News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼವಸುಧೈವ ಕುಟುಂಬಕಂʼ ಧ್ಯೇಯದಂತೆ ಟರ್ಕಿ, ಸಿರಿಯಾಗೆ ಭಾರತ ನೆರವು

ನವದೆಹಲಿ:  ಭೂಕಂಪ ಪೀಡಿತ ಸಿರಿಯಾ ಮತ್ತು ಟರ್ಕಿಗೆ ಭಾರತವು ತನ್ನ ಪ್ರಾಚೀನ ಪರಂಪರೆ ವಸುಧೈವ ಕುಟುಂಬಕಂನ ಧ್ಯೇಯದೊಂದಿಗೆ ನೆರವು ನೀಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು  ಹೇಳಿದ್ದಾರೆ.

ಏಳು ಕೋಟಿ ರೂಪಾಯಿ ಮೌಲ್ಯದ ಜೀವರಕ್ಷಕ ಔಷಧಗಳು, ರಕ್ಷಣಾ ವಸ್ತುಗಳು ಮತ್ತು ಕ್ರಿಟಿಕಲ್ ಕೇರ್ ಉಪಕರಣಗಳನ್ನು ಒಳಗೊಂಡ ತುರ್ತು ಪರಿಹಾರ ಸಾಮಗ್ರಿಗಳನ್ನು ವ್ಯವಸ್ಥೆಗೊಳಿಸಿ, ಅವುಗಳನ್ನು ತ್ವರಿತವಾಗಿ ಎರಡೂ ದೇಶಗಳಿಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಪರೇಷನ್ ದೋಸ್ತ್ ಅಡಿಯಲ್ಲಿ, ರವಾನೆಯು 5,945 ಟನ್ ತುರ್ತು ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿದ್ದು, 27 ಜೀವ ಉಳಿಸುವ ಔಷಧಿಗಳನ್ನು ಮೊದಲ ಎರಡು ಭೂಕಂಪಗಳ 12 ಗಂಟೆಗಳ ಒಳಗೆ ಹೊಂದಿಸಿ ರವಾನಿಸಲಾಗಿದೆ ಎಂದಿದ್ದಾರೆ.

ನಂತರ ಫೆಬ್ರವರಿ 10 ರಂದು, 72 ಕ್ರಿಟಿಕಲ್ ಕೇರ್ ಡ್ರಗ್ಸ್ ಮತ್ತು 14 ರೀತಿಯ ವೈದ್ಯಕೀಯ ಮತ್ತು ಕ್ರಿಟಿಕಲ್ ಕೇರ್ ಉಪಕರಣಗಳನ್ನು ಒಳಗೊಂಡಿರುವ ಎರಡು ದೊಡ್ಡ ರವಾನೆಗಳನ್ನು ಸಿರಿಯಾ ಮತ್ತು ಟರ್ಕಿಗೆ ಕಳುಹಿಸಲಾಯಿತು ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top