರಿಂದ ಭಾರತ ಸಾಂಸ್ಕೃತಿಕ ನಿರಂತರತೆಯನ್ನು ಕಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.